ದೊಡ್ಡಬಳ್ಳಾಪುರ: ಕರ್ನಾಟಕದಲ್ಲಿ ದಲಿತ ಚಳವಳಿಯನ್ನ ಪ್ರಾರಂಭಿಸಿದವರು ಪ್ರೋ.ಬಿ.ಕೃಷ್ಣಪ್ಪ, ಕರ್ನಾಟಕ ದಲಿತ ಚಳವಳಿಗೆ 50 ವರ್ಷಗಳು ತುಂಬಿದೆ, ಪ್ರೋ.ಬಿ. ಕೃಷ್ಣಪ್ಪ ಸ್ಥಾಪಿಸ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪನ ದಿನವಾದ ಇಂದು ದಸಂಸ ಸಂಭ್ರಮೋತ್ಸವ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಅಯೋಜನೆ ಮಾಡಲಾಗಿದ್ದು, ಈ ವೇಳೆ ಪ್ರೋ.ಬಿ.ಕೃಷ್ಣಪ್ಪನವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಕೊಡುವಂತೆ ಒತ್ತಾಯ ಮಾಡುವುದ್ದಾಗಿ ದಲಿತ ಮುಖಂಡರು ಹೇಳಿದರು.
ಬೆಂಗಳೂರಿನ ಗಾಂಧಿ ಭವನದ ಮಾದೇವ ದೇಸಾಯಿ ಭವನದಲ್ಲಿ ಇಂದು ದಸಂಸ ಸಂಭ್ರಮೋತ್ಸವ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ದೊಡ್ಡಬಳ್ಳಾಪುರದಿಂದ 300ಕ್ಕೂ ಹೆಚ್ಚು ಜನರು ಹೊರಟ್ಟರು, ಹೊರಡುವ ಮುನ್ನ ಡಾ.ಬಿ.ಆರ್.ಅಂಬೇಡ್ಕರ್, ಪ್ರೋ.ಬಿ. ಕೃಷ್ಣಪ್ಪನವರಿಗೆ ಜಯಕಾರ ಹಾಕಿದ ದಲಿತ ಸಂಘಟನೆಯ ಕಾರ್ಯಕರ್ತರು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು
ಈ ವೇಳೆ ಮಾತನಾಡಿದ ತಾಲೂಕು ಘಟಕದ ಅಧ್ಯಕ್ಷರಾದ ರಾಮು ನೇರಳೆಘಟ್ಟ, ದಲಿತ ಚಳವಳಿ ಎಂದರೆ ಪ್ರೋ.ಬಿ. ಕೃಷ್ಣಪ್ಪನವರ ಹೆಸರು ಬರುತ್ತದೆ, 1974ರಲ್ಲಿ ಭದ್ರಾವತಿಯಲ್ಲಿ ದಲಿತ ಚಳವಳಿಯನ್ನ ಹುಟ್ಟು ಹಾಕಿದ್ದು ಅವರು, ದಲಿತ ಚಳವಳಿಯನ್ನ ಇಡೀ ರಾಜ್ಯಕ್ಕೆ ಹರಡಿ ಮತ್ತು ಹೆಮ್ಮಯವಾಗಿ ಬೆಳೆಯಲು ಕಾರಣಕರ್ತರು , ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ 50 ವರ್ಷಗಳು ತುಂಬಿದ್ದು, ಸಂಸ್ಥಾಪನಾ ದಿನವಾದ ಇಂದು ದಸಂಸ ಸಂಭ್ರಮೋತ್ಸವ ಕಾರ್ಯಕ್ರಮವನ್ನ ಬೆಂಗಳೂರಿನಲ್ಲಿ ಅಯೋಜನೆ ಮಾಡಲಾಗಿದ್ದು, ಈ ವೇಳೆ ಪ್ರೋ.ಬಿ.ಕೃಷ್ಣಪ್ಪನವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುವಂತೆ ಒತ್ತಾಯಿಸಲಾಗುವುದು ಎಂದರು.
