ದೊಡ್ಡಬಳ್ಳಾಪುರ : ಕೃಷಿಗೆ ಸೂಕ್ತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೃಷಿ ಸಂಬಂದಿಸಿದ ಕೆಲಸ ನಿರ್ವಹಣೆ ಮಾಡಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೃಷಿ ಮೇಲ್ವಿಚಾರಕರಿಗೆ ಅನುಕೂಲ ಕಲ್ಪಿಸಲು ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ನೂತನ ವಲಯ ಕಛೇರಿ ಪ್ರಾರಂಭ ಮಾಡಲಾಯಿತು
ಹಾಡೋನಹಳ್ಳಿ ಚೌಡೇಶ್ವರಿ ದೇವಾಲಯದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ನೂತನ ಕಛೇರಿಯಲ್ಲಿ ಲಕ್ಷ್ಮೀ ಪೂಜೆಯೊಂದಿಗೆ ಸಂಘದ ಸದಸ್ಯರಿಗೆ ಹಾಗೂ ಗ್ರಾಮಸ್ಥರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ನೂತನವಾಗಿ ಹಾಡೋನಹಳ್ಳಿ ಒಕ್ಕೂಟ ರಚನೆ ಮಾಡಿ ದಾಖಲಾತಿ ಹಸ್ತಾಂತರ ಮಾಡುವ ಮೂಲಕ ನೂತನ ಕಚೇರಿಗೆ ಚಾಲನೆ ನೀಡಲಾಯಿತು.
ತಾಲೂಕಿನ ಯೋಜನಾಧಿಕಾರಿಗಳಾದ ದಿನೇಶ್ ಎನ್.ಆರ್ ಒಕ್ಕೂಟದ ಪದಾಧಿಕಾರಿಗಳಾದ ಧನಂಜಯ್,ಸವಿತಾಆನಂದ್, ಕೃಷಿ ಮೇಲ್ವಿಚಾರಕರಾದ ಲೋಹಿತ್ ಗೌಡ ಮೇಲ್ವಿಚಾರಕರಾದ ಈರಣ್ಣ ಗಿರೀಶ್ ರೇಣುಕಾ ಪ್ರಸಾದ್,ಸೇವಾಪ್ರತಿನಿದಿಗಳು,ವಿ ಎಲ್ ಈ ಸೇವಾದಾರರು ಉಪಸ್ಥಿತರಿದ್ದರು
