ದೊಡ್ಡಬಳ್ಳಾಪುರ : ಕೆನರಾಬ್ಯಾಂಕ್ ವತಿಯಿಂದ ತಾಲ್ಲೂಕಿನ ಕೊನಘಟ್ಟ ಗ್ರಾಮದಲ್ಲಿ 3 ತಿಂಗಳ ಹಣಕಾಸು ಸೇರ್ಪಡೆ ಅಭಿಯಾನ ಕಾರ್ಯಕ್ರಮ ನೆಡೆಯಿತು.
ಕೊನಘಟ್ಟ ಗ್ರಾಮದ ಕೆನರಾಬ್ಯಾಂಕ್ ಮುಂಭಾಗದ ನೆಡೆದ ಕಾರ್ಯಕ್ರಮದಲ್ಲಿ PMJDY, APY, REKYC, PMSBY, PMJJYY ಯೋಜನೆಗಳಗೆ ಬಗ್ಗೆ ಹಾಗೂ ಬ್ಯಾಂಕ್ ನಿಂದ ಗ್ರಾಹಕರಿಗೆ ಸಿಗುವ ಸವಲತ್ತುಗಳ ಬಗ್ಗೆ ಕೊನಘಟ್ಟ ಕೆನರಾಬ್ಯಾಂಕ್ ಘಟಕದ ವ್ಯವಸ್ಥಾಪಕರಾದ ಉದಯ್ ಕಿರಣ್ ತಿಳಿಸಿದರು.
ಬ್ಯಾಂಕಿನಿಂದ ವರ್ಷಕ್ಕೆ 20 ರೂಗಳ ವಿಮೆಪಡೆಯುವ ಮೂಲಕ ಅಫಘಾತಗಳಲ್ಲಿ ಮೃತಪಟ್ಟರ ಕುಟುಂಬಕ್ಕೆ ಕನಿಷ್ಠ ಎರಡು ಲಕ್ಷ ರೂಪಾಯಿಗಳ ವಿಮಾಹಣ ದೊರೆಯಲಿದ್ದು ಈ ವಿಮೆಯನ್ನು ಎಲ್ಲಾ ಗ್ರಾಹಕರು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಇತ್ತೀಚಿನ ದಿನಗಳಲ್ಲಿ ಕೆಲವರು ಬ್ಯಾಂಕಿನ ಹೆಸರಲ್ಲಿ ಜನರಿಗೆ ಹಲವರು ವಂಚನೆ ಮಾಡಲು ಮುಂದಾಗಿದ್ದಾರೆ. ವಂಚನೆಗೆ ಒಳಗಾದ ಸಂದರ್ಭಗಳಲ್ಲಿ ಗ್ರಾಹಕರು 1930 ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸುವುದರಿಂದ ಶೀಘ್ರ ಸಹಾಯ ಪಡೆಯಬಹುದಾಗಿದೆ ಎಂದರು.

ಲಿಂಗನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ನಂಜಮರಿಯಪ್ಪನವರು ಮಾತನಾಡಿ ನಮ್ಮ ಗ್ರಾಮದಜನ ಮೊದಲು ಬ್ಯಾಂಕಿನ ವಹಿವಾಟು ನೆಡೆಸಲು ದೊಡ್ಡಬಳ್ಳಾಪುರ ನಗರಕ್ಕೆ ಹೋಗಬೇಕಿತ್ತು. ದೇವರ ದಯೆಯಿಂದ ಈಗ ಕೊನಘಟ್ಟ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಕರ್ತವ್ಯ ನಿರ್ವಹಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ನಮ್ಮೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಐಎಡಿಬಿ ಯಿಂದ ಬಹಳಷ್ಟು ಹಣ ಬಂದಿದೆ. ಇಂತಹ ಸಂದರ್ಭದಲ್ಲಿ ಕೊನಘಟ್ಟ ಕೆನರಾ ಬ್ಯಾಂಕಿನಲ್ಲಿ ಹಣ ಠೇವಣಿ ಮಾಡುವುದರಿಂದ ಬ್ಯಾಂಕ್ ಸಹ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಕಾಣಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಶ್ರೀಶಂಬುಲಾಲ್, ಕೊನಘಟ್ಟ ಕೆನರಾಬ್ಯಾಂಕ್ ಘಟಕದ ವ್ಯವಸ್ಥಾಪಕರಾದ ಉದಯಕಿರಣ್, ದೇವನಹಳ್ಳಿ ಪ್ರಾದೇಶಿಕ ಕಛೇರಿ ಕೆನರಾ ಬ್ಯಾಂಕ್ ನ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶ್ರೀಕೃಷ್ಣ ಚೈತನ್ಯರೆಡ್ಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀರಾಮಾಂಜಿ ಹಾಗೂ ಸ್ಥಳೀಯ ಮುಖಂಡರಾದ ರಾಮಾಂಜಿನಪ್ಪ. ನಂಜಮರಿಯಪ್ಪ, ಸುಬ್ಬಣ್ಣ ಸೇರಿದಂತೆ ಕೊನಘಟ್ಟ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
