ದೊಡ್ಡಬಳ್ಳಾಪುರ ಸೆ 20 ( ವಿಜಯಮಿತ್ರ ) : ತಾಲೂಕಿನ ಹಾಲು ಉತ್ಪಾದಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರತಿವರ್ಷ 25 ಲಕ್ಷ ರೂಪಾಯಿಗಳನ್ನು ಮೀಸಲಿಟ್ಟಿದ್ದು. ಅನಾರೋಗ್ಯಕ್ಕೆ ತುತ್ತಾದರೈತರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಬಮುಲ್ ನಿರ್ದೇಶಕ ಬಿ ಸಿ ಆನಂದ್ ತಿಳಿಸಿದರು.

ಶುಕ್ರವಾರ ಲಿಂಗನಹಳ್ಳಿಯಲ್ಲಿ ನೆಡೆದ ಹಾಲು ಉತ್ಪದಕರಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು ಹಾಲು ಉತ್ಪಾದಕ ರೈತರಿಗೆ ಉತ್ತಮ ಸೇವೆ ಸಲ್ಲಿಸಲು ನಮ್ಮ ಸಹಕಾರ ಸಂಘ ಸದಾ ಸಿದ್ಧವಿರುತ್ತದೆ. ರೈತರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದು. ರೈತರು ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
ಸ್ಥಳೀಯವಾಗಿ ಹಾಲು ಉತ್ಪಾದಕರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಲು ಈ ಸರ್ವ ಸದಸ್ಯರ ಸಭೆ ಅನುಕೂಲಕರವಾಗಿದೆ. ಹಾಲು ಉತ್ಪಾದನೆಯಲ್ಲಿ ಉತ್ತಮ ಸಾಧನೆಗೆ ನಿಮ್ಮೆಲ್ಲರ ಸಹಭಾಗಿತ್ವದ ಅವಶ್ಯಕತೆ ಇದೆ ಎಂದರು.

ಮುಖಂಡರಾದ ನಾಗೇಶ್ ಮಾತನಾಡಿ ಸ್ಥಳೀಯ ಹಾಲು ಉತ್ಪಾದಕರಿಗೆ ಬ್ಯಾಂಕಿನಿಂದ ಹಣ ಪಡೆಯುವ ವಿಚಾರದ ಸಮಸ್ಯೆ ಇದೆ , ಈ ಕುರಿತಾಗಿ ಕೊನಘಟ್ಟ ಗ್ರಾಮದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಕೆನರಾ ಬ್ಯಾಂಕ್ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಬೇಕಿದೆ , ಈ ಕುರಿತು ರೈತರ ಸಲಹೆ ಅತ್ಯಗತ್ಯವಾಗಿದೆ ಎಂದರು.
ಹಾಲು ಉತ್ಪದಕರಿಗೆ ಆರ್ಥಿಕ ನರವಿನ ಅವಶ್ಯಕತೆ ಇದ್ದು ಈ ಕುರಿತು ಸಹಕಾರ ಸಂಘದಲ್ಲಿ ಚರ್ಚೆ ನಡೆಸಿ ಅರ್ಹ ಸದಸ್ಯರಿಗೆ ಆರ್ಥಿಕ ನೆರವು ನೀಡುವ ಯೋಜನೆ ರೂಪಿಸಬೇಕಿದೆ ಎಂದರು.

ಸಭೆಯಲ್ಲಿ ಲಿಂಗನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ನಂಜೇಮರಿ, ಉಪಾಧ್ಯಕ್ಷ ಮುನಿರಾಜು, ನಿರ್ದೇಶಕರಾದ ಪುಟ್ಟಮೂರ್ತಿ, ಸಂಜೀವ್ ಮೂರ್ತಿ, ಶ್ರೀನಿವಾಸ್ ಮೂರ್ತಿ, ಅಂಬಿಕಾ, ಶ್ಯಾಮ್ ಸುಂದರ್, ಮುನಿರಾಜು, ಮುನೇಗೌಡ, ಬಿ. ಆನಂದ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.
