ದೊಡ್ಡಬಳ್ಳಾಪುರ ಏಪ್ರಿಲ್ 29 ( ವಿಜಯ ಮಿತ್ರ ) : ನಗರ ಭಾಗದ ತುಮಕೂರು ರಸ್ತೆ ಟ್ರಾನ್ಸ್ ಫಾರ್ಮ್ ಲಾವಣ್ಯ ವಿದ್ಯಾ ಸಂಸ್ಥೆ ಸಮೀಪದ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು.
ವೈಯರ್ ಗಳ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹಾರಿದ ಕಿಡಿಯೇ ಈ ಅನಾಹುತಕ್ಕೆ ಕಾರಣ ಎಂದು ತಿಳಿದು ಬಂದಿದೆ.
ಬೆಂಕಿಯಿಂದ ಡಿ ಟಿ ಸಿ ಬಾಕ್ಸ್ ಮತ್ತು ವೈಯರ್ ಗಳು ಸಂಪೂರ್ಣ ಹಾಳಾಗಿದ್ದು.
ಬೆಸ್ಕಾಂ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.
ದರ್ಗಾಜೋಗಹಳ್ಳಿಗೆ ಸಂಪರ್ಕಿಸುವ ವಿದ್ಯುತ್ ಮಾರ್ಗವಾಗಿದ್ದು, ಈ ಮಾರ್ಗದಲ್ಲಿನ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಈ ಸಂದರ್ಭದಲ್ಲಿ ಬೆಸ್ಕಾಂ ಸಿಬ್ಬಂದಿ ಮೋಹನ್, ಶಂಕರ್ ನಾಯಕ್, ಮಹಾಂತೇಶ್ ಪಾಟೀಲ್ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮೂಲಕ ಬೆಂಕಿ ನಂದಿಸಿದರು.
