
ದೊಡ್ಡಬಳ್ಳಾಪುರ : ತಾಲ್ಲೂಕಿನ ಅಂತರಹಳ್ಳಿಯ ಎಚ್ ರಾಮಯ್ಯನವರ ಧರ್ಮಪತ್ನಿ ರುದ್ರಮ್ಮ(77) ಅವರು ನಿಧನರಾಗಿದ್ದಾರೆ
ರುದ್ರಮ್ಮ ರವರು ತಾಲ್ಲೂಕಿನ ಹಲವಾರು ಸಂಘ ಸಂಸ್ಥೆಗಳಿಗೆ ಶಾಲೆಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ,ರುದ್ರಮ್ಮರವರ ಪತಿ ಹೆಚ್.ರಾಮಯ್ಯರವರು ನಿವೃತ್ತ ಇಂಜಿನಿಯರ್ ಆಗಿದ್ದು, ರಾಜಾಜಿನಗರದ ವಾಣಿ ಮಹಿಳಾ ಪ್ರೌಢಶಾಲೆ ಅಧ್ಯಕ್ಷರಾಗಿ ಹಾಗೂ ಸಿಟಿಜನ್ ಕೋಅಪಪರೇಟಿವ್ ಬ್ಯಾಂಕ್ ನ ಮಾಜಿನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಇವರ ನಿಧನಕ್ಕೆ ದೊಡ್ಡಬಳ್ಳಾಪುರ ತಾಲ್ಲೂಕಿನ ಮಾಜಿ ಶಾಸಕ ಗಂಟಿಗಾನಹಳ್ಳಿ ಕೃಷ್ಣಪ್ಪ,ಕಂಟನಕುಂಟೆ ಪಂಚಾಯ್ತಿ ಮಾಜಿ ಅದ್ಯಕ್ಷ ನಾರಾಯಣಸ್ವಾಮಿ,ಅಂತರಹಳ್ಳಿ ಅಶೋಕ, ರಾಜಕೀಯ ಮುಖುಂಡರಾದ ಕೋಳೂರು ನಂಜೇಗೌಡ,ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.