ಅಂಬೇಡ್ಕರ್ ನಗರ ( 16 ನೇ ವಾರ್ಡ್) ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮಂಜುಳಾ ನಾಮಪತ್ರ ಸಲ್ಲಿಕೆ

Spread the love

ದೊಡ್ಡಬಳ್ಳಾಪುರ ::ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಚುನಾವಣೆಗೆ ಅಂಬೇಡ್ಕರ್ ನಗರ ( 16 ನೇ ವಾರ್ಡ್)ನ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮಂಜುಳಾ ಶನಿವಾರ (ಡಿ. 06) ನಾಮಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು ನಮ್ಮ ಅಂಬೇಡ್ಕರ್ ನಗರದ ವಿಚಾರವಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕಂಡಿದ್ದೇನೆ . ನನ್ನ ಯೋಜನೆಗಳನ್ನು ಸಾಕಾರಗೊಳಿಸಲು ಇದೊಂದು ಉತ್ತಮ ಅವಕಾಶ ಎಂದು ಭಾವಿಸುತ್ತೇನೆ. ಸ್ಥಳೀಯ ಮತದಾರರ ವಿಶ್ವಾಸದಿಂದ ತಾಲೂಕಿನ ಯುವ ಶಾಸಕರಾದ ಧೀರಜ್ ಮುನಿರಾಜುರವರ ಆಶೀರ್ವಾದ ಪಡೆದು ತಾಲೂಕು ಹಾಗೂ ನಗರ ಮಟ್ಟದ ಎಲ್ಲಾ ಮುಖಂಡರ ಸಲಹೆ ಮೇರೆಗೆ ಇಂದು ಬಾಶೆಟ್ಟಿಹಳ್ಳಿ ಪಂಚಾಯತಿ ವ್ಯಾಪ್ತಿಯ 16ನೇ ವಾರ್ಡ್ ನ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಉತ್ತಮ ಸೇವೆ ಸಲ್ಲಿಸಲು ಮಾನ್ಯ ಮತದಾರರು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡುತ್ತೇನೆ ಎಂದರು.

ಈ ವೇಳೆ ಮುಖಂಡರಾದ ಮುನಿರಾಜಪ್ಪ,ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

© 2026 Malnad TV. All Rights Reserved.