ಅಸ್ಪೃಶ್ಯತೆ ವಿರುದ್ದ ಕೆ ಡಿ ಎಸ್ ಎಸ್ ಪ್ರತಿಭಟನೆ : ಸಾಂಕೇತಿಕವಾಗಿ ಕ್ಷೌರ ಮಾಡಿಸಿ ಅಸ್ಪೃಶ್ಯತೆಗೆ ಅಂತ್ಯ ಹಾಡಿದ ದಲಿತ ಮುಖಂಡರು

Spread the love

ತಾಲ್ಲೂಕಿನ ಕಾಡನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ದಲಿತರಿಗೆ ಕ್ಷೌರಿಕ ಮಾಡದೇ ಅಸ್ಪೃಶ್ಯತೆ ಮೇರೆಯಲಾಗುತ್ತಿತ್ತು ಆದರೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ದಲಿತ ಮುಖಂಡರು ಕ್ಷೌರಿಕ ಅಂಗಡಿಯನ್ನು ಮುತ್ತಿಗೆ ಹಾಕಲಾಗಿ ಮುಂದೆ ಈ ರೀತಿ ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ಅಂಗಡಿ ಮಾಲೀಕರು ಹಾಮಿ ಕೊಟ್ಟಿದ್ದಾರೆ . ಸಾಂಕೇತಿಕವಾಗಿ ನಮ್ಮ ದಲಿತ ಮುಖಂಡರೇ ಕ್ಷೌರ ಮಾಡಿಸಿಕೊಳ್ಳುವ ಮೂಲಕ ಈ ಅನಿಷ್ಠ ಪದ್ಧತಿಯನ್ನು ಅಂತ್ಯಗಳಿಸಿದ್ದೇವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷರಾದ ರಾಮು ತಿಳಿಸಿದರು

 

 

ತಾಲ್ಲೂಕಿನ ಮಧುರೆ ಹೋಬಳಿಯ ಕಾಡನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಲಿತರಿಗೆ ಕಟಿಂಗ್ ಶೇವಿಂಗ್ ಮಾಡದೇ ಇರುವ ಕಾರಣ ತಾಲ್ಲೂಕಿನ ಕೆಡಿಎಸ್ಎಸ್ ಸಂಘಟನೆ ವತಿಯಿಂದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಮಕ್ಷಮದಲ್ಲಿ ಕ್ಷೌರಿಕ ಅಂಗಡಿಯನ್ನು ಮುತ್ತಿಗೆ ಹಾಕಲಾಗಿತ್ತು .ಈ ಸಂದರ್ಭದಲ್ಲಿ ಮಾತನಾಡಿದ ಅವರು 21ನೇ ಶತಮಾನದಲ್ಲಿ ನಾವು ಜೀವಿಸುತ್ತಿದ್ದರು ನಮ್ಮ ಮಧ್ಯೆ ಈ ಅಸ್ಪೃಶ್ಯತೆಯ ಬೂತ ಇನ್ನೂ ಜೀವಂತವಾಗಿರುವುದು ವಿಪರ್ಯಾಸವೇ ಸರಿ , ಮಾನವೀಯತೆ ಮರೆತು ಮೇಲು ಕೀಳು ಎಂಬ ಭಾವನೆಯಲ್ಲಿ ಜೀವನ ಸಾಗಿಸುತ್ತಿರುವ ಮೌಢ್ಯ ಸಮಾಜ ಬದಲಾಗಬೇಕಿದೆ . ಇಂತಹ ಸಮಸ್ಯೆಗಳ ವಿರುದ್ಧ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೋರಾಟ ಸದಾ ಜಾಗೃತ ಎಂದು ತಿಳಿಸಿದರು

 

 

ಸಂಘಟನೆಯ ಜಿಲ್ಲಾ ಸಂಚಾಲಕರಾದ ಎಂ. ಪಿ. ಗಂಗಾಧರ್ ಮಾತನಾಡಿ ಸ್ಥಳೀಯ ದಲಿತರ ಮನೆಗಳಿಗೆ ಭೇಟಿಕೊಟ್ಟಗ ನಮ್ಮಗೆ ಇಲ್ಲಿನ ಸಮಸ್ಯೆ ಅರಿವಾಯಿತು ಸಮಾಜದಲ್ಲಿ ಇನ್ನೂ ಜಾತಿ ಭೇದ ಭಾವ ಜೀವಂತವಾಗಿರುವುದು ನಾಚಿಕೆಯ ವಿಷಯ ,ನಾವು ಎಲ್ಲರಂತೆ ಮನುಷ್ಯರಲ್ಲವೇ ನಮಗೆ ಯಾಕೆ ಈ ಅನ್ಯ ದೋರಣೆ, ವೇದಿಕೆಗಳ ಮೇಲೆ ಮಾತುಗಳಲ್ಲಿ ಹೇಳುವ ಸಮಾನತೆ ಇಲ್ಲಿ ಸತ್ತುಹೋಯಿತೇ.. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಆಶಯ ಬರಿ ಮಾತಿಗೆ ಸೀಮಿತವಾಯಿತೇ.. ಈ ಧೋರಣೆ ನಿಲ್ಲಬೇಕಿದೆ ನಮ್ಮ ಹೋರಾಟ ನಿರಂತರ ನೆಡೆಯುವುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

