
ಹಲವಾರು ಬಾರಿ ನಮ್ಮ ಕುಂದುಕೊರತೆಗಳು ಹಾಗೂ ಬೇಡಿಕೆಗಳ ಬಗ್ಗೆ ಸರ್ಕಾರ ಮತ್ತು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಈ ಬಾರಿ ನಮ್ಮ ಬೇಡಿಕೆಗಳನ್ನು ಈಡೇರಿಸುವ ವರೆಗೂ ನಮ್ಮೆಲ್ಲರ ( ಶುಶೂಷಾಧಿಕಾರಿಗಳ) ಅನಿರ್ಧಿಷ್ಟಾವಧಿ ಆಹೋರಾತ್ರಿ ಧರಣಿ ನೆಡೆಯಲಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆ ಶುಕ್ರೂಷಾಧಿಕಾರಿಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಪಿ. ಎನ್. ರಾಧಾ ಸುರೇಶ್ ತಿಳಿಸಿದ್ದಾರೆ.
ರಾಷ್ಟ್ರೀಯ ಆರೋಗ್ಯ ಅಭಿಯಾನ ಗುತ್ತಿಗೆ ಆಧಾರದ ಶುಶೂಷಾಧಿಕಾರಿಗಳು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಮಟ್ಟದಲ್ಲಿ ಇದೆ ಫೆಬ್ರವರಿ 24 ರಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಬೆಂಬಲಕ್ಕೆ ಮುಂದಾಗಿದ್ದು ಈ ಕುರಿತು vijayamitra.Com web news ಜೊತೆ ಮಾತನಾಡಿದ ಅವರು ನಮ್ಮ ಕಷ್ಟ, ಸಮಸ್ಯೆಗಳನ್ನು ಕೇಳುವವರಿಲ್ಲ, ಹಲವಾರು ಬಾರಿ ಮನವಿ ಅಹವಾಲುಗಳನ್ನು ಸಲ್ಲಿಸಿದರು ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಹಾಗಾಗಿ ಈ ಬಾರಿ ರಾಜ್ಯಾದ್ಯಂತ ನಮ್ಮ NHM ಒಳಗುತ್ತಿಗೆ ಶುಶೂಷಾಧಿಕಾರಿಗಳು ಒಟ್ಟಾಗಿ ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ನಿರ್ಧರಿಸಿದ್ದೇವೆ ಎಂದರು.
15-20 ವರ್ಷಗಳಿಂದ ನಿರಂತರವಾಗಿ ಒಳಗುತ್ತಿಗೆ ಆಧಾರದಲ್ಲಿ ಅತೀ ಕಡಿಮೆ ವೇತನದಲ್ಲಿ ಯಾವುದೇ ಸೌಲಭ್ಯಗಳಿಲ್ಲದೇ ಖಾಯಂ ನೌಕರರಿಗಿಂತ ಹೆಚ್ಚಾಗಿ ಇಲಾಖೆಯು ವಹಿಸಿದ ಎಲ್ಲಾ ಕೆಲಸಗಳನ್ನು ಚಾಚೂ ತಪ್ಪದೇ ನಿರ್ವಹಿಸಿದ್ದೇವೆ,ಕೋವಿಡ್-19 ಸಂದರ್ಭದಲ್ಲೂ ನಾವು ನಮ್ಮ ಕುಟುಂಬವನ್ನು ಬಿಟ್ಟು ಜೀವದ ಹಂಗು ತೊರೆದು ಹಗಲಿರುಳೆನ್ನದೇ ಸಾರ್ವಜನಿಕರಿಗೆ ಪ್ರಾಮಾಣಿಕ ಸೇವೆ ನೀಡಿದ್ದೇವೆ, ಆದರೆ ನಮ್ಮ ಸಮಸ್ಯೆ ಹಾಗೂ ಬೇಡಿಕೆಗಳನ್ನು ಕೇವಲ ಭರವಸೆಗಳಿಗೆ ಸೀಮಿತ ಮಾಡಲಾಗಿದೆ ಎಂದರು.
ಹೋರಾಟ ಕೇವಲ ಭರವಸೆಗೆ ಸೀಮಿತವಾಗದಿರಲಿ
ಪ್ರತಿ ಬಾರಿಯೂ ರಾಜ್ಯದ ಮೂಲೆ ಮೂಲೆಗಳಿಗೆ ಬರುವ ಶುಶೂಷಾಧಿಕಾರಿಗಳು ಹೋರಾಟ ನಡೆಸುವುದು ಸರ್ಕಾರದ ಕೆಲವು ಭರವಸೆ ಹಾಗೂ ಒತ್ತಡಗಳಿಗೆ ಮಣಿದು ಮತ್ತೆ ಕರ್ತವ್ಯಕ್ಕೆ ಹಿಂದಿರುಗುವುದು ಸಾಮಾನ್ಯವಾಗಿದೆ ಎಂಬುದು ಕೆಲವರ ಆರೋಪ ಈ ಬಾರಿಯ ಹೋರಾಟವು ಹಾಗೆ ಆಗುವುದೇ….????
ಹೋರಾಟ ಕೇವಲ ಭರವಸೆಗೆ ಸೀಮಿತವಾಗಿದೆ ಎಂಬಂತೆ ಕಾಣುತ್ತದೆ , ಪ್ರತಿ ಬಾರಿ ಹೋರಾಟ ದಿಕ್ಕು ತಪ್ಪಲು ಹಲವಾರು ಕಾರಣಗಳು ಎದುರಾಗುತ್ತಿವೆ ಪ್ರಮುಖವಾಗಿ ನಾಯಕತ್ವದ ಕೊರತೆ, ಶುಶೂಷಾಧಿಕಾರಿಗಳ ಸಹಕಾರ, ಇತರೆ ಎಂಬುದು ಹಲವರ ವಾದ . ಆದರೆ ಈ ಬಾರಿಯ ಹೋರಾಟವು ಎಂದಿನಂತೆ ಭರವಸೆಗಳಿಗೆ ಸೀಮಿತವಾಗದೆ ಸೂಕ್ತ ಪರಿಹಾರ ಪಡೆಯುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ ರಾಜ್ಯದ ಶುಶೂಷಾಧಿಕಾರಿಗಳ ಬೇಡಿಕೆಗಳು ಸಂಪೂರ್ಣವಾಗಿ ಈಡೇರಲಿ ಎಂಬುದೇ ವಿಜಯಮಿತ್ರ ಆಶಿಸುತ್ತದೆ.
ಹಲವಾರು ಬಾರಿ ನಮ್ಮ ಕುಂದುಕೊರತೆಗಳು ಹಾಗೂ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೇವೆ, ಈ ಬಾರಿ ನಮ್ಮೆಲ್ಲರ ಶಕ್ತಿ ಪ್ರದರ್ಶನ ತೋರುವಮೂಲಕ ನಮ್ಮ ಹಕ್ಕು ಪಡೆಯುವ ಕಾರ್ಯಕ್ಕೆ ಮುಂದಾಗೋಣ ರಾಜ್ಯ ಪ್ರತಿ ಜಿಲ್ಲೆ ಹಾಗೂ ತಾಲ್ಲೂಕಿನಿಂದ ಶುಶೂಷಾಧಿಕಾರಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದು , ಸರ್ವರೂ ಸ್ವಯಂ ಪ್ರೇರಿತರಾಗಿ ಈ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.