ದೊಡ್ಡಬಳ್ಳಾಪುರ: ಬೆಂಗಳೂರುನಿಂದ ಹಿಂದೂಪುರ ಸಂಪರ್ಕಿಸುವ ರಸ್ತೆಯ ಟೋಲ್ ಸಂಗ್ರಹಿಸುವ ಕಂಪನಿಯ ಪರವಾನಗಿಯನ್ನು ರದ್ದುಪಡಿಸುವಂತೆ ಕೋರಿ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿಯವರಿಗೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು ಪತ್ರರವಾನಿಸಿದ್ದಾರೆ.

ತಾಲ್ಲೂಕಿನ ಗಡಿ ಭಾಗದಲ್ಲಿ ಟೋಲ್ ಸಂಗ್ರಹಿಸುವ ಪರವಾನಿಗೆ ಪಡೆದ ರಾಮಲಿಂಗಮ್ ಕನ್ಸಕ್ಷನ್ ಕಂಪನಿ, ಲಿಮಿಟೆಡ್ ಈ ಕಂಪನಿಯು ಬೆಂಗಳೂರುನಿಂದ ಹಿಂದೂಪುರ ರಸ್ತೆಯನ್ನು ಸರಿಯಾಗಿ ನಿರ್ವಹಣೆ ಮಾಡದೆ ಟೋಲ್ ಸಂಗ್ರಹಿಸುತ್ತಿದ್ದು ಇವರು ಸಂಚಾರಿ ನಿರ್ವಹಣಾ ನಿಯಮ ಪಾಲಿಸದೆ ಉಲ್ಲಂಘಿಸಿರುವುದರಿಂದ ರಸ್ತೆಯಲ್ಲಿ ಅತಿ ಹೆಚ್ಚು ವಾಹನಗಳು ಅಪಘಾತವಾಗುತ್ತಿದ್ದು ಸಂಚಾರರಿಗೆ ತೊಂದರೆ ಉಂಟಾಗುತ್ತಿದೆ. ಸಾರ್ವಜನಿಕರು ಇವರ ಬೇಜವಬ್ದಾರಿ ನಿರ್ವಹಣೆ ಬಗ್ಗೆ ಮನವಿ ಮಾಡಿದ್ದು.ಟೋಲ್ ಸಂಗ್ರಹಿಸುವ ರಾಮಲಿಂಗಮ್ ಕನ್ಸಕ್ಷನ್ ಕಂಪನಿ ಲಿಮಿಟೆಡ್ ಕಂಪನಿಯ ಪರವಾನಗಿಯನ್ನು ರದ್ದು ಪಡಿಸಲು ಈ ಮೂಲಕ ತಮ್ಮಲ್ಲಿ ಕೋರುತ್ತೇನೆ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