 

 

ಜಿಲ್ಲಾ ಘಟಕದ ದೊಡ್ಡಯ್ಯ ಲಿಂಗಾಪುರ ಮಾತನಾಡಿ ಕೇವಲ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಅಷ್ಟೇ ಅಲ್ಲ ರಾಜ್ಯದ ಹಲವು ಭಾಗಗಳಲ್ಲಿ ಈ ಅಸ್ಪೃಶ್ಯತೆಯ ಸಮಸ್ಯೆ ಇನ್ನೂ ಜೀವಂತವಾಗಿದೆ .ಇದು ಕೇವಲ ಒಂದು ಉದಾಹರಣೆ ಅಷ್ಟೇ ಆಡಳಿತ ಮಾಡುವ ಸರ್ಕಾರಗಳಿಗೆ ಹಾಗೂ ಅಧಿಕಾರಿಗಳು ಕಂಡರೂ ಕಾಣದಂತೆ ವರ್ತಿಸುವ ಜಾಣ್ಮೆ ಹೇಳಲು ಅಸಾಧ್ಯ ..ದಲಿತಪರ ಚಿಂತಕರು ಅಥವಾ ಮುಖಂಡರು ಪ್ರತಿಭಟಿಸಿದಾಗ ಮಾತ್ರ ಮುಂದೆ ಬಂದು ಕ್ರಮ ಕೈಗೊಳ್ಳುವ ನಟನೆ ಮಾಡುತ್ತಾರೆ ಈ ವರ್ತನೆ ಬದಲಾಗಬೇಕಿದೆ ನಮ್ಮ ದಲಿತ ಸಮುದಾಯಗಳ ಮೇಲೆ ನಡೆಯುತ್ತಿರುವ ಶೋಷಣೆ ನಿಲ್ಲಬೇಕಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು

 

 

 

ದಲಿತ ಮುಖಂಡರಾದ ಆನಂದ್ ಮಾತನಾಡಿ ಇಂತಹ ಸಮಸ್ಯೆಗಳು ಸಾವಿರಾರು ದಲಿತರು ಶಕ್ತಿಹಿನರಲ್ಲ ಅವರನ್ನು ಶಕ್ತಿಹಿನರನ್ನಾಗಿ ಮಾಡಲಾಗುತ್ತಿದೆ . ಸ್ಥಳೀಯ ಮುಖಂಡರು ಈ ಸಮಸ್ಯೆಗೆ ಪರಿಹಾರ ನೀಡಿದ್ದಾರೆ ನಾವು ಪ್ರತಿಭಟಿಸಿ ನ್ಯಾಯ ಪಡೆಯುವ ಅವಶ್ಯಕತೆ ಇರಲಿಲ್ಲ .ಆದರೆ ನಮ್ಮ ಮತಗಳಿಗೆ ಇಲ್ಲದ ಅಸ್ಪೃಶ್ಯತೆ ನಮ್ಮ ಜನರನ್ನು ಮುಟ್ಟಿದರೆ ಬರುತ್ತದೆ ಎಂಬುದು ಶೋಚನೀಯ ಸಂಗತಿ .ಇಂದು ಸಾಂಕೇತಿಕವಾಗಿ ದಲಿತ ವ್ಯಕ್ತಿಗೆ ಕ್ಷೌರ ಮಾಡಿಸುವ ಮೂಲಕ ಪ್ರತಿಭಟನೆ ಅಂತ್ಯಗೊಳಿಸಿದ್ದೇವೆ . ಈ ಸಮಸ್ಯೆ ಮತ್ತೆ ಮರುಕಳಿಸಿದೆ ಜಾಗೃತಿ ವಹಿಸಬೇಕಿದೆ .ಮುಂದೆ ಈ ಸಮಸ್ಯೆ ಎದುರಾದಲ್ಲಿ ರಾಜ್ಯ ಮಟ್ಟದಲ್ಲಿ ಉಗ್ರ ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು .

 

ಈ ಸಂದರ್ಭದಲ್ಲಿ ಮುಖಂಡರಾದ ದೊಡ್ಡಯ್ಯ, ನರೇಂದ್ರ ಮೂರ್ತಿ ,ಸಕ್ಕರೆ ಗೊಲ್ಲಹಳ್ಳಿ ಆನಂದ್, ಕುಮಾರ್ ದೊಡ್ಡಬೆಳವಂಗಲ ,ಶಂಕರ್ ಮೂರ್ತಿ ,ನಾಗರತ್ನಮ್ಮ , ಸೇರಿದಂತೆ ನೂರಾರು ದಲಿತ ಮುಖಂಡರು ಪ್ರಗತಿಪರ ಚಿಂತಕರು ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *