ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ ನಲ್ಲಿ ನಡೆದ ಡಯಾಬಿಟಿಕ್ ಉಚಿತ ತಪಾಸಣಾ ಶಿಬಿರ ಮತ್ತು ಮರೆಗುಳಿತನ ತರಬೇತಿ ಶಿಬಿರ ನೆಡೆಯಿತು
ಶ್ರೀ ದಿವ್ಯ ಜ್ಞಾನಾನಂದ ಪುಷ್ಪಾಂಡಜ ಸ್ವಾಮೀಜಿ ಹಾಗೂ ಗಣ್ಯ ವರ್ಗ ದೀಪ ಬೆಳಗುವ ಮೂಲಕ ಸಮಾರಂಭದ ಉದ್ಘಾಟನೆಯನ್ನು ಮಾಡಿದರು.

ಉಳ್ಳವರ ಹತ್ತಿರ ಪಡೆದು ಇಲ್ಲದವರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಿ ಅವರ ನೈತಿಕ ಸ್ಥೈರ್ಯ . ಆರೋಗ್ಯ ಸ್ವಾವಲಂಭನೆಯ ಬದುಕನ್ನು ರೂಪಿಸುವಂತೆ ಮಾಡುವುದೇ ಈ ಸಮಾಜದ ದೇವರ ಕೆಲಸವಾಗುತ್ತದೆ. ಸರ್ಕಾರ ಮಾಡುವ ಕೆಲಸವನ್ನು ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ ಮಾಡುತ್ತಾ ಬರುತ್ತಿದೆ ಎಂದು ಶ್ರೀ ದಿವ್ಯ ಜ್ಞಾನಾನಂದ ಪುಷ್ಪಾಂಡಜ ಸ್ವಾಮೀಜಿ ತಿಳಿಸಿದರು.

ನೈಟಿಂಗೆಲ್ ಸಂಸ್ಥೆ ವತಿಯಿಂದ 121 ಜನರಿಗೆ ಮರೆಗುಳಿತನದ ಕಾರಣಗಳು ಹಾಗು ಪರಿಹಾರಗಳ ಬಗ್ಗೆ ತರಬೇತಿ ನೀಡಲಾಯಿತು, ಹಾಗೂ ಬ್ಲೂ ಕಂಪನಿಯವರಿಂದ ಪ್ರತಿಯೊಬ್ಬರಿಗೂ ಉಚಿತ ಔಷದಿ ವಿತರಣೆ ಮಾಡಲಾಯಿತು

ಸಮಾರಂಭದ ಅಧ್ಯಕ್ಷರಾದ ಲಯನ್ ಅದ್ಯಕ್ಷರಾದ ಲಯನ್ ಎಸ್ ವಿ ನಂಜುಂಡೇಶ್ವರಸ್ವಾಮಿ , ವೇದಿಕೆಯಲ್ಲಿ ಲಯನ್ ಹುಲಿಕಲ್ ನಟರಾಜ್ ಲಯನ್ ಎನ್ ಜಗಧೀಶ್, ಲಯನ್ ಮಹಾಲಕ್ಷ್ಮಿ ನಂಜುಂಡೇಶ್ವರ್ ದಾನಿಗಳಾದ ಎಸ್ ವಿ ಮಲ್ಲಪ್ಪದೇವುಡು ಮತ್ತು ಲಯನ್ ಪ್ರಸನ್ನಕುಮಾರ್ ಲಯನ್ ಎಂ ಪಿ ಸಿ ವೆಂಕಟೇಶ್ ಉಪಸ್ಥಿತರಿದ್ದರು
