
ದೊಡ್ಡಬಳ್ಳಾಪುರ : ಧರ್ಮದ ರಕ್ಷಣೆ ಹಾಗೂ ದೇಶಭಕ್ತಿಗೆ ಮತ್ತೊಂದು ಹೆಸರು ಛತ್ರಪತಿ ಶಿವಾಜಿ ಮಹಾರಾಜರು . .ಅವರ ಆಡಳಿತ ವೈಖರಿ ಸರ್ವರಿಗೂ ಮಾರ್ಗದರ್ಶಕ . ಇಂದಿನ ಯುವ ಸಮುದಾಯ ದೇಶಪ್ರೇಮ ಸ್ವಾಮಿನಿಷ್ಠೆ ಏನೆಂಬುದು ಛತ್ರಪತಿ ಶಿವಾಜಿ ಮಹಾರಾಜರಿಂದ ಕಲಿಯಬೇಕಿದೆ ಎಂದು ಬಿಜೆಪಿ ರಾಜ್ಯ ಯುವಘಟಕ ಅಧ್ಯಕ್ಷರು ಹಾಗೂ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು ತಿಳಿಸಿದರು .
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಇಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ವತಿಯಿಂದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು . ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶಾಸಕ ಧೀರಜ್ ಮುನಿರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ನಂತರ ಮಾತನಾಡಿದ ಅವರು ಶೌರ್ಯ ಸಾಹಸ ದೈರ್ಯಕ್ಕೆ ಪ್ರತಿರೂಪ ಶಿವಾಜಿ ಮಹಾರಾಜರು .ಮೊಘಲರಿಗೆ ಸಿಂಹಸ್ವಪ್ನವಾಗಿ ನಡುಕ ಹುಟ್ಟಿಸಿದ ಮಹಾವೀರರು ,ಇಂದಿನ ಪೀಳಿಗೆಗೆ ಇವರ ಪರಿಚಯದ ಅವಶ್ಯಕತೆ ಬಹಳ ಇದೆ ದೇಶಪ್ರೇಮ ಎಂದೇರೇನು ಎಂದು ಕೇಳುವ ಪ್ರತಿಯೊಬ್ಬರಿಗೂ ಶಿವಾಜಿ ಮಹಾರಾಜರ ಜೀವನವೇ ಉತ್ತಮ ಸಂದೇಶವಾಗಿದೆ .ಭಾರತ ದೇಶದ ಇತಿಹಾಸದಲ್ಲಿ ಅವರು ಅಜರಮರ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದರು
ತಾಲ್ಲೂಕು ದಂಡಾಧಿಕಾರಿಗಳಾದ ವಿಧ್ಯಾ ವಿಭಾ ರಾಥೋಡ್ ಮಾತನಾಡಿ ಶಿವಾಜಿ ಮಹಾರಾಜರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ವ್ಯಕ್ತಿ ಅಲ್ಲ , ಅವರು ಸರ್ವ ಭಾರತೀಯರ ಶಕ್ತಿ ,ಅವರ ದೇಶಪ್ರೇಮ ನಮ್ಮೆಲ್ಲರಿಗೂ ಮಾದರಿಯಾಗಿದೆ .ಇತಿಹಾಸದ ಪುಟಗಳಲ್ಲಿ ತಮ್ಮ ಶೌರ್ಯ ಪರಾಕ್ರಮಗಳಿಂದಲೇ ಹೆಚ್ಚು ಮನ್ನಣೆ ಪಡೆದಿರುವ ಮಹಾನ್ ವ್ಯಕ್ತಿ ಶಿವಾಜಿ ಮಹಾರಾಜರು,ಅವರ ನೈಪುಣ್ಯತೆ ,ಅಡಳಿತ ವೈಖರಿ , ನೇರ ನಿಲುವು , ದೈರ್ಯ ನಮ್ಮೆಲ್ಲರಿಗೂ ಆದರ್ಶ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಮುಖಂಡರಾದ ಖ್ಯಾತ ವಕೀಲರಾದ ರವಿ ಮಾವಿನಕುಂಟೆ,ಕಾಂಗ್ರೆಸ್ ಮುಖಂಡರಾದ ರಂಗರಾಜು, ಮುಖಂಡರಾದ ಬಿ.ಸಿ ಆನಂದ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು .