
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಗ್ರಾಮೀಣಾ ಉಪ ವಿಭಾಗ ಕಚೇರಿಯ ವತಿಯಿಂದ ಗ್ರಾಹಕರ ಕುಂದು ಕೊರತೆ ಸಭೆ ಆಯೋಜನೆ ಮಾಡಲಾಗಿತ್ತು . ಸಭೆಯಲ್ಲಿ ವಿದ್ಯುತ್ ಸಮಸ್ಯೆ ಕುರಿತು ಗ್ರಾಹಕರು ಹಲವು ವಿಚಾರಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ವ್ಯಕ್ತಪಡಿಸಿದರು
ಸಭೆಯನ್ನು ತಾಲ್ಲೂಕಿನ ಕಾರ್ಯಪಾಲಕ ಇಂಜಿನಿಯರ್ ಧನಂಜಯ ರವರ ನೇತೃತ್ವದಲ್ಲಿ ಕರೆಯಲಾಗಿದ್ದು ಗ್ರಾಹಕರ ಸಮಸ್ಯೆಗಳಿಗೆ ಸೂಕ್ತ ಸೇವೆ ಒದಗಿಸುವಂತೆ ಸೂಚನೆ ನೀಡಲಾಯಿತು .ಸಭೆಯಲ್ಲಿ ರೈತರು ಮಾತನಾಡಿ ವಿದ್ಯುತ್ ಸರಬರಾಜು ಮಾಡುವಲ್ಲಿ ವ್ಯತ್ಯಯ ವಾಗುತ್ತಿದ್ದು ಅವಶ್ಯಕವಿರುವ ವಿಧ್ಯುತ್ ಸಹ ಸಿಗುತ್ತಿಲ್ಲ ಕನಿಷ್ಠ ಪಕ್ಷ 7 ಗಂಟೆಗಳ ವಿಧ್ಯುತ್ ಸರಬರಾಜು ಒದಗಿಸುವ ಮೂಲಕ ರೈತರಿಗೆ ಸಹಕರಿಸುವಂತೆ ಮನವಿ ಮಾಡಿದರು
ರೈತರ ಹಾಗೂ ಗ್ರಾಹಕರ ಮನವಿಗೆ ಸ್ಥಳೀಯ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಸಾಸಲು ಶಾಖಾ ಅಧಿಕಾರಿ ಮಣಿ ನಾಯಕ್, ದೊಡ್ಡಬೆಳವಂಗಲ ಶಾಖಾ ಅಧಿಕಾರಿ ಜಯರಾಜ್ ಅಧಿಕಾರಿಗಳ ವಿರುದ್ಧ ಹಲವು ಆರೋಪ ಮಾಡಿದರು .
ತಂಬೇನಹಳ್ಳಿ ಗ್ರಾಮಸ್ಥರು ಮಾತನಾಡಿ ಗ್ರಾಮದಲ್ಲಿ ಹಲವು ಕಡೆ ವಿದ್ಯುತ್ ತಂತಿಗಳು ಕೆಳಗೆ ಬಂದಿರುವ ಕಾರಣ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿದೆ . ಈಗಾಗಲೇ ಒಂದು ಹಸು ವಿಧ್ಯುತ್ ಸ್ಪರ್ಶದಿಂದ ಪ್ರಾಣ ಕಳೆದು ಕೊಂಡಿದೆ ಈ ಕುರಿತು ಅಧಿಕಾರಿಗಳು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು . ಕಲ್ಲುದೇವನಹಳ್ಳಿ ಗ್ರಾಮಸ್ಥರು ಮಾತನಾಡಿ ಗ್ರಾಮದಲ್ಲಿ ಕಳೆದ 15 ದಿನಗಳಿಂದ ವಿದ್ಯುತ್ ಸಮಸ್ಯೆಯಿಂದ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಈ ಸಮಸ್ಯೆಗೆ ವಿದ್ಯುತ್ ಸರಬರಾಜು ಮುಖ್ಯ ಕಾರಣ ಎಂದು ತಿಳಿಸಿದರು
ಸಭೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಇನಾಯತ್ ಉಲ್ಲ ಖಾನ್,ಸೇರಿದಂತೆ ಎಲ್ಲಾ ಶಾಖಾ ಅಧಿಕಾರಿಗಳು ,ಮರಳೇನಹಳ್ಳಿ , ಚೆನ್ನವೀರನಹಳ್ಳಿ, ಬೂಚನಹಳ್ಳಿ ,ಹಳೇಕೋಟೆ, ತಂಬೇನ ಹಳ್ಳಿ ,ಸೇರಿದಂತೆ ಸುತ್ತಮುತ್ತಲಿನ ರೈತರು ,ಗ್ರಾಹಕರು ಉಪಸ್ಥಿತರಿದ್ದರು