ದೊಡ್ಡಬಳ್ಳಾಪುರ ನಗರಸಭೆ ವತಿಯಿಂದ ಕ್ರಮಬದ್ಧವಾಗಿ ಕೆಲಸ ಮಾಡದ ಕಾರಣ ದೊಡ್ಡಬಳ್ಳಾಪುರ ನಗರದಲ್ಲಿ ಸೊಳ್ಳೆ ಉತ್ಪತ್ತಿ ಜಾಸ್ತಿಯಾಗಿ ಬಹಳಷ್ಟು ಕಡೆ ಜನರು ಡೆಂಗ್ಯೂ ಜ್ವರದಿಂದ ನರಳುತ್ತಿದ್ದಾರೆ ಈ ಕುರಿತು ನಗರ ಸಭೆ ಶೀಘ್ರ ಕ್ರಮ ಕೈಗೊಳ್ಳಬೇಕಿದೆ ಎಂದು ನಗರ ಸಭಾ ಅಧಿಕಾರಿಗಳಿಗೆ ನಗರ ಬಿಜೆಪಿ ಅಧ್ಯಕ್ಷ ಮುದ್ದಪ್ಪ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಅವರು ದೊಡ್ಡಬಳ್ಳಾಪುರ ನಗರದಲ್ಲಿ ಸರಿಯಾಗಿ ಕಸವಿಲೇವಾರಿ ಮಾಡದಿರುವುದರಿಂದ ಇತ್ತೀಚೆಗೆ ಮಳೆಯಿಂದ ರಸ್ತೆ ಬದಿಯಲ್ಲಿ ಮಳೆ ನೀರು ನಿಂತು ಹಾಗೂ ರಸ್ತೆ ಪಕ್ಕದಲ್ಲಿ ಇರುವ ಡಬ್ರೀಜ್ ಗಳನ್ನು ತೆಗೆಯುವ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವುದು ಕಸ ಗುಡಿಸದೆ ಇರುವುದು, ಕೆರೆಯನ್ನು ಸ್ವಚ್ಛತೆಗೊಳಿಸದೆ ಇರುವುದು ಹಾಗೂ ಯು.ಜಿ.ಡಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಇಲ್ಲದ ಕಾರಣದಿಂದ ದೊಡ್ಡಬಳ್ಳಾಪುರ ನಗರದಲ್ಲಿ ಸೊಳ್ಳೆಗಳ ಕಾಟ ಜಾಸ್ತಿಯಾಗಿ ಡೆಂಗ್ಯೂ ಜ್ವರದಿಂದ ಬಹಳಷ್ಟು ಜನರು ಬಳಲುತ್ತಿದ್ದಾರೆ.
ನಗರಸಭೆ ವತಿಯಿಂದ ಡಿ.ಡಿ.ಟಿ ಹಾಗೂ ಔಷಧಿ ಸಿಂಪಡನೆ ಕ್ರಮ ಬದ್ಧವಾಗಿ ನಡೆದಿದೆ ಇರುವುದು ಕೂಡ ಸೊಳ್ಳೆಗಳ ಉತ್ಪತ್ತಿ ಜಾಸ್ತಿಯಾಗಲು ಕಾರಣವಾಗಿರುತ್ತದೆ.
ಆದ್ದರಿಂದ ತಾವುಗಳು ಈ ಕೂಡಲೇ ನಗರ ಜನತೆಯ ಸುರಕ್ಷತೆಗೆ ಒತ್ತು ಕೊಟ್ಟು ಡೆಂಗ್ಯೂ ಹಾಗೂ ಸೊಳ್ಳೆಗಳು ಹರಡದಂತೆ ಕ್ರಮ ವಹಿಸಿ ನಗರದ ಜನತೆಗೆ ಸ್ವಚ್ಛ ಹಾಗೂ ಆರೋಗ್ಯಕರ ವಾತಾವರಣ ಇರುವಂತೆ ನೋಡಿಕೊಳ್ಳಬೇಕಾಗಿ ವಿನಂತಿ ಮಾಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಬಿ.ಜೆ.ಪಿ.ಮುಖಂಡರಾದ ಡಾ//ನಾರಾಯಣ್ ರವರು,ಆರ್.ಗೋಪಿರವರು,ಕೆ.ಹೆಚ್.ವೆಂಕಟರಾಜು,ಜೆ.ಮಂಜುನಾಥ್ ರವರು, ಹನುಮಂತರಾಯಪ್ಪ ರವರು, ಮಹೇಶ್ ರವರು, ಮಂಜುನಾಥ {ತಿರುಮಲ} ರವರು,ಕುಮಾರ್ ರವರು ಉಪಸ್ಥಿತರಿದ್ದರು
