
ದೊಡ್ಡಬಳ್ಳಾಪುರ( ವಿಜಯಮಿತ್ರ) : ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಸಮತಾ ಸೈನಿಕ ದಾಳ ಹಾಗೂ ಸ್ವಾಭಿಮಾನಿ ಎಸ್.ಸಿ./ಎಸ್.ಟಿ. ಸಂಘಟನೆಗಳ ಒಕ್ಕೂಟದ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ಮುಂಭಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಮತ್ತು ಹಗರಣಗಳನ್ನು ಸಿ.ಬಿ.ಐ. ತೆನಿಖೆಗೆ ನೀಡುವಂತೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ನೆಡೆಸಲಾಯಿತು.
ಪ್ರತಿಭಟನೆಯಲ್ಲಿ ದಲಿತನಾಯಕ ಹಾಗೂ ಎಸ್ ಎಸ್ ಡಿ ರಾಜ್ಯಾಧ್ಯಕ್ಷರ ಡಾ. ವೆಂಕಟಾಸ್ವಾಮಿ ನೇತೃತ್ವದಲ್ಲಿ ತಾಲ್ಲೂಕಿನ ಉಪವಿಭಾಗ ಅಧಿಕಾರಿಗಳ ಮುಖೇನ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಅವರು ಕರ್ನಾಟಕ ಪರಿಶಿಷ್ಟ ಜಾತಿ/ಪಂಗಡಗಳ ಅಭಿವೃದಿದು ನಿಗಮವೊಂದೇ ಅಸ್ತಿತ್ವದಲ್ಲಿದ್ದಾಗ ಲೂಟಿ ದಂಧೆಗಳ ಮುಕ್ತವಾಗಿ ಆಡಳಿತ ನಡೆದು ಈ ಜನಾಂಗಗಳ ಫಲಾನುಭವಿಗಳಿಗೆ ಯೋಜನೆಗಳ ಉಪಯೋಗ ದೊರೆಯುತ್ತಿತ್ತು.ಆದರೆ ಈ ನಿಗಮವು ವಿವಿಧ ಜಾತಿ, ಉಪಜಾತಿಗಳ ಹೆಸರಲ್ಲಿ ವಿಭಜನೆಗೊಂಡು ಅಂತಹ ನಿಗಮಗಳಲ್ಲಿ ಇದೀಗ ಲೂಟಿ ದಂಧೆಯು ಅವ್ಯಾಹತವಾಗಿ ನಡೆದಿವೆ. ಈ ನಿಗಮಗಳ ಆಡಳಿತವು ಆಯಾಉಪಜಾತಿಗಳ ಶಾಸಕರ,ಜಾತಿ ಸಂಘಟನೆಗಳ ಮುಖಂಡರ ಕೈ ಸೇರಿ ಅವು ಲೂಟಿ ಕೇಂದ್ರಗಳಾಗಿವೆ ಎನ್ನಲು ಇಂದಿನ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮವು ಜೀವಂತ ಸಾಕ್ಷಿಯಾಗಿದೆ ಎಂದರು.
Ad
ಈ ಪ್ರಕರಣದ ನೇರ ಹೊಣೆಯನ್ನು ರಾಜ್ಯದ ಮುಖ್ಯಮಂತ್ರಿಗಳು ಹೊರುವಂತಹ ಘಟ ತಲುಪಿದೆ.ನಿಗಮದ ಬಹುದೊಡ್ಡ ಹಣವು ಹೈದರಬಾದಿಗೆ ವರ್ಗಾವಣೆಯಾಗಿ ಅದು ವಿವಿಧ ಅನೇಕ ವ್ಯಾಪಾರ ಕೇಂದ್ರಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಬಳಕೆಯಾಗಿರುವುದನ್ನು ಮುಖ್ಯಮಂತ್ರಿಗಳು ಲಘುವಾಗಿ ಪರಿಗಣಿಸಿರುವುದು ಮತ್ತು ತನ್ನ ಸಹೋದ್ಯೋಗಿ ಸಚಿವರಿಂದ ಹೇಳಿಕೆಗಳನ್ನು ಕೊಡಿಸುವ ಮೂಲಕ ತನ್ನ ತಲೆದಂಡ ತಪ್ಪಿಸಿಕೊಳ್ಳುವ ಹುನ್ನಾರ ನಡೆಸಲಾಗಿದೆ.ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊರಬೇಕು ಸದನದ ಸಭಾಪತಿಗಳು ಮುಖ್ಯಮಂತ್ರಿಗಳ ರಾಜೀನಾಮೆಯನ್ನು ಪಡೆದು ಪರಿಶಿಷ್ಟ ಜನಾಂಗಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಅಗ್ರಹಿಸಿದರು.
ಪಂಚಮರ ಹಣ ಪಂಚ ಗ್ಯಾರಂಟಿಗಳಿಗೆ ಬಳಕೆ ಮಾಡಿರುವುದನ್ನು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ.ಪರಿಶಿಷ್ಟರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನ ಮತ್ತು ವಿದೇಶಿ ವಿದ್ಯಾರ್ಥಿ ವೇತನ ಕಡಿತಗೊಳಿಸುವ ಮೂಲಕ ಮುಖ್ಯಮಂತ್ರಿಗಳು ದಲಿತ ದ್ರೋಹಿಯಾಗಿದ್ದಾರೆ. ಈ ಕಾರಣಗಳಿಗಾಗಿ ಸ್ವಾಭಿಮಾನಿ ಎಸ್ಸಿ/ಎಸ್ಟಿ ಸಂಘಟನೆಗಳ ಒಕ್ಕೂಟವು ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷರು, ಮುತ್ತೂರು ಬಿ. ಎನ್, ಓಬಳೇಶ್,ನಗರ ಅಧ್ಯಕ್ಷರು ಇಮ್ರಾನ್ ಪಾಷ,ತಾಲ್ಲೂಕು ಮಹಿಳಾ ಅಧ್ಯಕ್ಷರು ರತ್ನಮ್ಮ ಕೊನಘಟ್ಟ, ಸುನಂದಮ್ಮ , ನಗರ ಸಮಿತಿ ಸದಸ್ಯರಾದ ದೊಡ್ಡರಾಜು ಟಿ ಸಿ, ಜಿಲ್ಲಾಧ್ಯಕ್ಷರು ಪಿವಿಸಿ ಸ್ವಾಭಿಮಾನ ಸಿದ್ದಲಿಂಗಮ್ಮ, ವಿಜಯಲಕ್ಷ್ಮೀ.ಸಿದ್ದಗಂಗಮ್ಮ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.