
ದೊಡ್ಡಬಳ್ಳಾಪುರ : ಗ್ರಾಮೀಣ ಭಾಗದ ಜನರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಮಾಡಬಹುದಾದ ಒಂದು ರಕ್ತಪರೀಕ್ಷೆಯ ಮೂಲಕ ಹೃದಯ ವೈಫಲ್ಯವನ್ನು ಪತ್ತೆಹಚ್ಚಿ, ತ್ವರಿತವಾಗಿ ಚಿಕಿತ್ಸೆ ನೀಡುವ ಸಾಧ್ಯತೆ ಕುರಿತು ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿಯ ಕ್ವಾಲಿಟಿ ಸಮಿಟ್ ನಲ್ಲಿ – ರಕ್ತಪರೀಕ್ಷೆ ಮೂಲಕ ಹೃದಯ ವೈಫಲ್ಯವನ್ನು ಪತ್ತೆಹಚ್ಚಿ, ತ್ವರಿತ ಚಿಕಿತ್ಸೆ ನೀಡುವ ಸಾಧ್ಯತೆ ಕುರಿತು ದೊಡ್ಡಬಳ್ಳಾಪುರದ ಹೀಲ್ ಆಸ್ಪತ್ರೆ ವೈದ್ಯ ಡಾ.ಅರ್ಜುನ್ ತಿಳಿಸಿದರು.
ಪ್ರಬಂಧ ಮಂಡನೆ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು ಅಕ್ಟೋಬರ್ 14 ಮತ್ತು 15 ರಂದು ಅಮೆರಿಕಾದ ಕೊಲೊರಾಡೋ ರಾಜ್ಯದ ಡೆನ್ವರ್ನಲ್ಲಿ ನಡೆದ ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿಯ ಕ್ವಾಲಿಟಿ ಸಮಿಟ್ 2025 ನಲ್ಲಿ ಫ್ಯಾಕಲ್ಟಿಯಾಗಿ ನನ್ನ ಸಂಶೋಧನಾ ಪ್ರಬಂಧವನ್ನು ಪ್ರಸ್ತುತಪಡಿಸುವ ಅವಕಾಶ ದೊರಕಿತು. ಅತ್ಯಂತ ಕಡಿಮೆ ವೆಚ್ಚದಲ್ಲಿ ಮಾಡಬಹುದಾದ ರಕ್ತಪರೀಕ್ಷೆಯ ಮೂಲಕ ಹೃದಯ ವೈಫಲ್ಯವನ್ನು ಪತ್ತೆಹಚ್ಚಿ, ತ್ವರಿತವಾಗಿ ಚಿಕಿತ್ಸೆ ನೀಡುವ ಸಾಧ್ಯತೆ ಕುರಿತು ಈ ಪ್ರಬಂಧವನ್ನು ಪ್ರಸ್ತುತಪಡಿಸಲಾಯಿತು ಎಂದರು.
ಈ ಫಲಿತಾಂಶಗಳನ್ನು ಜಗತ್ತಿಗೆ ತಿಳಿಸಿ, ಪ್ರಪಂಚದ ಎಲ್ಲ ಗ್ರಾಮೀಣ ಭಾಗದ ಜನರಿಗೆ ಈ ಸೌಲಭ್ಯ ಲಭ್ಯವಾಗಬೇಕೆಂಬುದೇ ನನ್ನ ಉದ್ದೇಶ ಎಂದು ತಿಳಿಸಿದ್ದಾರೆ.