ತಾಲೂಕು ಘಟಕದ ಗೌರವ ಅಧ್ಯಕ್ಷರಾದ ನರಸಪ್ಪ ಶಿರವಾರ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನದಲ್ಲಿ ದಲಿತರ ಸಮಸ್ಯೆಗಳಿಗೆ ಸಾಮಾಜಿಕ ನ್ಯಾಯದ ಪರಿಹಾರಗಳನ್ನ ಹುಡುಕಿದವರು ಪ್ರೋ.ಬಿ ಕೃಷ್ಣಪ್ಪನವರು, ಕರ್ನಾಟಕದಲ್ಲಿ ದಲಿತ ಚಳವಳಿಯ ಹೋರಾಟದ ಕಾರಣದಿಂದ ದಲಿತರ ಗುಡಿಸಲುಗಳು ಹೆಂಚಿನ ಮತ್ತು ಸಿಮೆಂಟ್ ಶೀಟಿನ ತಗಡಿನ ಮನೆಗಳು ಬಂದವು, ಜೀತ ಮಾಡುತ್ತಿದ್ದ ದಲಿತರಿಗೆ ತುಂಡು ಭೂಮಿ ಸಿಕ್ಕಿತು, ಭೂ ಮಾಲೀಕರ ದನ ಎಮ್ಮೆ ಮೇಯಿಸುತ್ತಿದ್ದ ಹುಡುಗರು ಶಾಲೆಗೆ ಹೋದರು, ಶಾಲೆಯಲ್ಲಿ ಅಕ್ಷರ ಕಲಿತು ಅಧಿಕಾರ ಹಿಡಿದರು ಎಂದರು.
ತಾಲೂಕು ಘಟಕದ ಸಂಚಾಲಕರಾದ ಎಂ.ಕೆ.ನರೇಂದ್ರಮೂರ್ತಿ ಮಾತನಾಡಿ ಹೋರಾಟಗಾರರಾದ ಪ್ರೋ.ಬಿ.ಕೃಷ್ಣಪ್ಪನವರ ಅಪಾರವಾದ ತ್ಯಾಗವಿದೆ, ಅವರ ತ್ಯಾಗದ ಫಲವಾಗಿ ಕರ್ನಾಟಕದಲ್ಲಿ ದಲಿತರ ಸುಧಾರಣೆಯಾಗಿದೆ, ದಲಿತ ಚಳವಳಿಗೆ ಅವರ ಕೊಡುಗೆ ದೊಡ್ಡದ್ದು ಹಿನ್ನಲೆ ದಸಂಸ 50 ವರ್ಷ ಪೂರೈಸಿದ ಹಿನ್ನಲೆ ಬೆಂಗಳೂರಿನಲ್ಲಿ ಸಂಭ್ರಮೋತ್ಸವ ಆಚರಣೆ ಮಾಡಲಾಗುತ್ತಿದೆ, ಕಾರ್ಯಕ್ರಮದಲ್ಲಿ ಭಾಗಿಯಾಗಲು ದೊಡ್ಡಬಳ್ಳಾಪುರದಿಂದ 300ಕ್ಕೂ ಹೆಚ್ಚು ಹೋಗುತ್ತಿರುವುದ್ದಾಗಿ ಹೇಳಿದರು.
ಜಿಲ್ಲಾ ಸಮಿತಿ ಸಂಚಾಲಕರಾದ ದೊಡ್ಡಯ್ಯ ಮಾತನಾಡಿ ಮುಂದಿನ ದಿನಗಳಲ್ಲಿ ದಲಿತರ ಹೋರಾಟವನ್ನ ಮತ್ತಷ್ಟು ಚುರುಕುಗೂಳಿಸಲಾಗುವುದು, ದಲಿತರಿಗೆ ಅನ್ಯಾಯವಾದಲ್ಲಿ ನ್ಯಾಯ ಕೊಡಿಸುವ ಕೆಲಸವನ್ನ ನಮ್ಮ ಸಂಘಟನೆ ಮಾಡಲಿದೆ. ಗ್ರಾಮೀಣ ಭಾಗದಲ್ಲಿ ಸಂಚಾರಿಸುವ ಮೂಲಕ ದಲಿತರನ್ನ ಜಾಗೃತಗೊಳಿಸಲಾಗುವುದು ಎಂದರು.
ಈ ವೇಳೆ ತಾಲೂಕು ಘಟಕದ ಸಂಚಾಲಕರಾದ ಹನುಮಯ್ಯ, ಕಾರ್ಯದರ್ಶಿ ರಮೇಶ್ ಜಾಲಗೆರೆ, ಎನ್.ಎ.ನಾಗರಾಜ್ ನಾಗದೇನಹಳ್ಳಿ, ಸಹ ಕಾರ್ಯದರ್ಶಿ ರಮೇಶ್ ಹಾಲೇನಹಳ್ಳಿ, ಕುಮಾರ್ ತೂಬುಕುಂಟೆ, ಚೌಡಮೂರ್ತಿ ಕಸಘಟ್ಟ, ನರಸಿಂಹಯ್ಯ ಬೊಮ್ಮನಹಳ್ಳಿ, ಹನುಮಂತರಾಜು ಲಿಂಗಾಪುರ, ರಾಮಚಂದ್ರಪ್ಪ ಸಾಸಲು, ವೆಂಕಟೇಶ್ ಸೂಲುಕುಂಟೆ ಇದ್ದರು.
