
ದೊಡ್ಡಬಳ್ಳಾಪುರ ಏಪ್ರಿಲ್ 16 ( ವಿಜಯ ಮಿತ್ರ ) : ತಾಲ್ಲೂಕಿನಲ್ಲಿ ಕಾಂಗ್ರೆಸ್ ಅಭಿವೃದ್ಧಿಯ ಫಲವಾಗಿ 400 ದ್ವಿಚಕ್ರ ವಾಹನ ಗಳು, 200 ಫ್ರಿಡ್ಜ್ ಹಾಗೂ 150 ವಾಷಿಂಗ್ ಮಿಷಿನ್ ಮಾರಾಟ ವಾಗುವ ಮೂಲಕ ಸ್ಥಳೀಯ ವ್ಯಾಪಾರಸ್ಥರಿಗೆ ಉದ್ಯಮದಲ್ಲಿ ಹೊಸ ಉಮ್ಮಸ್ಸು ಬಂದಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಟಿ ವೆಂಕಟರಮಣಯ್ಯ ತಿಳಿಸಿದರು.
ತಾಲ್ಲೂಕಿನ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನೆಡೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನೀಡಿರುವ ಗ್ಯಾರೆಂಟಿಗಳನ್ನು ಟಿಕಿಸುವ ಬಿಜೆಪಿ ಪಕ್ಷ ಸತ್ಯವನ್ನು ಅರಿಯಬೇಕಿದೆ. ಜನ ಸಾಮಾನ್ಯರ ಆರ್ಥಿಕ ಸ್ಥಿತಿಯನ್ನು ಸುಧಾರಣೆ ಮಾಡುವಲ್ಲಿ ನಮ್ಮ ಗ್ಯಾರೆಂಟಿ ಯೋಜನೆಗಳು ಪ್ರಬಲವಾಗಿ ಶ್ರಮಿಸಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಬೈರೇಗೌಡ, ನೇಕಾರ ಮುಖಂಡ ಹೇಮಂತ್ ರಾಜು, ಕೃಷ್ಣಮೂರ್ತಿ, ವೆಂಕಟೇಶ್ ( ಅಪ್ಪಿ) ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.