ದೊಡ್ಡಬಳ್ಳಾಪುರ : ಭಾರತ ಸೇವಾದಳದ ನೂತನ ತಾಲೂಕು ಘಟಕ ಅಧ್ಯಕ್ಷರಾದ ಆರ್.ವಿ.ಮಹೇಶ್ ಕುಮಾರ್ ರವರನ್ನು ತಾಲೂಕು ಶಿಕ್ಷಕರ ತಂಡ ಸನ್ಮಾನಿಸಿ ಗೌರವಿಸಿದ್ದರು.
ಭಾರತ ಸೇವಾದಳದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಸಾಮಾಜಿಕ ಹೋರಾಟಗಾರ ಆರ್ ವಿ ಮಹೇಶ್ ರನ್ನು ಭಾರತ ಸೇವಾದಳದ ತಾಲೂಕು ಸಮಿತಿಯ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಾಲೂಕಿನ ಶಿಕ್ಷಕರ ತಂಡ ಅವರಿಗೆ ಪುಷ್ಪ ಮಾಲೆ ಹಾಕುವ ಮೂಲಕ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಭಾರತ ಸೇವಾದಳದ ನೂತನ ತಾಲ್ಲೂಕು ಅಧ್ಯಕ್ಷ ಆರ್ ವಿ ಮಹೇಶ್ ಮಾತನಾಡಿ ಜಿಲ್ಲಾ ಸಮಿತಿಯು ನನಗೆ ಉತ್ತಮ ಜವಾಬ್ದಾರಿಯನ್ನು ಕೊಟ್ಟಿದ್ದು ಶಿಕ್ಷಕರ ಸಹಕಾರ ಹಾಗೂ ಮಾರ್ಗದರ್ಶನದೊಂದಿಗೆ ಉತ್ತಮ ಹಾದಿಯಲ್ಲಿ ಭಾರತ ಸೇವಾದಳವನ್ನು ನಡೆಸುವ ಭರವಸೆ ನೀಡುತ್ತೇನೆ. ತಾಲೂಕಿನ ಪ್ರತಿ ಶಾಲೆಯಲ್ಲಿ ಸೇವಾದಳದ ಘಟಕಕ್ಕೆ ಚಾಲನೆ ನೀಡುವ ಮೂಲಕ ಮಕ್ಕಳಲ್ಲಿ ಉತ್ತಮ ಸೇವಾ ಭಾವನೆ ಮೂಡಿಸಲಾಗುವುದು ಎಂದು ತಿಳಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸ್ನೇಹಜೀವಿ ಸಮಾಜ ಸೇವಕರಾದ ಆರ್ ವಿ ಮಹೇಶ್ ರವರು ಭಾರತ ಸೇವಾದಳವನ್ನು ಉತ್ತಮ ರೀತಿಯಲ್ಲಿ ನಡೆಸುತ್ತಾರೆ ಎಂಬ ನಂಬಿಕೆ, ವಿಶ್ವಾಸ ನಮಗಿದೆ. ಅವರಿಗೆ ನಮ್ಮ ಶಿಕ್ಷಕರ ಬೆಂಬಲ ಸದಾ ಇರುತ್ತದೆ ಎಂದು ತಾಲೂಕಿನ ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತೂಬಗೆರೆ ಹೋಬಳಿಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಸಿದ್ದಪ್ಪ, ವಸಂತ ಗೌಡ, ನರಸಿಂಹ ಮೂರ್ತಿ,ಯುವ ನಾಯಕ ನರಸಿಂಹ ಮೂರ್ತಿ ಮುದ್ದೇನಹಳ್ಳಿ , ಸುನೀಲ್, ನಾರಾಯಣ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
