ಬೀಳುವ ಅತಂತ್ರ ಸ್ಥಿತಿಯಲ್ಲಿ ಜಾಹಿರಾತು ಸೂಚನಾ ಫಲಕ : ಗಮನಹರಿಸದ ತೂಬಗೆರೆ ಪಂಚಾಯಿತಿ ಅಧಿಕಾರಿಗಳು

Spread the love

ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಗ್ರಾಮದ ಬಸ್ ನಿಲ್ದಾಣದಲ್ಲಿ ಕಳೆದ ಹಲವು ದಿನಗಳಿಂದ ಬೀಳುವ ಸ್ಥಿತಿಯಲ್ಲಿ ಜಾಹೀರಾತು ಸೂಚನಾ ಫಲಕವಿದ್ದು ತೆರವುಗೊಳಿಸುವಲ್ಲಿ ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಸೋತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ

ತೂಬಗೆರೆ ಪಂಚಾಯಿತಿ ಕಾರ್ಯಾಲಯಕ್ಕೆ ಕೇವಲ 100 ಮೀಟರ್ ಕೂಗಳತೆ ದೂರದಲ್ಲಿ ಇರುವ ಜಾಹೀರಾತು ಸೂಚನಾ ಫಲಕ ಇಂದೋ ನಾಳೆಯೋ ಬಿದ್ದು ಹೋಗುವ ಸ್ಥಿತಿಯಲ್ಲಿದ್ದು ಭಯದ ವಾತಾವರಣದಲ್ಲಿ ಪಾದಚಾರಿಗಳು ಹೊಡಾಡುವ ಪರಿಸ್ಥಿತಿ ಎದುರಾಗಿದೆ ಇನ್ನಾದರೂ ಪಂಚಾಯಿತಿ ಅಧಿಕಾರಿಗಳು ಎಚ್ಚೆದ್ದು ಸದರಿ ಜಾಹೀರಾತು ಸೂಚನಾ ಫಲಕವನ್ನು ಸರಿಪಡಿಸಿಬೇಕಾಗಿ ಅಥವಾ ತೆರವುಗೊಳಿಸಬೇಕಾಗಿ ಸ್ಥಳಿಯರು ಮನವಿ ಮಾಡಿದ್ದಾರೆ

ಕಳೆದ ಒಂದೂವರೆ ತಿಂಗಳಿನಿಂದ ಜಾಹೀರಾತು ಸೂಚನಾ ಫಲಕ ಇದೇ ( ಬೀಳುವ) ಸ್ಥಿತಿಯಲ್ಲಿ ಇದ್ದು ಪಂಚಾಯಿತಿ ಅಧಿಕಾರಿಗಳು ಗಮನಿಸದೆ ಇರುವುದು ವಿಪರ್ಯಾಸವೇ ಸರಿ ಈ ಕುರಿತು ಗಮನ ಹರಿಸಿ ಕೂಡಲೇ ಜಾಹೀರಾತು ಸೂಚನಾ ಫಲಕವನ್ನು ತೆರವುಗೊಳಿಸಬೇಕು ಇಲ್ಲವಾದಲ್ಲಿ ಸರಿಪಡಿಸಿ ಭದ್ರ ಪಡಿಸಲು ಸ್ಥಳೀಯ ಗ್ರಾಮಸ್ಥರು ಪಂಚಾಯಿತಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ

 

ವರದಿ

ಶಿವಕುಮಾರ್ ಸ್ವಾಮಿ ತೂಬಗೆರೆ

Leave a Reply

Your email address will not be published. Required fields are marked *