ಮೈತ್ರಿ ಸರ್ವ ಸೇವಾ ಸಮಿತಿ (ಸಮಗ್ರ ಕೃಷಿ ಘಟಕ) ವತಿಯಿಂದ ಹಾಡೋನಹಳ್ಳಿ ಕೆವಿಕೆ ಸಹಯೋಗದೊಂದಿಗೆ ಸಾವಯವ ಸಂತೆ ಮತ್ತು ಸ್ಥಳೀಯ ರೈತರಿಗೆ ಅರಿವು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಕೆವಿಕೆ ಹಿರಿಯ ವಿಜ್ಞಾನಿ ಹನುಮಂತ ರಾಯಪ್ಪ ಮಾತನಾಡಿ ಯಾವುದೇ ವ್ಯವಸಾಯ ಮಾಡಿದರೆ ಮುಂದೆ ಬೆಳೆ ಬೆಳೆಯಲು ರೈತರಿಗೆ ಸಹಾಯಕ ಹಾಗೂ ಪೂರಕವಾಗಿರಬೇಕು.. ನಮ್ಮ ವ್ಯವಸಾಯ ಭೂಮಿಯ ಫಲವತ್ತಾತೆ ಕಾಪಾಡುವ ನಿಟ್ಟಿನಲ್ಲಿ ಕೃಷಿ ಮಾಡಬೇಕಾಗಿದೆ. ರಾಸಾಯನಿಕ ಗೊಬ್ಬರ ಹೆಚ್ಚಾಗಿ ಬಳಸದೆ ಸಾವಯವ ಕೃಷಿಗೆ ಮುಂದಾಗಬೇಕು ಎಂದರು.

ಹಾಡೋನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ನಾಗರಾಜ್ ಮಾತನಾಡಿ ಈ ಕಾರ್ಯಕ್ರಮವು ಪ್ರಾರಂಭವಾಗಿ 2ವರ್ಷ ಕಳೆದಿದೆ. ಅನಿರೀಕ್ಷಿತ ಭೇಟಿ ಮೈತ್ರಿ ಸರ್ವ ಸೇವಾ ಸಮಿತಿ ಹಾಡೋನಹಳ್ಳಿ ಗೆ ಬರಲು ಸಾಧ್ಯವಾಯಿತು. ಈ ಭಾಗದ ಹಲಸಿನ ಹಣ್ಣಿಗೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ದೊರೆತಿದ್ದು, ನಮ್ಮಲ್ಲಿ ಯಾವುದೇ ತರಕಾರಿ ಹಣ್ಣು ಹೂ ವ್ಯವಸಾಯ ಮಾಡಲು ಅತ್ಯಂತ ಅನುಕೂಲಕರವಾಗಿದ್ದು, ನಮ್ಮ ಭಾಗದಲ್ಲಿ ಈ ಸಾವಯವ ಕೃಷಿಗೆ ಸೂಕ್ತ, ಹಾಗಾಗಿ ಸಾವಯವ ಕೃಷಿಯನ್ನು ರೈತರಿಗೆ ಅಭ್ಯಾಸ ಮಾಡಿಸುವ ಮೂಲಕ ಸಂಪ್ರದಾಯಿಕ ಕೃಷಿ ಪದ್ಧತಿ ಬೆಳೆಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ಎಂದರು.

ಜೈ ಕಿಸಾನ್ ಸಂಸ್ಥೆಯ ಸತೀಶ್ ಮಾತನಾಡಿ ರೈತರಿಗೆ ವ್ಯವಸಾಯ ಕುರಿತು ತಿಳುವಳಿಕೆ ಕೊರತೆಯಿಂದಾಗಿ ಈಗಿನ ಭೂ ಫಲವತ್ತತೆ ಸಮಸ್ಯೆಗೆ ಕಾರಣವಾಗಿದೆ. ಸಮಗ್ರ ಕೃಷಿ ನಿರ್ವಹಣೆಯಿಂದಾಗಿ ಭೂಮಿಯ ಫಲವತ್ತತೆ ಕಾಪಾಡಬಹುದಾಗಿದೆ ಈ ಬಗ್ಗೆ ರೈತರಿಗೆ ತಿಳುವಳಿಕೆ ನೀಡುವ ಮೂಲಕ ಸರಿಯಾದ ಪ್ರಮಾಣದಲ್ಲಿ ರಾಸಾಗೊಬ್ಬರಗಳನ್ನು ಭೂಮಿಗೆ ಒದಗಿಸುವ ಬಗ್ಗೆ ಸ್ಥಳೀಯ ಕೃಷಿಕರಿಗೆ ಮಾಹಿತಿ ನೀಡುವ ಸಲುವಾಗಿ ಹಲವಾರು ತರಬೇತಿ ನೀಡುತ್ತಿದ್ದೇವೆ.ರಸಗೊಬ್ಬರಗಳ ಸಮರ್ಪಕ ಬಳಕೆ ಮುಖ್ಯ ಅದನ್ನು ರೈತರು ಅರಿತುಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮೈತ್ರಿ ಸರ್ವ ಸೇವಾ ಸಮಿತಿ (ಸಮಗ್ರ ಕೃಷಿ ಘಟಕ)ಯ ಪದಾಧಿಕಾರಿಗಳು, ಜೈ ಕಿಸಾನ್ ಸಂಸ್ಥೆಯ ಪ್ರಮುಖರು, ಸ್ಥಳೀಯ ರೈತರು ಹಾಜರಿದ್ದರು.
