ದೊಡ್ಡಬಳ್ಳಾಪುರ : ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಎಚ್.ಎಸ್.ವೆಂಕಟೇಶ್ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ರಾಜುಸಣ್ಣಕ್ಕಿ ಆಯ್ಕೆಯಾದರು.

ಇಂದು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಜಿಲ್ಲಾ ಹಾಗೂ ತಾಲ್ಲೂಕು ಘಟಕದನೂತನ ಪದಾಧಿಕಾರಿಗಳ ಆಯ್ಕೆ ಜೊತೆಗೆ ಪತ್ರಿಕಾದಿನ ಆಚರಣೆ ಮಾಡಲಾಯಿತು.
ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ದೇವರಾಜು ಅವರು ಮಾತನಾಡಿ 1843 ರ ಜುಲೈ ಒಂದರಂದು ರಾಜ್ಯದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಪತ್ರಿಕೆ ಆರಂಭವಾಯಿತು. ಪತ್ರಿಕೋದ್ಯಮ ಸಾಹಿತ್ಯ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ, ಜೊತೆಗೆ ರಾಜಕೀಯ ರಂಗ ಹಾದಿ ತಪ್ಪಿದಾಗೆಲ್ಲ ಅದನ್ನು ತಿದ್ದಿ ತೀಡಿದ್ದು ಪತ್ರಿಕಾ ಮಾದ್ಯಮ ಎಂದರು.
ನೂತನ ಜಿಲ್ಲಾ ಪದಾಧಿಕಾರಿಗಳು:
ಅಧ್ಯಕ್ಷ ಎಚ್.ಎಸ್.ಅಗ್ನಿ ವೆಂಕಟೇಶ್, ಉಪಾಧ್ಯಕ್ಷರಾಗಿ ಎಲ್.ಆನಂದ್ ಕುಮಾರ್, ಕಿರಣ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಚನ್ನಿಗರಾಯಪ್ಪ, ಸಹ ಕಾರ್ಯದರ್ಶಿ ಶಶಿಕುಮಾರ್. ಟಿ.ಡಿ, ನಿರ್ದೇಶಕರಾಗಿ ಎಂ.ಗೋಪಾಲಪ್ಪ, ಎನ್.ಸಿ.ಶಿವಾನಂದ್, ಡಿಕೆ.ಉಮೇಶ್ ಭರತ್ ಕುಮಾರ್.ಎ ಇವರುಗಳು ಸರ್ವಾನುಮತದಿಂದ ಆಯ್ಕೆಯಾದರು.
ನೂತನ ತಾಲ್ಲೂಕು ಪದಾಧಿಕಾರಿಗಳು:
ಅಧ್ಯಕ್ಷರು ರಾಜುಸಣ್ಣಕ್ಕಿ.ಎನ್, ಉಪಾಧ್ಯಕ್ಷರಾಗಿ ಡಿ.ಸಿ.ಚೌಡರಾಜ್ ಮತ್ತು ನರಸಿಂಹರಾಜು, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಮಂಜುನಾಥ್, ಸಹ ಕಾರ್ಯದರ್ಶಿ ಎಚ್.ಬಿ.ಮಹೇಶ್, ಶಿವಕುಮಾರ್.ಆರ್, ಖಜಾಂಚಿಯಾಗಿ ಬಿ.ಪಿಹರಿಕುಮಾರ್, ಗೌರವ ಅಧ್ಯಕ್ಷರಾಗಿ ಎ.ಆರ್.ಶ್ರೀನಿವಾಸಮೂರ್ತಿ ನಿರ್ದೇಶಕರಾಗಿ ಎಸ್.ಆರ್.ಅರುಣ್ ಕುಮಾರ್, ಜಯರಾಮಯ್ಯ, ವಿ.ಸುಬ್ರಮಣಿ, ಲಕ್ಷ್ಮೀನಾರಾಯಣ, ಎಸ್.ಸುರೇಶ್ ಕುಮಾರ್, ರಾಘವೇಂದ್ರ, ಟಿ.ಸುಬ್ರಹ್ಮಣಿ, ವಿ.ಕೃಷ್ಣಮೂರ್ತಿ, ಕೆ.ಶ್ರೀನಿವಾಸರಾವ್, ದೇವರಾಜ್, ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯ ಆರ್.ಅಶ್ವತ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ನಿಕಟಪೂರ್ವ ಜಿಲ್ಲಾಧ್ಯಕ್ಷ ಎಲ್.ಶ್ರೀನಿವಾಸ್ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.
