ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ನೀಡುವ “ಅಕಾಡೆಮಿ ಬಾಲ ಗೌರವ ಪ್ರಶಸ್ತಿ “ಗೆ ತಾಲ್ಲೂಕಿನ ಯೋಗ ಪ್ರತಿಭೆ ಕುಮಾರಿ ಎಂ. ಆರ್. ಜಾಹ್ನವಿ ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ನಿಸರ್ಗ ಯೋಗ ಕೇಂದ್ರ(ರಿ)ದ ವಿದ್ಯಾರ್ಥಿನಿ ಅಂತರರಾಷ್ಟ್ರೀಯ ಯೋಗ ಪಟು ಯಲಹಂಕ ನಾಗಾರ್ಜುನ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಎಂ. ಆರ್. ಜಾಹ್ನವಿ ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ದಾರವಾಡ ಪ್ರತಿಷ್ಠಿತ ಪ್ರಶಸ್ತಿಯಾದ ಅಕಾಡೆಮಿ ಬಾಲ ಗೌರವ ಪ್ರಶಸ್ತಿ. ಗೆ ಆಯ್ಕೆಯಾಗಿದ್ದಾರೆ.
ಇವರಿಗೆ ಕರ್ನಾಟಕ ಸ್ಟೇಟ್ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ಎ.ನಟರಾಜ್ (ಯೋಗ) ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ಅಧ್ಯಕ್ಷ ಪ್ರೊ ಎಂ .ಜಿ. ಅಮರ್ನಾಥ್ ಖಜಾಂಚಿ ಕೆ. ಆರ್. ಶ್ಯಾಮ ಸುಂದರ್ ಹಾಗೂ ನಿಸರ್ಗ ಯೋಗ ಕೇಂದ್ರ(ರಿ)ದ ಪದಾಧಿಕಾರಿಗಳು ಮತ್ತು ಯೋಗ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಶುಭ ಕೋರಿದ್ದಾರೆ
