
ದೊಡ್ಡಬಳ್ಳಾಪುರ : ಸ್ಥಳೀಯ ಇಂಡೇನ ಕಾರ್ಖಾನೆ ಸಂಬಂಧಿಸಿದಂತೆ ಗ್ರಾಮಸ್ಥರ ಹೇಳಿಕೆಯನ್ನು ವಿರೋಧಿಸಿ ಕೆಲವರು ರಘುನಾಥಪುರ ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಅವಹೇಳನವಾಗಿ ಮಾತನಾಡಿಕೊಳ್ಳುತ್ತಿದ್ದಾರೆ ಇದು ಊರಿನಲ್ಲಿ ಹಲವು ಊಹಾಪೋಹಗಳು ಹಬ್ಬಲು ಕಾರಣವಾಗುತ್ತಿದೆ . ಆದ್ದರಿಂದ ಗ್ರಾಮದಲ್ಲಿ ಗೊಂದಲ ವಾತಾವರಣ ಸೃಷ್ಟಿಯಾಗುತ್ತಿದೆ ಆದ್ದರಿಂದ ತಾವುಗಳು ನಮಗೆ ರಕ್ಷಣೆ ನೀಡಬೇಕೆಂದು ಕೋರಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಿಗೆ ಸ್ಥಳೀಯ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಈ ಹಿಂದೆ ದೊಡ್ಡಬಳ್ಳಾಪುರ ತಾಲ್ಲೂಕು, ರಘುನಾಥಪುರ ಗ್ರಾಮದಲ್ಲಿರುವ ಇಂಡೇನಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕೆಮಿಕಲ್ ಫ್ಯಾಕ್ಟರಿ ವಿಷಕಾರಿ ಅನಿಲ ಬಿಡುಗಡೆ ಹಾಗೂ ಹಳೆಯ ದೇವಸ್ಥಾನಗಳು ನಕಾಶೆಯಲ್ಲಿ ತೋರಿಸಿರುವ ರಸ್ತೆ, ಹಾಗೂ ಹಳೆಯ ಸಹಿನೀರಿನ ಬಾವಿಗಳ ಕಣ್ಮರೆಯಾಗಿರುವ ಬಗ್ಗೆ ಗ್ರಾಮಸ್ಥರೆಲ್ಲರೂ ಸೇರಿ ಎಲ್ಲಾ ಮೇಲಾಧಿಕಾರಿಗಳಿಗೆ ಅರ್ಜಿಯನ್ನು ನೀಡಿದ್ದೇವು , ಈ ವಿಚಾರವಾಗಿ ಮಾಧ್ಯಮಗಳಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಪ್ರತಿನಿತ್ಯ ಆಗುತ್ತಿರುವ ತೊಂದರೆಗಳ ಬಗ್ಗೆ ಮಾಹಿತಿಯನ್ನು ಈಗಾಗಲೇ ಹಂಚಿಕೊಂಡಿದ್ದು. ಇದಕ್ಕೆ ಸಂಬಂಧಪಟ್ಟಿ ಅಧಿಕಾರಿಗಳು ಕಾನೂನು ರೀತಿಯಲ್ಲಿ ಕೆಲಸ ನಿರ್ವಹಿಸಲು ಮುಂದಾಗಿದ್ದಾರೆ,ಆದರೆ ಗ್ರಾಮದ ಕೆಲವು ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಗ್ರಾಮಸ್ಥರು ನಿಲುವನ್ನು ಕುರಿತು ಅವಹೇಳನವಾಗಿ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.
ಏನಿದು ಘಟನೆ….???
ತಾಲೂಕಿನ ರಘುನಾಥಪುರದ ಇಂಡೇನ ಕಾರ್ಖಾನೆ ವಿರುದ್ಧ ಹಲವು ಆರೋಪಗಳನ್ನು ಮಾಡಿ ಸ್ಥಳೀಯ ಗ್ರಾಮಸ್ಥರು ಹಲವು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದ ಹಿನ್ನೆಲೆ ಗ್ರಾಮಕ್ಕೆ ಅಧಿಕಾರಿಗಳ ತಂಡ ಭೇಟಿಕೊಟ್ಟು ಗ್ರಾಮದ ಪರಿಸ್ಥಿತಿಯನ್ನು ಪರೀಕ್ಷಿಸಲು ಮುಂದಾಗಿದ್ದು. ಗ್ರಾಮದ ಸಮಸ್ಯೆ ಕುರಿತಂತೆ ಸ್ಥಳೀಯ ಗ್ರಾಮಸ್ಥರು ಪತ್ರಿಕಾ ಹೇಳಿಕೆ ನೀಡಿದ್ದರು.
ಗ್ರಾಮದ ಆರ್.ಎಂ.ಮಹದೇವ್, ಆರ್.ಎಂ.ಲಕ್ಷ್ಮೀಪತಿ, ಆರ್.ಹೆಚ್.ಚನ್ನಪ್ಪ, ಸಂಗೀತಾ, ಅನಿತ, ನರಸಿಂಹಮೂರ್ತಿ, ಮುನಿರಾಜಪ್ಪ, ಆರ್.ಎಲ್.ಗಾಯಿತ್ರಿ, ಗಂಗಮ್ಮ, ಆರ್.ಎಂ.ಜಗದೀಶ, ಇನ್ಫೋಸಿಟಿ ಲಕ್ಷ್ಮೀ.ಎನ್ ಸೇರಿದಂತೆ ಹಲವರು ರಕ್ಷಣೆ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.