ದೊಡ್ಡಬಳ್ಳಾಪುರ : ಕ ನ್ನಡ ಭಾಷೆಯೂ ನಮ್ಮ ನಾಡಿನಲ್ಲಿ ಮನೆ ದೇವರಂತೆ ಆರಾಧಿಸಿ, ವರ್ಷವೀಡಿ ಸ್ಮರಿಸಬೇಕು. ಈ ಮೂಲಕ ಭಾಷೆಯ ಹೆಚ್ಚಿನ ಬಳಕೆ ಮತ್ತು ಉಳಿವಿಗೆ ಪ್ರತಿಯೊಬ್ಬ ಕನ್ನಡಿಗನು ಕಾರ್ಯೋನ್ಮುಖನಾಗಬೇಕು ಎಂದು ಹಿರಿಯ ಕನ್ನಡ ಪರ ಹೋರಾಟಗಾರ ರಾಜಘಟ್ಟ ರವಿ ಹೇಳಿದರು.

ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಭಾನುವಾರ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯಿಂದ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ ಮತ್ತು ಸಂಘಟನೆಯ ೩ನೇ ವರ್ಷಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 1963 ರಲ್ಲಿ ಮಾ.ರಾಮಮೂರ್ತಿ ಸೇರಿದಂತೆ ಅನೇಕರು ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಕನ್ನಡಿಗರು, ಕನ್ನಡದ ಉಳಿವಿಗಾಗಿ ಬೃಹತ್ ಹೋರಾಟ ರೂಪಿಸಿದ್ದರು. ಅಂದು ಸರ್ಕಾರಕ್ಕೆ ನೀಡಿದ್ದ ಬೇಡಿಕೆಗಳಲ್ಲಿ ಒಂದಾದ ಕನ್ನಡ ರಾಜ್ಯೋತ್ಸವ ಆಚರಣೆ ಮಾತ್ರ ಜಾರಿಯಾಗಿದೆ. ಉಳಿದಂತೆ ಎಲ್ಲಾ ಅಂಶಗಳು ಇಂದಿಗೂ ಜಾರಿಯಾಗಿಲ್ಲ ಎಂದರು.
ಕನ್ನಡ ಪಕ್ಷದ ಉಪಾಧ್ಯಕ್ಷ ಸಂಜೀವನಾಯಕ್ ಮಾತನಾಡಿ ನಮ್ಮ ಅಕ್ಕಪಕ್ಕದ ರಾಜ್ಯಗಳಲ್ಲಿ ಪ್ರಾದೇಶಿಕತೆಯ ಅಸ್ಮಿತೆ ಇಂದಿಗೂ ಜೀವಂತವಾಗಿದೆ. ಅಲ್ಲಿನ ಸಂಸದರು ತಮ್ಮ ರಾಜ್ಯಕ್ಕೆ ಅಪಾಯ ಎದುರಾದರೆ ಒಂದಾಗಿ ಹೋರಾಟ ಮಾಡಿ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರುತ್ತಾರೆ. ನಮ್ಮ ರಾಜ್ಯದಲ್ಲಿನ ಸಂಸದರು ಮೂಕವಿಸ್ಮಿತರಂತೆ ನೋಡುತ್ತಾರೆ. ಹೀಗಾಗಿ ಮುಂದಿನ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾದೇಶಿಕವಾಗಿ ನೆಲ, ಜಲ, ಭಾಷೆ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಗಳಿಗೆ ಕನ್ನಡಿಗರು ಆದ್ಯತೆ ನೀಡಬೇಕು. ಹೋರಾಟದ ಮೂಲಕ ಎಂತಹ ದೊಡ್ಡ ಸಾಧನೆ ಬೇಕಾದರೂ ಮಾಡಬಹುದು. ನಗರದಲ್ಲಿ ಹೋರಾಟದ ಮೂಲಕವೇ 380 ಮನೆಗಳನ್ನ ಮಂಜೂರು ಮಾಡಿಸಲಾಗಿತ್ತು ಎಂದರು.

ಅಲ್ಪಸಂಖ್ಯಾತ ಮುಖಂಡ ಬಿ.ಜೆಡ್ ಫೈರೋಜ್ ಖಾನ್ ಮಾತನಾಡಿ ತಮ್ಮ ಮನೆಗಳಲ್ಲಿ ಯಾವುದೇ ಭಾಷೆ ಮಾತನಾಡಿದರೂ ಸಾರ್ವಜನಿಕವಾಗಿ ಪ್ರತಿಯೊಬ್ಬರು ಕನ್ನಡವನ್ನೆ ಮಾತನಾಡಬೇಕು. ಕನ್ನಡ ಉಳಿಸಲು ನಾವೆಲ್ಲಾ ಒಂದಾಗಿ ದುಡಿಯೋಣ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಕನ್ನಡ ಪರ ಹೋರಾಟಗರಾರದ ತ.ನ ಪ್ರಭುದೇವ, ಪ್ರಮಿಳಾ ಮಹದೇವ, ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ನಂಜಪ್ಪ, ಕಾರ್ಮಿಕ ಘಟಕದ ಅಧ್ಯಕ್ಷ ಹನುಮಂತರೆಡ್ಡಿ, ರಾಜ್ಯ ಸಮಿತಿಯ ಬಿ . ನಯಾಜ್ ಖಾನ, ಗಂಗರಾಜಪ್ಪ,ರಾಜ್ಯ ಯುವ ಘಟಕದ ಅಜಯ್, ಮಂಜುನಾಥ, ಪ್ರಮೋದ್, ಪೀರ್ ಪಾಷಾ, ಶಿವಕುಮಾರ್ ವೈರ್,ತಾಲೂಕು ಘಟಕದ ಅಧ್ಯಕ್ಷ ಸೋಮರಾಜು,ಕಾರ್ಯದರ್ಶಿ ಚಂದ್ರಶೇಖರಯ್ಯ, ವೆಂಕೋಬಾ, ವಿನಯ್ ಪ್ರಸಾದ್, ರಮೇಶ್,ಅಂಜಿನ ಮೂರ್ತಿ, ಅಬ್ದುಲ್ ಕಲೀಮ್, ರಾಧಾಕೃಷ್ಣ, ವೆಂಕಟೇಶ, ಮಹಿಳಾ ಘಟಕದ ಶಶಿಕಲಾ, ರೇಷ್ಮ,ಪದ್ಮಾವತಿ, ತಾಲೂಕ್ ಅಧ್ಯಕ್ಷೆ ನಾಗರತ್ನಮ್ಮ, ನವ್ಯ, ನಗರಾಧ್ಯಕ್ಷೆ ನಾಗವೇಣಿ, ರಾಗಿಣಿ ,ವಿಜಯಲಕ್ಷ್ಮಿ, ಸಂಕಲ್ಪ ಸೇರಿದಂತೆ ಹಲವರು ಇದ್ದರು.
