ದೊಡ್ಡಬಳ್ಳಾಪುರ : 2082 ದಿನದ ದಾನಿಗಳಾಗಿ ಸಮಾಜಸೇವಕರಾದ ತಾವರೆ ಕೆರೆ ಸೋಮಶೇಖರ್ ರವರು ಜಯಲಕ್ಷ್ಮೀ ಇವರ ಹುಟ್ಟು ಹಬ್ಬದ ಅಂಗವಾಗಿ ನಿರ್ಗತಿಕ ಕಡುಬಡವರಿಗೆ , ವೃದ್ಧರಿಗೆ, ಅನ್ನ ದಾಸೋಹ, ಹೊದಿಕೆ ವಿತರಣೆ, ಬಟ್ಟೆ ವಿತರಣೆ ಮಾಡುವ ಮೂಲಕ ತಮ್ಮ ವಿಶೇಷ ದಿನವನ್ನು ನಿರಂತರ ಅನ್ನದಾಸರ ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ಆಚರಿಸಿದರು.

ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ಕಾರಣಾಂತರಗಳಿಂದ ಸಮಾಜ ಸೇವಕರಾದ ಸೋಮಶೇಖರ್ ರವರು ಬರಲು ಸಾಧ್ಯವಾಗಲಿಲ್ಲ , ಆದರೆ ತಾವು ನಿಗದಿಪಡಿಸಿದ ಕಾರ್ಯಕ್ರಮವು ನಿಲ್ಲಬಾರದು ಎಂದು ದೂರವಾಣಿ ಮೂಲಕ ನಮ್ಮನ್ನು ಸಂಪರ್ಕಿಸಿ ಕಾರ್ಯಕ್ರಮವನ್ನು ಅವರ ಪರವಾಗಿ ಅನ್ನದಾಸೋಹ ಸಮಿತಿ ನಡೆಸುವಂತೆ ತಿಳಿಸಿದ ಹಿನ್ನಲೆ ಅವರ ವಿಶೇಷ ದಿನವನ್ನು ನಿರಂತರ ಅನ್ನದಾಸೋಹ ಸಮಿತಿ ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಿದೆ .

ಸಾವಿರಾರು ರೂಪಾಯಿಗಳನ್ನು ದುಂಡು ವೆಚ್ಚ ಮಾಡುವ ಮೂಲಕ ಹುಟ್ಟುಹಬ್ಬಗಳನ್ನು ವಿಶೇಷ ದಿನಗಳನ್ನು ಆಚರಿಸಿಕೊಳ್ಳುತ್ತಿರುವ ಇಂತಹ ಸಂದರ್ಭದಲ್ಲಿ ತಮ್ಮ ವಿಶೇಷ ದಿನವನ್ನು ನಿರ್ಗತಿಕ ಕಡುಬಡವರಿಗೆ, ವೃದ್ಧರಿಗೆ, ಶಾಲಾ ಮಕ್ಕಳಿಗೆ ಮೀಸಲಿಟ್ಟು ವಿಶೇಷ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಶ್ರೀಮತಿ ಜಯಲಕ್ಷ್ಮಿ ಅವರ ಹುಟ್ಟುಹಬ್ಬವನ್ನು ಆಚರಿಸುವುದು ಶ್ಲಾಘನೀಯ ಸಂಗತಿ . ಅವರ ಸೇವಾಕಾರ್ಯಗಳು ಮತ್ತಷ್ಟು ಹೆಚ್ಚಾಗಲಿ . ಅವರ ಉತ್ತಮ ಸೇವೆ ಸಮಾಜಕ್ಕೆ ಮತ್ತಷ್ಟು ಲಭಿಸಲಿ ಎಂದು ಶುಭ ಹಾರೈಸುತ್ತೇವೆ ಎಂದರು.

ಈ ವೇಳೆ ನಿರಂತರ ಅನ್ನದಾಸೋಹ ಸಮಿತಿಯ ಎಲ್ಲ ಪದಾಧಿಕಾರಿಗಳು ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.
