
“ನಿರಂತರ ಯೋಗಾಭ್ಯಾಸ ನಮ್ಮೆಲ್ಲರ ಜೀವನದಲ್ಲಿ ಅನುಷ್ಠಾನಗೊಂಡರೆ, ನಾವೆಲ್ಲರೂ 100 ವರ್ಷದವರೆಗೂ ಬದುಕಲು ಸಾಧ್ಯವಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸದಾಶಿವ ರಾಮಚಂದ್ರಗೌಡ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇತ್ತೀಚಿನ ಕಾಲಮಾನದಲ್ಲಿ ಯುವಕರು ಉತ್ಸಾಹ ಪೀಡಿತರಾಗಿ ಜೀವನ ಸಾಗಿಸುತ್ತಿದ್ದು ಅವರನ್ನು ಉತ್ಸಾಹಶೀಲಾರನ್ನಾಗಿ ಮಾಡಲು ಅರೋಗ್ಯಕರ ಯೋಗಭ್ಯಾಸ ಬಹಳ ಮುಖ್ಯವಾಗಿದೆ.ವಿದ್ಯಾರ್ಥಿಗಳು ದಿನನಿತ್ಯದ ಜೀವನದಲ್ಲಿ ದೈಹಿಕ,ಮಾನಸಿಕ,ಸಾಮಾಜಿಕ, ಹಾಗೂ ಆದ್ಯಾತ್ಮಿಕವಾಗಿ ಅರೋಗ್ಯವನ್ನು ಸುಸ್ಥಿರದಲ್ಲಿಡಬೇಕಂದರೆ ಯೋಗಭ್ಯಾಸ ಅತ್ಯವಶ್ಯಕವಾಗಿದೆ ಎಂದರು.
ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೇನಿವಾಸ್ ಮಾತನಾಡಿ ಪ್ರಸ್ತುತ ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಯೋಗಸನಗಳನ್ನು ಪರಿಚಯಿಸಿ ನಮ್ಮ ದೇಶದ ಪರಿಕಲ್ಪನೆಯನ್ನ ಜಗತ್ತಿಗೆ ಸಾರುತ್ತಿರುವುದು ಹೆಮ್ಮ ಪಡುವ ಸಂಗತಿಯಾಗಿದೆ. ನಮ್ಮ ಅರೋಗ್ಯವನ್ನು ಸಶಕ್ತವಾಗಿಟ್ಟುಕೊಳ್ಳಲು ಯೋಗ ಅವಶ್ಯಕವಾಗಿದೆ ” ಎಂದರು.
ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗಪಟು ಚೇತನ್ ರಾಮ್ ಮಾರ್ಗದರ್ಶನದಲ್ಲಿ ಯೋಗಭ್ಯಾಸ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ, .ಸಿದ್ದರಾಮರಾಜು , ಪ್ರೊ. ನೀರಜಾ ದೇವಿ, ಡಾ.ಪ್ರಕಾಶ್ ಮಂಟೆದ, ರಾಜ್ ಕುಮಾರ್, ಮಂಜುನಾಥ್ ಸೇರಿದಂತೆ ಕಾಲೇಜಿನ ಏನ್ ಎಸ್ ಎಸ್, ಏನ್ ಸಿ ಸಿ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.