ಕರ್ನಾಟಕ ಕಾಂಗ್ರೆಸಿಗರೇ…. ಯಾತಕ್ಕಾಗಿ ದಿಲ್ಲಿ ಚಲೋ ನಾಟಕ?? – ಸಂಸದೀಯ ಸಚಿವ ಪ್ರಲ್ಹದ್ ಜೋಶಿ

Spread the love

ತೆರಿಗೆ ಪಾಲು ಹಂಚಿಕೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ವಿರೋಧಿಸಿ ಫೆಬ್ರವರಿ 7ರಂದು ಬೆಳಗ್ಗೆ 11 ಗಂಟೆಗೆ ದೆಹಲಿಯ ಜಂತರ್ ಮಂತರ್ ಎದುರು ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಸಂಸದೀಯ ಸಚಿವರಾದ ಪ್ರಲ್ಹದ್ ಜೋಶಿ ಆಕ್ರೋಶ ಹೊರಹಾಕಿದ್ದಾರೆ

 

ತಮ್ಮ ಎಕ್ಸ್ ಸಂದೇಶದಲ್ಲಿ

ಕರ್ನಾಟಕ ಕಾಂಗ್ರೆಸಿಗರೇ….. ಯಾತಕ್ಕಾಗಿ ದಿಲ್ಲಿ ಚಲೋ ನಾಟಕ?

 

* ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಕನ್ನ ಹಾಕಿದ್ದೀರಲ್ಲಾ, ಅದಕ್ಕಾಗಿ ದಿಲ್ಲಿ ಚಲೋ ನಾಟಕವೇ?

* ರೈತರ ಮಕ್ಕಳಿಗೆ ನೀಡುತ್ತಿದ್ದ ರೈತನಿಧಿ ರದ್ದುಗೊಳಿಸಿದ್ದೀರಲ್ಲಾ, ಅದಕ್ಕಾಗಿ ದಿಲ್ಲಿ ಚಲೋ ನಾಟಕವೇ?

* ಧರ್ಮದ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದೀರಲ್ಲಾ, ಅದಕ್ಕಾಗಿ ದಿಲ್ಲಿ ಚಲೋ ನಾಟಕವೇ?

* ತುಷ್ಟೀಕರಣದ ರಾಜಕಾರಣ ಮಾಡಿ ರಾಜ್ಯದ ಜನರ ಶಾಂತಿ ಕದಡಿದ್ದೀರಲ್ಲಾ, ಅದಕ್ಕಾಗಿ ದಿಲ್ಲಿ ಚಲೋ ನಾಟಕವೇ?

* ಕನ್ನಡದ ಪರ ಹೋರಾಟ ಮಾಡಿದ ಕನ್ನಡಪರ ಸಂಘಟನೆಯ ಕಾರ್ಯಕರ್ತರನ್ನು ಜೈಲಿಗೆ ಕಳುಹಿಸಿ ಕನ್ನಡವಿರೋಧಿ ಎಂಬುದನ್ನು ಸಾಬೀತು ಪಡಿಸಿದ್ದೀರಲ್ಲಾ, ಅದಕ್ಕಾಗಿ ದಿಲ್ಲಿ ಚಲೋ ನಾಟಕವೇ?

* ರಾಷ್ಟ್ರವನ್ನು ವಿಭಜನೆ ಮಾಡುತ್ತೇವೆ ಎನ್ನುವವರಿಗೆ ನೇರವಾಗಿ ಬೆಂಬಲ ನೀಡಿದ್ದೀರಲ್ಲಾ, ಅದಕ್ಕಾಗಿ ದಿಲ್ಲಿ ಚಲೋ ನಾಟಕವೇ?

 

ಉತ್ತರಿಸಿ ಸಿದ್ದರಾಮಯ್ಯನವರೇ??? ಎಂದು ಬರೆದು ಕೊಂಡಿದ್ದಾರೆ

Leave a Reply

Your email address will not be published. Required fields are marked *