
ದೊಡ್ಡಬಳ್ಳಾಪುರ : ಇಂಡಿಗೋ ಬ್ಲೂ ಕಂಪನಿಯಿಂದ ಕಲುಷಿತ ನೀರು, ಚರಂಡಿಗೆ ಬಿಡುತ್ತಿದ್ದಾರೆಂದು ಆರೋಪಿಸಿ ಅರ್ಕಾವತಿ ಹೋರಾಟ ಸಮಿತಿಯ ಹೋರಾಟಗಾರರು ಬಹಳ ದಿನಗಳಿಂದಲೂ ಕಂಪನಿಯ ವಿರುದ್ಧ ಆರೋಪಿಸುತ್ತಿದ್ದೂ ಈ ವಿಚಾರದ ಸತ್ಯಾಸತ್ಯತೆ ತಿಳಿಯಲೆಂದು ಸ್ವತಃ ದೊಡ್ಡಬಳಾಪುರ ಕ್ಷೇತ್ರದ ತಹಶೀಲ್ದಾರ್, ಮಾಲಿನ್ಯ ನಿಯಂತ್ರ ಮಂಡಳಿ ಅಧಿಕಾರಿಗಳು, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯ ಅಧಿಕಾರಿಗಳು, ಸ್ಥಳೀಯ ಕೆಲವು ಜನಪ್ರತಿನಿಧಿಗಳು, ಪೋಲಿಸ್ ಅಧಿಕಾರಿಗಳು ಸೇರಿದಂತೆ ಮಾಧ್ಯಮ ಪ್ರತಿನಿಧಿಗಳು ಸಹ ಇಂಡಿಗೋ ಬ್ಲೂ ಕಂಪನಿಯ ಬಳಿ ಜಮಾಯಿಸಿದ್ದರು.
ಇತ್ತೀಚಿನ ದಿನಗಳಲ್ಲಿ ದೊಡ್ಡ ತುಮಕೂರು ಕೆರೆ ಕಲುಷಿತ ನೀರಿನ ವಿಚಾರ ಪದೇ ಪದೇ ಹೆಚ್ಚುತ್ತಿದ್ದು ಕೆರೆ ಹೋರಾಟಕ್ಕೆ ಸಂಬಂದಿಸಿದಂತೇ ಹೋರಾಟಗಳು ನಡೆಯುತ್ತಲೇ ಇವೆ. ಕೆರೆಗೆ ಬಹಳಷ್ಟು ರೀತಿಯಲ್ಲಿ ಕಲುಷಿತ ನೀರು ಹರಿದು ಬರುತ್ತಿದ್ದು ನೀರು ಕುಡಿಯಲು ಹಾಗೂ ಯಾವುದೇ ರೀತಿಯಲ್ಲೂ ಬಳಕೆ ಮಾಡಲು ಸಾಧ್ಯವಾಗದ ಸ್ಥಿತಿಗೆ ತಲುಪಿರುವುದು ಎದ್ದು ಕಾಣುತ್ತಿದೆ.
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿಯ ಬ್ಯಾಂಕ್ ಸರ್ಕಲ್ ನ ಇಂಡಿಗೋ ಬ್ಲೂ ಕಂಪನಿಯಿಂದ ಕಲುಷಿತ ನೀರು, ಚರಂಡಿಗೆ ಬಿಡುತ್ತಿದ್ದಾರೆಂದು ಆರೋಪಿಸಿ ಅರ್ಕಾವತಿ ಹೋರಾಟ ಸಮಿತಿಯ ಹೋರಾಟಗಾರರು ಬಹಳ ದಿನಗಳಿಂದಲೂ ನಿರಂತರ ಹೋರಾಟ ನಡೆಸಿಕೊಂಡು ಬರುತ್ತಿತ್ತು,
ಈ ಸಂಬಂಧ ಕಾರ್ಖಾನೆಗೆ ಭೇಟಿ ಕೊಟ್ಟ ಅಧಿಕಾರಿಗಳ ತಂಡವು ಅರ್ಕಾವತಿ ಹೋರಾಟ ಸಮಿತಿಯ ಸದಸ್ಯರು ಕಲುಷಿತ ನೀರು ಬಿಡುತ್ತಿದ್ದಾರೆಂದು ಆರೋಪಿಸಿ ತೋರಿಸಿದ ಜಾಗದಲ್ಲಿದ್ದ ಕಬ್ಬಿಣದ ಪೈಪ್ ಕಟ್ ಮಾಡಿಸಿದರು, ಆದರೆ ಅಲ್ಲಿ ದೊರೆತಿದ್ದು ಕುಡಿಯುವ ನೀರಾಗಿತ್ತೇ ಹೊರತು ಯಾವುದೇ ರೀತಿಯ ಕಲುಷಿತ ನೀರು ಕಂಡುಬಂದಿಲ್ಲ. ಆ ಕುಡಿಯುವ ನೀರನ್ನು ತಹಶಿಲ್ದಾರ್ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹಾಗೂ ಹೋರಾಟಗಾರರ ಮುಂದೆ ಕುಡಿದು ಪರೀಕ್ಷಿಸಲಾಯಿತು.
ಅರ್ಕಾವತಿ ಹೋರಾಟ ಸಮಿತಿಯ ಸದಸ್ಯರ ಆರೋಪ ನಿರಾಧಾರ ಎಂದು ತಿಳಿದ ತಕ್ಷಣ ಅಲ್ಲಿವರೆಗೂ ಇಂಡಿಗೋ ಬ್ಲೂ ಕಂಪನಿಯ ವಿರುದ್ಧ ಆಪಾದನೆಗಳನ್ನು ಹೊರಿಸಿದ್ದ ಅರ್ಕಾವತಿ ಹೋರಾಟ ಸಮಿತಿಯ ಪ್ರಮುಖರು ಅಧಿಕಾರಿಗಳು ಸರಿಯಾದ ಬೆಂಬಲ ಕೊಡದ ಕಾರಣ ಇಂದಿನ ದಿನ ನಾವು ಸತ್ಯಾಸತ್ಯತೆ ತಿಳಿಯಲು ಸಾಧ್ಯವಾಗಲಿಲ್ಲವೆಂದು ಅಧಿಕಾರಿಗಳ ಮೇಲೆ ದೂರಿದರು.
ಇಂಡಿಗೋ ಬ್ಲೂ ಕಂಪನಿಯ ಆಡಳಿತ ವರ್ಗದವರು ಮಾತನಾಡಿ ಪದೇಪದೇ ನಮ್ಮ ಕಂಪನಿಯ ಮೇಲೆ ದೂರುವುದು ಸರಿಯಲ್ಲ. ಪ್ರತಿಯೊಬ್ಬರ ಜೀವ ಮತ್ತು ಜೀವನ ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ಕಂಪನಿ ಯಾವುದೇ ರೀತಿಯ ಕಲುಷಿತ ನೀರನ್ನು ಹೊರಗೆ ಬಿಡುವ ಕಾರ್ಯವನ್ನು ಮಾಡಿಲ್ಲ ಹಾಗೂ ಮಾಡುವುದೂ ಇಲ್ಲ. ಸುಮಾರು 15 ಕೋಟಿ ಬಂಡವಾಳ ಹೂಡಿಕೆ ಮಾಡಿ ಕಂಪನಿಯ ಒಳಗಡೆ ನೀರನ್ನು ಶುದ್ಧೀಕರಣಮಾಡುವ ವಿಧಾನವನ್ನು ಮಾಡಿದ್ದೇವೆ, ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಇಲ್ಲಿ ಸುಮಾರು 3000ಕ್ಕೂ ಹೆಚ್ಚು ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು ಅವರನ್ನೇ ನಂಬಿರುವ ಹನ್ನೆರಡು ಸಾವಿರಕ್ಕೂ ಹೆಚ್ಚು ಜೀವಗಳು ಕಂಪನಿಯನ್ನು ನಂಬಿಕೊಂಡಿವೆ ನಿಮಗೇನು ಬೇಕೋ ಇವತ್ತೇ ಪರೀಕ್ಷಿಸಿಕೊಳ್ಳಿ ಆದರೆ ಆಗಾಗ ಬಂದು ಸುಖಾಸುಮ್ಮನೆ ತೊಂದರೆ ಕೊಡಬೇಡಿ ಎಂದು ಹೇಳಿದರು.
ಎಲ್ಲಾ ಪರೀಕ್ಷೆಗಳು ಮುಗಿದು ಕಲುಷಿತ ನೀರು, ಹೊರಗೆ ಬರುತ್ತಿಲ್ಲವೆಂದು ಅರಿವಾದ ನಂತರ ಇಂಡಿಗೋ ಬ್ಲೂ ಕಂಪನಿಯವರು ಇಂದಿನ ಬೆಳವಣಿಗೆಗಳ ಕುರಿತು ನೀರು ಬರುತ್ತಿಲ್ಲವೆಂದು ಸಹಿ ಸಂಗ್ರಹಣಕ್ಕೆ ಮುಂದಾಗ ಅರ್ಕಾವತಿ ಹೋರಾಟ ಸಮಿತಿಯ ಯಾರೊಬ್ಬರೂ ಸಹಿ ಹಾಕದೇ ಇಂದು ಸೋತಿದ್ದೇವೆ ಒಂದಲ್ಲ ಒಂದು ದಿನ ಗೆದ್ದೇ ಗೆಲ್ಲುತ್ತೇವೆ ಎಂದು ಸೋಲು ಗೆಲುವಿನ ಮಾತನಾಡಿದ್ದು ಕಂಡುಬಂದಿತು.