*ಅಪರಿಚಿತ ವ್ಯಕ್ತಿ ರೈಲಿಗೆ ಸುಲುಕಿ ಸಾವು : ರಾಜನಕುಂಟೆ ಸಮೀಪ ಸುರಧೇನುಪುರ ದಲ್ಲಿ ಘಟನೆ*

Spread the love

ದೊಡ್ಡಬಳ್ಳಾಪುರ ಏಪ್ರಿಲ್ 09 ( ವಿಜಯಮಿತ್ರ) : 35 ವರ್ಷದ ಅಪರಿಚಿತ ವ್ಯಕ್ತಿ ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಸುರಧೇನುಪುರದ ಹತ್ತಿರ ಸಂಭವಿಸಿದೆ.

 

ತಾಲ್ಲೂಕಿನ ರಾಜಾನುಕುಂಟೆ ರೈಲು ನಿಲ್ದಾಣದ ಮಧ್ಯೆ ಸುರಧೇನುಪುರ ಮಾರ್ಗದಲ್ಲಿ ಸುಮಾರು 35 ವರ್ಷದ ಅಪರಿಚಿತ ವ್ಯಕ್ತಿ (ಗಂಡಸು) ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ.ಯಶವಂತಪುರ ರೈಲ್ವೆ ಪೋಲಿಸ್ ಠಾಣೆ ಯು.ಡಿ ಆರ್.ನಂ. 72/2024 ಕಲಂ 174 Cr.P.C ರೀತ್ಯಾ ಪ್ರಕರಣ ದಾಖಲಾಗಿದ್ದು. ಮೃತನ ಮಾಹಿತಿ ಕಲೆಹಾಕುವಲ್ಲಿ ಸಿಬ್ಬಂದಿ ಮುಂದಾಗಿದ್ದಾರೆ.

 

*ವ್ಯಕ್ತಿಯ ಚಹರೆ-*

5’5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ ತಲೆಯಲ್ಲಿ ಸುಮಾರು 1 ಇಂಚು ಉದ್ದದ ಕಪ್ಪು ಕೂದಲು, ಇದ್ದು ಧೃಡ ಮೈಕಟ್ಟು,ಹೊಂದಿರುತ್ತಾರೆ ಎಂದು ತಿಳಿಸಲಾಗಿದೆ.

 

*ಬಟ್ಟೆಗಳು-*

ಕಪ್ಪು ಬಣ್ಣದ ಹರಿದ ಟೀ ಶರ್ಟ, ಬ್ಲೂ ಕಲರ್ ನೈಟ್ ಪ್ಯಾಂಟ್ ಧರಿಸುತ್ತಾನೆ.ಕಾಪಿ ಬಣ್ಣದ ಅಂಡರ್ ವೇರ್ ಧರಿಸಿದ್ದಾರೆ ಎಂದು ತಿಳಿಸಲಾಗಿದೆ.

 

ವಾರಸುದಾರರು ರೈಲ್ವೆ PSI 9480802118/ ದೊಡ್ಡಬಳ್ಳಾಪುರ ರೈಲ್ವೆ ಪೋಲಿಸ್ 9480802143, ಸಂಪರ್ಕಿಸಲು ಕೋರಿದೆ.

Leave a Reply

Your email address will not be published. Required fields are marked *