
ದೊಡ್ಡಬಳ್ಳಾಪುರ : ಗ್ರಾಮದ ಎರಡು ಎಕರೆ ಗುಂಡುತೋಪು ಜಾಗ ಖಾಸಗಿ ವ್ಯಕ್ತಿಯ ಪಾಲಾಗಿತ್ತು, ಸರ್ಕಾರಿ ಜಾಗದ ಒತ್ತುವರಿ ತೆರವು ಮಾಡುವಂತೆ ಕಳೆದ 6 ತಿಂಗಳಿಂದ ರಾಜಘಟ್ಟ ಯುವಕರು ಹೋರಾಟ ನಡೆಸಿದರು, ಹೋರಾಟಕ್ಕೆ ಜಯ ಸಿಕ್ಕಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರಿ ಗುಂಡುತೋಪು ಜಾಗವನ್ನ ತೆರವುಗೊಳಿಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದರು.
ದೊಡ್ಡಬಳ್ಳಾಪುರ ತಾಲೂಕು ರಾಜಘಟ್ಟ ಗ್ರಾಮದ ಸರ್ವೆ ನಂಬರ್ 212ರ 1.39 ಎಕರೆ ಸರ್ಕಾರಿ ಗುಂಡುತೋಪು ಜಾಗ ಗ್ರಾಮದ ಖಾಸಗಿ ವ್ಯಕ್ತಿ ಒತ್ತುವರಿ ಮಾಡಿಕೊಂಡು ಬೇಸಾಯ ಮಾಡುತ್ತಿದ್ದರು, ಈಗಾಗಲೇ ಗ್ರಾಮದಲ್ಲಿನ ಸರ್ಕಾರಿ ಜಾಗಗಳು ಬಲಾಢ್ಯರ ಪಾಲಾಗಿದವು, ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರಿ ಜಾಗವೇ ಇಲ್ಲದಂತಾಗಿತು, ಇದನ್ನ ಮನಗಂಡ ರಾಜಘಟ್ಟ ಗ್ರಾಮಾಭಿವೃದ್ಧಿ ಯುವಕರ ಸೇನೆ ಸರ್ಕಾರಿ ಜಾಗಗಳ ಉಳಿವಿಗಾಗಿ ಹೋರಾಟವನ್ನ ಆರಂಭಿತ್ತು. ಇಂದು ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಮ್ಮುಖದಲ್ಲಿ ತೆರವು ಕಾರ್ಯಚಾರಣೆ ನಡೆಸಿಲಾಗಿತು, ಒತ್ತುವರಿ ಜಾಗವನ್ನ ತೆರವು ಮಾಡಿಸಿ, ಸರ್ಕಾರಿ ಗುಂಡುತೋಪು ಜಾಗವನ್ನ ಜೆಸಿಬಿ ಮೂಲಕ ಟ್ರಂಚ್ ಹೊಡಿಸಿ ಗುರುತಿಸಲಾಗಿದೆ.
ರಾಜಘಟ್ಟ ಗ್ರಾಮಾಭಿವೃದ್ಧಿ ಯುವಕರ ಸೇನೆ ಮುಖಂಡರಾದ ಗಣೇಶ್ ರಾಜಘಟ್ಟ ಮಾತನಾಡಿ, ನಮ್ಮ ಸಂಘಟನೆ ಮುಖ್ಯ ಉದ್ದೇಶ ಗ್ರಾಮದಲ್ಲಿನ ಸರ್ಕಾರಿ ಅಸ್ತಿಗಳನ್ನ ಉಳಿಸುವುದು, 6 ತಿಂಗಳ ಹೋರಾಟಕ್ಕೆ ಜಯ ಸಿಕ್ಕಿದೆ, ಇದಕ್ಕೆ ಕಾರಣರಾದ ಎಲ್ಲರಿಗೂ ನಾವು ಕೃತಜ್ಞನೆ ಸಲ್ಲಿಸುತ್ತೇವೆ, ಬೇರೆಯವರ ಪಾಲಾಗಿದ್ದ ಜಾಗ ಇವತ್ತು ಗ್ರಾಮಸ್ಥರ ಪಾಲಾಗಿದೆ. ಸರ್ಕಾರಿ ಗುಂಡು ತೋಪು ಜಾಗದಲ್ಲಿ ಸಿಎಸ್ ಆರ್ ಅನುದಾನದಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ರಾಜಘಟ್ಟ ಗ್ರಾಮದ ಯುವಕರು ಉಪಸ್ಥಿರಿದ್ದರು.