
ಲಿಂಗಸುಗೂರು ಆಗಸ್ಟ್ 03 ( ವಿಜಯಮಿತ್ರ) : ತಾಲೂಕಿನ ಅಲ್ಪಸಂಖ್ಯಾತರ. ಕಲ್ಯಾಣ ಇಲಾಖೆಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಿಲಯ ಪಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಲಕ್ಷ್ಮಣ್ ಡಿ ಚವಾಣ್ ರವರಿಗೆ ರಾಜ್ಯಮಟ್ಟದ
ಅತ್ಯುತ್ತಮ ನಿಲಯ ಪಾಲಕರಾಗಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ರಾಜ್ಯಮಟ್ಟದ ಪ್ರಶಸ್ತಿ ಪಡೆದು ತಾಲ್ಲೂಕಿನ ಗೌರವ ಹೆಚ್ಚಿಸಿದ ಶ್ರೀ ಲಕ್ಷ್ಮಣ್ ಡಿ ಚವಾಣ್ ಅವರಿಗೆ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
.ಈ ಸಂದರ್ಭದಲ್ಲಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘ ತಾಲ್ಲೂಕು ಅಧ್ಯಕ್ಷ ಲಾಲಪ್ಪ ರಾಠೋಡ್,
ಅಮರೇಶೆ ಡಿ ಪವರ್ ಕರಡಕಲ್ ತಾಂಡಾ, ತಾಲೂಕು ಪ್ರಧಾನ ಕಾರ್ಯದರ್ಶಿ.
ನೀಲೇಶ ಪವರ್ ಯುವ ಘಟಕದ ಅಧ್ಯಕ್ಷರು.
ಶಂಕರ್ ಪವಾರ್,ಉಪಾಧ್ಯಕ್ಷರಾದ ಚಂದ್ರು ಚವ್ಹಾಣ,,ವೆಂಕಟೇಶ ರಾಠೋಡ್, ಶಿವಕುಮಾರ್ ರಾಠೋಡ್, ಕಸ್ತೂರ ಚವ್ಹಾಣ,ಶರಣು ರಾಠೋಡ್ ಹಾಗೂ ಇನ್ನಿತರರು ಇದ್ದರು.