ದೊಡ್ಡಬಳ್ಳಾಪುರ : ಮಾನ್ ಸ್ಟರ್ (MONSTER) ಚಲನಚಿತ್ರದ ನಿರ್ಮಾಪಕರು ಹಾಗೂ ಸಮಾಜಸೇವಕರಾದ ಪುಟ್ಟರಾಜುರೆಡ್ಡಿ ರವರ ಹುಟ್ಟುಹಬ್ಬದ ಸಂಭ್ರಮ ಅದ್ದೂರಿಯಾಗಿ ಆಚರಿಸಲಾಯಿತು.
ನೂರಾರು ಗಣ್ಯರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಶ್ರೀಯುತರಿಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಮಾಜಕ್ಕೆ ಉತ್ತಮ ಸಂದೇಶಉಳ್ಳ, ಪ್ರಸ್ತುತ ವಾಸ್ತವಿಕ ಸ್ಥಿತಿಯನ್ನು ಮಕ್ಕಳ ಮನಸ್ಸಿನ ಗೊಂದಲವನ್ನು ಅವರ ಮೇಲೆ ಮಾದಕವಸ್ತುಗಳು ಭೀರುವ ಪ್ರಭಾವ ಅದರಿಂದ ಉಂಟಾಗುವ ತೊಂದರೆಗಳ ಸುತ್ತ ಈ ಮಾನ್ ಸ್ಟರ್ ಕಥೆ ನೆಡೆಯಲ್ಲಿದ್ದು, ಸಮಾಜದ ನೈಜತೆಯನ್ನು ಸಿನಿಮಾ ಮೂಲಕ ಹೇಳಲು ಹೊರಟಿದ್ದೇವೆ ಎಂದರು.

ಈ ಸಿನಿಮಾದಲ್ಲಿ ನಟ ಧರ್ಮ ಕೀರ್ತಿರಾಜ್, ತ್ರಿಲರ್ ಮಂಜು, ತುಕಾಲಿ ಸಂತೋಷ್, ನವಾಜ್ ಸೇರಿದಂತೆ ನಲವತ್ತಕ್ಕೂ ಅಧಿಕ ಅದ್ದೂರಿ ಕಲಾವಿದರ ತಂಡ ನಟಿಸಿದೆ ಅಲ್ಲದೇ ನಮ್ಮ ತಾಲ್ಲೂಕಿನ ಪ್ರತಿಭೆಗಳಾದ ಕಾಂತ್ ರಾಜ್ , ಅಂಜಿ,ಸೇರಿದಂತೆ ಹಲವು ಪ್ರತಿಭಾನ್ವಿತ ಕಲಾವಿದರು ಈ ಚಲನಚಿತ್ರದಲ್ಲಿ ನಟನೆ ಮಾಡಿದ್ದಾರೆ ಎಂದರು.

ಇನ್ನೂ ಕೆಲವೇ ದಿನಗಳಲ್ಲಿ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಅದ್ದೂರಿ ಕಾರ್ಯಕ್ರಮ ಮಾಡುವ ಮೂಲಕ ಮಾನ್ ಸ್ಟರ್ (MONSTER ) ಚಿತ್ರದ ಪ್ರಿ ರಿಲೀಸ್ ಇವೆಂಟ್ ಮಾಡಲಾಗುವುದು, ಕಾರ್ಯಕ್ರಮ ನೆಡೆಸಲು ಸಕಲ ಸಿದ್ಧತೆ ಮಾಡಲಾಗಿದೆ ಎಂದರು.
