ದೊಡ್ಡಬಳ್ಳಾಪುರ : ಹೆಸರಿಗಷ್ಟೇ ಸೀಮಿತವಾದ ನವ ದೊಡ್ಡಬಳ್ಳಾಪುರ, ನೂತನ ಶಾಸಕರು ಅಧಿಕಾರಕ್ಕೆ ಬಂದ ನಂತರ ಯಾವುದೇ ಅಭಿವೃದ್ಧಿ ಕಾರ್ಯಗಳು ನೆಡೆದಿಲ್ಲ, ಶಾಸಕರು ಯಾವುದೇ ಆಧಾರವಿಲ್ಲದೆ ಕಾಂಗ್ರೆಸ್ ಪಕ್ಷದ ವಿರುದ್ಧ ಆರೋಪ ಮಾಡಿರುವುದು ಸರಿಯಲ್ಲ, ತಾಲ್ಲೂಕಿನ ಅಭಿವೃದ್ಧಿಗೆ ನಮ್ಮ ಸಹಕಾರ ಸದಾ ಇರುತ್ತೆದೆ ಎಂದು ನಗರಸಭಾ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಶಿವಶಂಕರ್ (ಶಂಕ್ರಿ) ತಿಳಿಸಿದರು
ನಗರದ ಪ್ರವಾಸಿಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಯಾವುದೇ ಯೋಜನೆ, ಅಭಿವೃದ್ಧಿ ಕಾರ್ಯಕ್ರಮಗಳು ಆಗಿಲ್ಲ… ಯಾವುದಾದರು ಆಗಿದ್ದರೆ ಶಾಸಕರು ತಿಳಿಸಲಿ… ಈಗಾಗಲೇ ನಿರ್ಮಾಣವಾಗಿರುವ ಇ ಎಸ್ ಐ ಆಸ್ಪತ್ರೆಯನ್ನು ಉದ್ಘಾಟಿಸಲು ಸಾಧ್ಯವಾಗಲಿಲ್ಲ ಅದನ್ನು ಈ ಕೂಡಲೇ ಉದ್ಘಾಟನೆ ಮಾಡುವಲ್ಲಿ ಕ್ರಮ ವಹಿಸಲಿ. ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ಕಳೆದ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಆಗಿರುವುದು ಬಿಟ್ಟರೆ ಪ್ರಸ್ತುತ ಯಾವುದೇ ಕಾಮಗಾರಿ ನೆಡೆದಿಲ್ಲ ಎಂದರು.
ಕ್ರಿಯಾ ಯೋಜನೆ ರೂಪಿಸುವ ಸಂದರ್ಭದಲ್ಲಿ ನಗರಸಭೆಯ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಮಾಡಬೇಕಿತ್ತು. ಆದರೆ ಅಲ್ಪಸಂಖ್ಯಾತರ ಅನುದಾನಗಳ ಬಳಕೆ ಶೇಕಡಾ 50%ರಷ್ಟು ಅಲ್ಪಸಂಖ್ಯಾತರಿರುವ ವಾರ್ಡ್ ಗಳಲ್ಲಿ ನೆಡೆದಿಲ್ಲ, ಪ್ರತಿ ವಾರ್ಡ್ ನಲ್ಲಿ 20ಲಕ್ಷ ಯೋಜನೆ ತೋರಿದ್ದಾರೆ ಆದರೆ ಆ ಮೊತ್ತದ ಕಾಮಗಾರಿ ಎಲ್ಲೂ ನೆಡೆದಿಲ್ಲ, ಕೇವಲ ಬಿಜೆಪಿ ಜೆಡಿಎಸ್ ಸದಸ್ಯರ ವಾರ್ಡ್ ಗಳಿಗೆ ಮಾತ್ರ ಅನುದಾನ ನೀಡಿದ್ದು, ಕಾಂಗ್ರೆಸ್ ಸದಸ್ಯರ ವಾರ್ಡ್ ಗಳಿಗೆ ಯಾವುದೇ ಅನುದಾನ ನೀಡಿಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರ ನೀಡಿರುವ ಅನುದಾನ ಕಾಂಗ್ರೆಸ್ ನಗರಸಭಾ ಸದಸ್ಯರಿಗೆ ಅನುದಾನ ನೀಡಿಲ್ಲ,ಪ್ರತಿ ಕಾಮಗಾರಿ ಮತ್ತು ಯೋಜನೆಗಳ ಅನುಷ್ಠಾನಕ್ಕೆ ನಿಷ್ಠಾಚಾರ ಪಾಲನೆ ಮಾಡಿ ಪಕ್ಷ ತೀತವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ತಾಲ್ಲೂಕಿನ ಅಭಿವೃದ್ಧಿಯ ಕಡೆ ಗಮನ ಹರಿಸಿ ಎಂದರು.

ಬೈರೇಗೌಡ ಮಾತನಾಡಿ ಕಾಂಗ್ರೆಸ್ ಪಕ್ಷದ ಶಾಸಕರಾಗಲಿ ಯಾವುದೇ ಮುಖಂಡರಾಗಲಿ ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆ ಮಾಡುವ ಮನಸ್ಥಿತಿ ಇಲ್ಲ, ನಮ್ಮಿಂದ ಯಾವುದೇ ಕಾರ್ಯಕ್ಕೆ ಅಡ್ಡಿಯಿಲ್ಲ, ನಮ್ಮ ನಗರಸಭಾ ಸದಸ್ಯ ಮಧ್ಯೆ ಜಗಳ ಮೂಡಿಸುವ ಹೇಳಿಕೆ ನೀಡುವುದು ಸರಿಯಿಲ್ಲ ನಮ್ಮಲ್ಲಿ ಒಗ್ಗಟ್ಟಿದೆ ನಮ್ಮಲ್ಲಿ ಒಡಕುಗಳಿಲ್ಲ ಎಂದರು.
Ad
ನೇಕಾರ ಸಮಸ್ಯೆಗಳ ಬಗ್ಗೆ
ನೇಕಾರರು ಇತಿಹಾಸದಲ್ಲಿ ಯಾರಿಗೂ ನೀಡದಷ್ಟು ಹೆಚ್ಚು ಮತಗಳನ್ನು ತಾಲ್ಲೂಕಿನ ಜನತೆ ಶಾಸಕರಿಗೆ ನೀಡಿದ್ದಾರೆ, ನೇಕರರಿಗೆ ಸಂಬಂಧಪಟ್ಟಂತೆ ಅವರ ಯೋಜನೆ ತಂತ್ರಜ್ಞಾನ ಬದಲಾದಂತೆ ಮುಂದೆ ಬದಲಾವಣೆ ಆಗುತ್ತದೆ, ಆದರೆ ನೇಕಾರರಿಗೆ ಮುಖ್ಯವಾಗಿ ಬೇಕಿರುವುದು ಮಾರುಕಟ್ಟೆ ವ್ಯವಸ್ಥೆ ಅದರ ಕಡೆ ಗಮನ ಹರಿಸುವ ಮೂಲಕ ತಾಲ್ಲೂಕಿನ ನೇಕಾರರಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಮಾಡಬೇಕಿದೆ.ನೇಕಾರರ ಮಾರುಕಟ್ಟೆಗೆ ಮಿಸಲಿಟ್ಟಿದ ಸ್ಥಳದಲ್ಲಿ AC ಕಚೇರಿ ನಿರ್ಮಿಸಲು ಮುಂದಾಗಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿವೆ. ಶಾಸಕರು ಈ ಕುರಿತು ಮೊದಲೇ ನಿರ್ಧಾರಿಸಿರುವ ಜಗದಲ್ಲೇ ಮಾರುಕಟ್ಟೆ ನಿರ್ಮಿಸುವ ಮೂಲಕ ತಾಲೂಕಿನ ಅಭಿವೃದ್ಧಿಗೆ ಸಹಕರಿಸಬೇಕಿದೆ ಎಂದರು.

ಸುದ್ದಿಗೊಷ್ಟಿಯಲ್ಲಿ ನಗರ ಘಟಕ ಅಧ್ಯಕ್ಷ ಕೆ ಪಿ ಜಗನ್ನಾಥ್, ನಗರ ಸಭಾ ಸದಸ್ಯರಾದ ಶಿವಶಂಕರ್, ಶಿವು, ಕಸಭಾ ಬ್ಲಾಕ್ ಅಧ್ಯಕ್ಷ ವೆಂಕಟೇಶ್, ಅಲ್ಪಸಂಖ್ಯಾತರ ಅಧ್ಯಕ್ಷ ಬಷೀರ್, ನಗರಸಭಾ ಸದಸ್ಯರಾದ ಆನಂದ್, ಅಲ್ತಾಫ್, ನಾಗವೇಣಿ, ನಾಗರಾಜು, ಶಿವಣ್ಣ, ಎಚ್.ಬಿ ಅಖಿಲೇಶ್, ವಾಣಿ, ಕಾಂಗ್ರೆಸ್ ಮುಖಂಡ ಮಂಜುನಾಥ್, ಸುಬ್ರಮಣಿ, ಶ್ರೀವಾಸ್, ಫಯಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
