ದೊಡ್ಡಬಳ್ಳಾಪುರ :: ಕಮಲ್ ಲೋಚನ್ ಸಾಹು ರವರ ಹುಟ್ಟು ಹಬ್ಬದ ಅಂಗವಾಗಿ ನಿರ್ಗತಿಕ ಕಡುಬಡವರಿಗೆ, ವೃದ್ಧರಿಗೆ ಹಾಗೂ ಶಾಲಾ ಮಕ್ಕಳಿಗೆ ನಿರಂತರ ಅನ್ನದಾಸೋಹ ಸಮಿತಿಯ ಸಹಯೋಗದೊಂದಿಗೆ ಅನ್ನದಾಸೋಹದ ಜೊತೆಗೆ ಹಣ್ಣು, ಸಿಹಿ ವಿತರಣೆ ಮಾಡಲಾಯಿತು

ತಾಲೂಕಿನ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿರಂತರ ಅನ್ನದಾಸೋಹ ಸಮಿತಿಯೋಟ್ಟಿಗೆ ಕಮಲ್ ಲೋಚನ್ ಸಾಹು ಕುಟುಂಬ ತಮ್ಮ ವಿಶೇಷ ದಿನವನ್ನು ಆಚರಿಸಿ ಕೊಂಡರು.

ಮಲ್ಲೇಶ್ ಮತ್ತು ತಂಡ ನಡೆಸಿಕೊಂಡು ಬರುತ್ತಿರುವ ನಿರಂತರ ಅನ್ನದಾಸೋಹದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಅಲ್ಲದೇ ನಮ್ಮ ವಿಶೇಷ ದಿನವನ್ನು ನೂರಾರು ಜನರ ಹಸಿವನ್ನು ನೀಗಿಸಲು ಆಹಾರ ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದೇವೆ ಎಂಬ ಸಂತೃಪ್ತಿ ಭಾವನೆ ಮೂಡಿದೆ ಮುಂದೆ ನಮ್ಮ ಕುಟುಂಬದ ಎಲ್ಲಾ ವಿಶೇಷ ಹಾಗೂ ಶುಭ ದಿನಗಳನ್ನು ನಿರಂತರ ಅನ್ನದಾಸಹ ಸಮಿತಿಯೋಟ್ಟಿಗೆ ಆಚರಿಸುತ್ತೇವೆ ಎಂದು ದಾನಿಗಳಾದ ಸುಚಿಸ್ಮಿತ ಸಾಹು ಮತ್ತು ಕಮಲ್ ಲೋಚನ್ ಸಾಹು ತಿಳಿಸಿದರು.

