
ಕ್ರಿಟಿಕಲ್ ಇಲ್ ನೆಸ್ ಫಂಡ್ ಕಾರ್ಯಕ್ರಮ ಅಡಿಯಲ್ಲಿ ಮಂಜೂರಾಗಿದ್ದ 37,500ರೂಗಳ ಸಹಾಯಧನ ವನ್ನು ದೊಡ್ಡಬಳ್ಳಾಪುರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಎನ್. ಆರ್.ದಿನೇಶ್ ಚಿಕ್ಕ ಬೆಳವಂಗಲ ಗ್ರಾಮದ ಫಲನುಭವಿ ಸುರೇಖಾರವರಿಗೆ ವಿತರಣೆ ಮಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕು ಇವರ ವತಿಯಿಂದ ದೊಡ್ಡ ಬೆಳವಂಗಲ ಹೋಬಳಿಯ ಚಿಕ್ಕ ಬೆಳವಂಗಲ ಗ್ರಾಮದ ಧರ್ಮೇಂದ್ರರವರ ಪತ್ನಿ ಸುರೇಖಾರವರು ತೀವ್ರ ತರದ ಕಾಯಿಲೆಯಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗೆ ಕ್ರಿಟಿಕಲ್ ಇಲ್ ನೆಸ್ ಫಂಡ್ ಕಾರ್ಯಕ್ರಮ ಅಡಿಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿಯಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 37,500/ ಸಹಾಯಧನ ಮಂಜೂರಾತಿ ಮಾಡಿದ್ದು ಈ ದಿನ ತಾಲ್ಲೂಕು ಯೋಜನಾಧಿಕಾರಿ ದಿನೇಶ್ N.R ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ದೊಡ್ಡ ಬೆಳವಂಗಳ ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಶಿವಕುಮಾರ್,ತೊಪಯ್ಯ, ಜಿಲ್ಲಾ ಜನಜಾಗೃತಿ ಸದಸ್ಯರಾದ ಧರ್ಮೇಂದ್ರ, ಮೇಲ್ವಿಚಾರಕರಾದ ಅನ್ನಪೂರ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.