ದೊಡ್ಡಬಳ್ಳಾಪುರ ( ವಿಜಯಮಿತ್ರ) : ಕನ್ನಡಿಗರಿಗೆ ಉದ್ಯೋಗದ ವಿಷಯಗಳನ್ನು ಆಧರಿಸಿ ಫಾಕ್ಸ್ಕಾನ್ ಕೈಗಾರಿಕೆ ಸಂಸ್ಥೆಯಲ್ಲಿ ಶೇಕಡ 80 %ರಷ್ಟು ಉದ್ಯೋಗಗಳನ್ನು ಸ್ಥಳಿಯ ಕನ್ನಡಿಗರಿಗೆ ಮೀಸಲಿಟ್ಟು, ಈ ನೆಲ ಜಲ ಭಾಷೆ ಹಾಗೂ ಸಂಸ್ಕೃತಿಯನ್ನು ಗೌರವಿಸುವಂತೆ ತಿಳಿಸಲಾಗಿದೆ ಹಾಗೂ ಈ ಕುರಿತು ಕಾರ್ಖಾನೆಗೆ ಮನವಿ ಸಲ್ಲಿಸಲಾಯಿತು ಎಂದು ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಎ. ನಂಜಪ್ಪ ತಿಳಿಸಿದರು.

ಈ ಕುರಿತು ಮಾತನಾಡಿದ ಅವರು ಕರ್ನಾಟಕದಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಪಡೆದು ಸ್ಥಾಪಿಸುವ ಕೈಗಾರಿಕೆ. ಮತ್ತು ಕಛೇರಿಗಳಲ್ಲಿ ಎರಡನೇ ದರ್ಜೆ ನೌಕರಿಯನ್ನು ಪಡೆಯದ ದುಸ್ಥಿತಿಯಲ್ಲಿರುವುದು ಶೋಚನೀಯ ಹಾಗೂ ಖಂಡನೀಯ , ಈ ತಾರತಮ್ಯವನ್ನು ಸರಿಪಡಿಸುವ ಸಲುವಾಗಿ ಸರೋಜಿನಿ ಮಹಿಷಿ ವರದಿ ಜಾರಿ ಹಾಗೂ ನಮ್ಮ ರಾಜ್ಯ ಸರ್ಕಾರದ ಇತ್ತೀಚಿನ ಅಧಿವೇಶನದಲ್ಲಿ ಕರ್ನಾಟಕದಲ್ಲಿ ಸ್ಥಾಪಿತವಾಗುವ ಖಾಸಗಿ ಕಾರ್ಖಾನೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಶೇಕಡ 80%ರಷ್ಟು ಉದ್ಯೋಗ ಮೀಸಲು ಪ್ರಸ್ತಾವನೆಯನ್ನು ಮುನ್ನೆಲೆಗೆ ತಂದಿದ್ದು ಸ್ವಾಗತಾರ್ಹವೇ ಸರಿ.. ನಮ್ಮ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಈಗಾಗಲೇ ಕೈಗಾರಿಕಾ ಪ್ರದೇಶ ಸ್ಥಾಪನೆಯಾಗಿದ್ದು ಇದರ ಜೊತೆ ಜೊತೆಯಲ್ಲೇ ಮತ್ತಷ್ಟು ಖಾಸಗಿ ಕೈಗಾರಿಕೆಗಳು ಸ್ಥಾಪಿತವಾಗುತ್ತಿರುವುದು ಸಂತೋಷ, ಅಂತೆಯೇ ತಾಲ್ಲೂಕಿನ ಕೊನಘಟ್ಟ ಸಮೀಪ ಕಾರ್ಯ ಆರಂಭಿಸಿರುವ ಫಾಕ್ಸ್ಕಾನ್ ಕಂಪನಿಯಲ್ಲಿ ಕನ್ನಡಿಗರಿಗೆ ಉದ್ಯೋಗವಕಾಶ ಕಲ್ಪಿಸುವಂತೆ ಮನವಿ ಮಾಡಲಾಗಿದೆ ಎಂದರು.
ಉದ್ಯೋಗ ಮೀಸಲಾತಿ ವಿಚಾರದಲ್ಲಿ ಕನ್ನಡಿಗರಿಗೆ ಸೂಕ್ತ ನ್ಯಾಯ ಸಿಗದ ಪಕ್ಷದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜ್ಯ ವಿಜಯ ಕರ್ನಾಟಕರಕ್ಷಣಾ ವೇದಿಕೆಯ ಮುಖಂಡರಾದ ಬಿ. ನಯಾಜ್ ಖಾನ್, ಅಜಯ್, ನವೀನ್, ದರ್ಶನ್ ಚರಣ್ ಕುಮಾರ್,ಸೋಮರಾಜು, ಪಾಣೀಶ್ , ಸೇರಿದಂತೆ ಹಲವರು ಉಪಸ್ಥಿತರಿದ್ದರು.
