ದೊಡ್ಡಬಳ್ಳಾಪುರ : ತಾಲೂಕಿನ ಪೆರ್ಲ್ ಗ್ಲೋಬಲ್ ಕಾರ್ಖಾನೆ ವತಿಯಿಂದ ಕಾರ್ಮಿಕರಿಗೆ ವಿಶೇಷ ಕಾರ್ಯಕ್ರಮಗಳ ಯೋಜನೆ ಮಾಡುವ ಮುಖಾಂತರ ದಸರಾ ಹಬ್ಬದ ಶುಭಾಶಯಗಳು ಕೋರಲಾಯಿತು.

ಕಾರ್ಮಿಕರ ಮನೋರಂಜನೆಗಾಗಿ ವಿಶೇಷ ವೇದಿಕೆಯನ್ನು ಕಾರ್ಖಾನೆ ಆಡಳಿತ ಮಂಡಳಿ ಸಿದ್ಧಪಡಿಸಿದ್ದು ವೇದಿಕೆಯಲ್ಲಿ ಮಿಮಿಕ್ರಿ ಕಲಾವಿದ ಗೋಪಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ನೃತ್ಯ ಗೀತೆ ಭಾವಗೀತೆ ಮಿಮಿಕ್ರಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಕಾರ್ಮಿಕರಿಗಾಗಿ ಆಯೋಜನೆ ಮಾಡಲಾಗಿತ್ತು.
Ad
Ad
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಉದಯ್ ಮಾತನಾಡಿ ನಮ್ಮಲ್ಲಿ ಎರಡುವರೆ ಸಾವಿರಕ್ಕೂ ಅಧಿಕ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರತಿಯೊಬ್ಬ ಕಾರ್ಮಿಕರು ನಮ್ಮ ಕಾರ್ಖಾನೆಗೆ ಅತ್ಯಮೂಲ್ಯ ರತ್ನಗಳಿದ್ದಂತೆ ಅವರಿಂದಲೇ ಕಾರ್ಖಾನೆಯ ಅಭಿವೃದ್ಧಿ ಬೆಳವಣಿಗೆ ಸಾಧ್ಯ, ಈ ನಿಟ್ಟಿನಲ್ಲಿ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಮನೋರಂಜನೆಯ ಜೊತೆಗೆ ವಿಶೇಷ ಕೊಡುಗೆಗಳನ್ನು ನೀಡುವ ಮೂಲಕ ಈ ಬಾರಿಯ ದಸರಾ ಹಬ್ಬದ ಶುಭಾಶಯಗಳು ಕೋರಲಾಗಿದೆ ದಿನನಿತ್ಯ ಕೆಲಸದಲ್ಲೆ ತೊಡಗುವ ಕಾರ್ಮಿಕರಿಗೆ ಇಂದಿನ ದಸರ ಸಂಭ್ರಮ ನಿಜ್ಜಕ್ಕು ಖುಷಿ ಕೊಟ್ಟಿದ್ದು ನೋಡುವರ ಮನಸ್ಸಿಗೆ ಸಮಾಧಾನ ನೀಡಿದೆ ಎಂದರು

ಕಾರ್ಖಾನೆಯ ಮಾನವ ಸಂಪನ್ಮೂಲ ಅಧಿಕಾರಿ ಖಾನ್ ಮಾತನಾಡಿ ವರ್ಷವಿಡಿ ಕಾರ್ಖಾನೆಗಾಗಿ ದುಡಿಯುವ ಕಾರ್ಮಿಕರಿಗೆ ದಸರಾ ಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದೆ, ಕಾರ್ಮಿಕರಿಗಾಗಿ ಈ ವೇದಿಕೆ ಸಿದ್ಧಪಡಿಸಿದ್ದು , ತಮ್ಮ ಪ್ರತಿಭೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಕಾರ್ಮಿಕರು ಬೆಳಗಿಂದಲೇ ಅತ್ಯಂತ ಉತ್ಸಾಹಕಾರಾಗಿ ದಸರಾ ಹಬ್ಬವನ್ನು ಸ್ವಾಗತಿಸುತ್ತಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಾದ ಯೋಗಿ,ಶಂಕರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
