*ಎರಡು ಎಕ್ಕರೆ ಪರಂಗಿ ಗಿಡಗಳಿಗೆ ಬೆಂಕಿ : ಬೆಳೆಯ ಜೊತೆ ಡ್ರಿಪ್ ಪೈಪ್ ಗಳು ಸುಟ್ಟು ಭಸ್ಮ*

Spread the love

ದೊಡ್ಡಬಳ್ಳಾಪುರ ( ವಿಜಯ ಮಿತ್ರ ): ಎರಡು ಎಕರೆಯ ಫಲ ತುಂಬಿದ ಎರಡು ಸಾವಿರ ಪರಂಗಿ ಗಿಡಗಳು, ದುಷ್ಕರ್ಮಿಗಳ ದುಶ್ಕೃತ್ಯದಿಂದ ಪರಂಗಿ ಫರಿತ ಗಿಡಗಳು ಬೆಂಕಿಗಾಹುತಿಯಾಗಿವೆ, ಪರಂಗಿ ಗಿಡಗಳ ಜೊತೆ ಡ್ರಿಪ್ ಪೈಪ್ ಗಳು ಸುಟ್ಟು ಬೂದಿಯಾಗಿದ್ದು , ಬೆಂಕಿ ಅವಘಡದಿಂದ 3 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ರೈತ ನಾಗರಾಜ್ ತಿಳಿಸಿದರು.

ತಾಲ್ಲೂಕಿನ ಮುಕ್ಕಡಿಘಟ್ಟ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಘಟನೆ ಸಂಭವಿಸಿದ್ದು , ನಾಗರಾಜ್ ಎಂಬುವರಿಗೆ ಸೇರಿದ 2000 ಕ್ಕೂ ಅಧಿಕ ಪರಂಗಿ ಗಿಡಗಳು ಸಂಪೂರ್ಣ ನಾಶವಾಗಿವೆ ,ರೈತರಾದ ನಾಗರಾಜ್ ಕಳೆದ ಎರಡು ವರ್ಷಗಳಿಂದ ಸಾಲದ ಸಂಕಷ್ಟದಲ್ಲೇ ಪರಂಗಿ ತೋಟ ಮಾಡುತ್ತಿದ್ದರು, ತೋಟದಿಂದ ಬರುತ್ತಿದ್ದ ಅಲ್ಪ ಆದಾಯದಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದು. ಮಕ್ಕಳಿಗೆ ರಜೆ ಇದ್ದ ಕಾರಣ ನಾಗರಾಜ್ ಕುಟುಂಬ ಸಮೇತ ಸಂಬಂಧಿಕರ ಮನೆಗೆ ತೆರಳಿದ್ದರು , ತೋಟದ ಬಳಿ ಯಾರು ಇಲ್ಲದ್ದನ್ನು ಗಮನಿಸಿದ ದುಶ್ಕರ್ಮಿಗಳು ತೋಟಕ್ಕೆ ಬೆಂಕಿ ಇಟ್ಟಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬರುವಷ್ಟರಲ್ಲಿ ಎರಡು ಎಕರೆಯಲ್ಲಿದ್ದ ಪರಂಗಿ ತೋಟ ಸಂಪೂರ್ಣ ಸುಟ್ಟು ಬೂದಿಯಾಗಿದೆ.

 

ಪರಂಗಿ ಗಿಡಗಳಿಗೆ ಡ್ರಿಪ್ ಮೂಲಕ ನೀರಾವರಿ ವ್ಯವಸ್ಥೆ ಮಾಡಲಾಗಿತ್ತು , ಸುಮಾರು 2 ಲಕ್ಷ ಮೌಲ್ಯದ ಡ್ರಿಪ್ ಪೈಪ್ ಗಳನ್ನ ಹಾಕಲಾಗಿದ್ದು, ಬೆಂಕಿ ಅವಘಡದಲ್ಲಿ ತೋಟದಲ್ಲಿದ್ದ ಪೈಪ್ ಗಳು ಸುಟ್ಟು ಕರಕಲಾಗಿವೆ, ಬೆಂಕಿ ಅವಘಡದಿಂದಾಗಿ ನಾಗರಾಜ್ ಒಟ್ಟಾರೆ 3 ಲಕ್ಷಕ್ಕೂ ಹೆಚ್ಚು ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ .

ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆಯ ಗಮನಕ್ಕೂ ತರಲಾಗಿದ್ದು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ದೊಡ್ಡಬಳ್ಳಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆ ಕಾರಣರಾದ ದುಷ್ಕರ್ಮಿಗಳ ಬಂಧನವಾಗಬೇಕು ಮತ್ತು ಬೆಂಕಿ ಅವಘಡದಿಂದ ಆಗಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ರೈತ ನಾಗರಾಜ್ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *