ದೊಡ್ಡಬಳ್ಳಾಪುರ : ಸಬ್ ರಿಜಿಸ್ಟರ್ ಕಛೇರಿಗೆ ಡಿ. 26 ರಂದು ದಿಡೀರ್ ಭೇಟಿ ಕೊಟ್ಟ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಸಬ್ ರಿಜಿಸ್ಟರ್ ಕಛೇರಿಯಲ್ಲಿ ಸಾಕಷ್ಟು ಸಾರ್ವಜನಿಕರಿಂದ ದೂರುಗಳನ್ನು ಬರುತ್ತಿರುವ ಹಿನ್ನಲೆ ಇಂದು ಬೆಳಗ್ಗೆ ಕಂದಾಯ ಸಚಿವರಾದ ಕೃಷ್ಣಬೈರೇಗೌಡರು ಕಛೇರಿಗೆ ಭೇಟಿ ನೀಡಿದರು, ಕಛೇರಿ ಪ್ರಾರಂಭದ ಸಮಯ ಬೆಳಗ್ಗೆ 10 ಗಂಟೆಗೆ ಬಂದಿದ್ದರು, ಆದರೆ ಕಚೇರಿಯಲ್ಲಿ ಒಬ್ಬರು ಇಬ್ಬರು ಬಿಟ್ಟರೆ ಬೇರೆ ಯಾವ ಸಿಬ್ಬಂದಿಯೂ ಇರಲಿಲ್ಲ, ಮುಖ್ಯವಾಗಿ ಕಛೇರಿಯ ಮುಖ್ಯ ಅಧಿಕಾರಿಯಾದ ಸಬ್ ರಿಜಿಸ್ಟರ್ ಬಂದಿರಲಿಲ್ಲ,
ಸಚಿವರು ಬಂದ ಸುದ್ಧಿ ತಿಳಿದ ತಕ್ಷಣವೇ ಉಪವಿಭಾಗಧಿಕಾರಿ ದುರ್ಗಶ್ರೀ, ವಿಭಾವಿದ್ಯಾ ರಾಥೋಡ್ ಮತ್ತು ಜಿಲ್ಲಾಧಿಕಾರಿಗಳಾದ ಶಿವಶಂಕರ್ ಸ್ಥಳಕ್ಕೆ ಆಗಮಿಸಿದರು, ಸಾರ್ವಜನಿಕರ ಎದುರೇ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ ಖಾಲಿ ಕುರ್ಚಿ ಕಂಡು ಕೋಪಗೊಂಡ ಸಚಿವರು ತಾಲ್ಲೂಕು ದಂಡಧಿಕಾರಿ ಹಾಗೂ ಉಪವಿಭಾಗಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳು ಬೆಳ್ಳಿಗೆ 10:30 ಆದರೂ ಇನ್ನೂ ಕೆಲಸಕ್ಕೆ ಹಾಜರಾಗಿಲ್ಲ, ಯಾವಾಗ ಕೆಲಸಕ್ಕೆ ಬರೋದು, ಜನ ಬಂದ್ಮೇಲೆ ನೀವು ಬರೋದಾ, ನಾನು ಎಲ್ಲೊ ಕುಳಿತು ಕೇಳುತ್ತಿಲ್ಲ, ನಿಮ್ಮ ಆಫೀಸ್ ನಲ್ಲಿ ಕುಳಿತು ಕೇಳ್ತಾ ಇದ್ದೀನಿ, ಎಲ್ಲಿ ನಿಮ್ಮ ಸಬ್ ರಿಜಿಸ್ಟರ್, ಜನರು ಬಂದು ಕಾಯ್ತಾ ಇರಬೇಕು ಆಗ ನಿಮ್ಮ ಪ್ರವೇಶ, ಅಲ್ವಾ, ನೀವು ಪಾಳೇಗಾರರು, ರಾಜರು ಜನರು ಬಂದ ಕಾದ ನಂತರ ನೀವು ಬರೋದು ಎಂದು ತರಾಟೆಗೆ ತೆಗೆದುಕೊಂಡರು
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಭೇಟಿ ನೀಡಿದ ವೇಳೆ ಶೇಕಡಾ 90 ರಷ್ಟು ಅಧಿಕಾರಿಗಳು ಕೆಲಸಕ್ಕೆ ಬಂದಿಲ್ಲ, 11 ಗಂಟೆಯಾದರು ಕೆಲವು ಆಫೀಸ್ ಗಳು ಓಪನ್ ಆಗಿಲ್ಲ, ವ್ಯವಸ್ಥೆ ಅವ್ಯವಸ್ಥೆಯಾಗಿ ಕಾಣುತ್ತಿದೆ ಇದನ್ನ ಮುಚ್ಚಿಡುವುದರಿಂದ ನಮಗೆ ಶೋಭೆ ತರುವುದಿಲ್ಲ, ಆಡಳಿತ ವ್ಯವಸ್ಥೆಯಲ್ಲಿ ಬೇಜಾವಬ್ದಾರಿತನ ಎದ್ದು ಕಾಣುತ್ತಿದೆ, ನಾನು ಬೆಂಗಳೂರಿನಿಂದ ಬಂದಿದ್ದೇನೆ, ಸುದ್ದಿ ತಿಳಿದ ತಕ್ಷಣ ಜಿಲ್ಲಾಧಿಕಾರಿಗಳು ಡಿಸಿ ಆಫೀಸ್ ನಿಂದ ಬಂದಿದ್ದಾರೆ ಆದರೆ ಇಲ್ಲಿ ಕೆಲಸ ಮಾಡುವ ಅಧಿಕಾರಿಗಳು ಬಂದಿಲ್ಲ, ನಾನು ಬಂದ ಮೇಲು ಕೆಲವರು ಹಾಜರಾತಿ ರಿಜಿಸ್ಟರ್ ಗೆ ಸಹಿ ಹಾಕುತ್ತಿದ್ದರು, ಇದು ವಾಸ್ತವ ಚಿತ್ರಣ ನಾನು ಮುಚ್ಚಿಟ್ಟು ಮಾತಾಡ ಬಹುದು ಆದರೆ ನನಗೆ ಆತ್ಮವಂಚನೆ ಆಗಲಿದೆ ಎಂದರು
ಸರ್ಕಾರಿ ವ್ಯವಸ್ಥೆಯಲ್ಲಿ ಜನರ ಕೆಲಸಗಳಿಗೆ ಆದ್ಯತೆ ನೀಡ ಬೇಕು ಆದರೆ ಇಲ್ಲಿ ಅದು ಕಾಣುತ್ತಿಲ್ಲ, ಕೆಲವು ಪ್ರಮಾಣಿಕ ಅಧಿಕಾರಿಗಳಿದ್ದಾರೆ, ಆದರೆ ಕೆಲವು ಅಧಿಕಾರಿಗಳು ನಮಗಾಗಿ ಜನರಿದ್ದಾರೆಂದು ಭಾವಿಸಿದ್ದಾರೆ, ವ್ಯವಸ್ಥೆ ಸರಿ ಇಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಹೇಳಿದ್ದೇನೆ ಸರಿ ಮಾಡುವ ಜವಬ್ಧಾರಿ ಜಿಲ್ಲಾಧಿಕಾರಿಗಳಿದೆ, ಆಡಳಿತ ವ್ಯವಸ್ಥೆಯೇ ಈಗಿರುವಾಗ ಜಿಲ್ಲಾಧಿಕಾರಿ ಒಬ್ಬರಿಂದ ಇದು ಸಾಧ್ಯವಿಲ್ಲ, ಹಾಗಾಂತ ನಾವು ನಿಸಹಾಯಕರಾಗಿರುವುದಕ್ಕೆ ಸಾಧ್ಯವಿಲ್ಲ.ಜಿಲ್ಲಾಧಿಕಾರಿಗಳು ಆಗಾಗ ತಾಲೂಕು ಕಛೇರಿಗಳಿಗೆ ಭೇಟಿ ಕೊಟ್ಟು ಅವ್ಯವಸ್ಥೆಯನ್ನ ಸರಿಪಡಿಸ ಬೇಕೆಂದು ಸೂಚನೆ ಕೊಟ್ಟಿದ್ದೇನೆ ಎಂದರು
ಸರ್ಕಾರಿ ಕಛೇರಿಯಲ್ಲಿನ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಹೊಸ ಯೋಜನೆ
ಭೇಟಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸರ್ಕಾರಿ ಕಛೇರಿಯಲ್ಲಿನ ಮಧ್ಯವರ್ತಿಗಳ ಹಾವಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಬ್ ರಿಜಿಸ್ಟರ್ ಆಫೀಸ್, ತಹಶೀಲ್ದಾರ್ ಕಛೇರಿ, ರೆಕಾರ್ಡ್ ರೂಮ್ ಸೇರಿದಂತೆ ಎಲ್ಲ ಕಡೆಯೂ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ, ಸಾರ್ವಜನಿಕರು ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ಜನರೇ ನೇರವಾಗಿ ಕೆಲಸಗಳನ್ನ ಮಾಡಿಸಿಕೊಳ್ಳುವ ವ್ಯವಸ್ಥೆ ತರಲು ನಾವು ಮುಂದಾಗಿದ್ದೇವೆ ಎಂದರು.
ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳು ಅಧಿಕಾರಿಗಳ ಹೆಸರಲ್ಲಿ ಸಾರ್ವಜನಿಕರ ಸೂಲಿಗೆ ಮಾಡುತ್ತಿದ್ದಾರೆ , ನಕಲಿ ದಾಖಲೆಗಳನ್ನ ಸೃಷ್ಠಿಸಿ, ನೋಂದಣಿ ಮಾಡಿಸುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ , ಮಧ್ಯವರ್ತಿಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಿದೆ. ಭೂ ದಾಖಲಾತಿಗಳನ್ನು ರೆಕಾರ್ಡ್ ರೂಮ್ ನಿಂದ ಹಣ ಕೊಡದೆ ಪಡೆಯಲು ಸಾಧ್ಯವಿಲ್ಲ, ಹಣ ನೀಡದೆ ಯಾವುದೇ ದಾಖಲೆಗಳನ್ನು ಕೊಡುವುದಿಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿದೆ, ಆ ಕಾರಣದಿಂದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಆ ದಾಖಲೆಗಳನ್ನು ಆನ್ ಲೈನ್ ಗೆ ಬೀಡ್ತಾ ಇದ್ದೇವೆ, ಲ್ಯಾಂಡ್ ಗ್ರ್ಯಾಂಡ್, ಒಎಂ, ಸಾಗುವಳಿ ಚೀಟಿ ಇಂತಹ ದಾಖಲೆಗಳನ್ನ ಆನ್ ಲೈನ್ ನಲ್ಲಿ ಹಾಕುವುದರಿಂದ ಸ್ವತಃ ಜನರೇ ನೋಡಿಕೊಳ್ಳಬಹುದಾಗಿದೆ ಜೊತೆಗೆ ದಾಖಲಾತಿಗಳು ತಿದ್ದುವ ಅಥವಾ ಮರು ಸೃಷ್ಟಿ ಮಾಡುವ ಪ್ರಮಯಗಳು ಕಡಿಮೆಯಾಗುತ್ತದೆ ಎಂದರು
ಭೂರಕ್ಷ ಯೋಜನೆಯಡಿ ಜನವರಿ ಮೊದಲ ವಾರದಿಂದಲೇ ಈ ಕೆಲಸ ಮಾಡಲು ಮುಂದಾಗಿದ್ದು, ರಾಜ್ಯದ 220 ಸಬ್ ರಿಜಿಸ್ಟರ್ ಕಛೇರಿಗಳಲ್ಲಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಆನ್ಲೈನ್ ಮಾಡಲಾಗುತ್ತಿದೆ ಎಂದರು. ಈ ಕೆಲಸದಿಂದ ದಾಖಲೆಗಳನ್ನು ತಿದ್ದುವ ಕೆಲಸ ಆಗುವುದಿಲ್ಲ ಎಂದರು, ಇಲ್ಲಿಯವರೆಗೂ ಸಾಕಷ್ಟು ದಾಖಲೆಳನ್ನ ತಿದ್ದಿದ್ದಾರೆ , ಇನ್ಮೇಲೆಯಾದರು ದಾಖಲೆಗಳನ್ನ ತಿದ್ದುವ ಕೆಲಸ ಆಗಬಾರದು, ಹಾಗೆಯೇ ದಾಖಲೆಗಳ ಕಳವು ಸಹ ಆಗುವುದಿಲ್ಲ ದಾಖಲೆಗಳು ಶಾಶ್ವತವಾಗಿ ಉಳಿಯುತ್ತವೆ ಎಂದರು.
