
ತೂಬಗೆರೆ ಪಂಚಾಯಿತಿ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ ಗ್ರಾಮದ ನಿವಾಸಿ ವಿಕಲಚೇತನರಾದ ರಮೇಶ್ ಗೆ ನಿವೇಶನ ಕೊಡುವಂತೆ ಅಗ್ರಹಿಸಿ ಪ್ರತಿಭಟನೆ ಕುಳಿತಿರುವ ಗ್ರಾಮಸ್ಥರು.
ನಿರಂತರ ಅರ್ಜಿ ಸಲ್ಲಿಸುತ್ತಾ ಖಾಲಿ ನಿವೇಶನ ನೀಡುವಂತೆ ಮನವಿ ಮಾಡುತ್ತಾ ತೂಬಗೆರೆ ಪಂಚಾಯತಿ ಅಧಿಕಾರಿಗಳ ಸುತ್ತ ಕಳೆದ ಹತ್ತು ವರ್ಷಗಳಿಂದ ತೂಬಗೆರೆ ಗ್ರಾಮದ ನಿವಾಸಿ ವಿಕಲಚೇತನರಾದ ರಮೇಶ್ ಸುತ್ತುತ್ತಿದ್ದಾರೆ ಆದರೆ ಇಲ್ಲಿಯವರೆಗೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಈ ಕುರಿತು ಸ್ಥಳೀಯ ಸಾರ್ವಜನಿಕರು ಪಂಚಾಯಿತಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.
ಸ್ಥಳೀಯ ಮುಖಂಡರು ಪಂಚಾಯಿತಿ ಸದಸ್ಯರು ಆದ ಕಿಟ್ಟಿ ಮಾತನಾಡಿ ಈ ಹಿಂದೆ ಸಭೆಯಲ್ಲಿ ರಮೇಶ್ ರವರಿಗೆ ನಿವೇಶನಕ್ಕೆ ಅನುಕೂಲ ಕಲ್ಪಿಸುವಂತೆ ಆದೇಶಿಸಿ ಖಾಲಿ ನಿವೇಶನ ಮಂಜೂರು ಮಾಡಲಾಗಿತ್ತು ಆದರೆ ಯಾವುದೇ ರೀತಿಯ ನಿವೇಶನ ರಮೇಶ್ ಕೈ ಸೇರಿಲ್ಲ ಈ ಕುರಿತು ನಮ್ಮ ಪ್ರಶ್ನೆಗಳಿಗೆ ಪಂಚಾಯಿತಿ ಉತ್ತರ ನೀಡುತ್ತಿಲ್ಲ ಹಾಗಾಗಿ ಈ ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದೇವೆ. ಕಿಂಚಿತ್ತು ಕನಿಕರ ಇಲ್ಲದ ಪಂಚಾಯತಿ ಅಧಿಕಾರಿಗಳ ವಿರುದ್ಧ ನಮ್ಮ ಈ ಪ್ರತಿಭಟನೆ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದ್ದರು ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಇನ್ನಾದರೂ ಅಧಿಕಾರಿಗಳು ಎಚ್ಚೆದ್ದು ವಿಶೇಷ ವಿಕಲಚೇತನರಾದ ರಮೇಶ್ ರವರಿಗೆ ನಿವೇಶನ ಮಂಜೂರು ಮಾಡಬೇಕಾಗಿ ಮನವಿ ಮಾಡುತ್ತೇವೆ ಎಂದರು.
ರಮೇಶ್ ಮಾತನಾಡಿ ನನ್ನದು ತೀರ ಬಡ ಕುಟುಂಬ ,ಕುಟುಂಬದ ನಿವಾಹಣೆಯ ಕಷ್ಟಕರವಾಗಿದ್ದು ಆಟೋ ಚಲನೆ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದೇನೆ, ಕಳೆದ ಹತ್ತು ವರ್ಷಗಳಿಂದ ಸತತವಾಗಿ ಪಂಚಾಯಿತಿಯ ಸುತ್ತ ನಿವೇಶನಕ್ಕಾಗಿ ಸುತ್ತುತ್ತಿದ್ದೇನೆ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ ಹೆಚ್ ಮುನಿಯಪ್ಪ ಸೇರಿದಂತೆ ಹಲವು ಗಣ್ಯರ ಬಳಿ ಮನವಿ ಸಲ್ಲಿಸಿದ್ದು ನಿವೇಶನ ಕಲ್ಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ ಆದರೆ ಇದುವರೆಗೂ ನನಗೆ ಯಾವುದೇ ರೀತಿಯ ನಿವೇಶನದ ಕುರಿತು ಮಾಹಿತಿ ಲಭ್ಯವಾಗಿಲ್ಲ. ನನ್ನ ಮನವಿಗೆ ಸ್ಪಂದಿಸದ ಅಧಿಕಾರಿಗಳು ನಿರ್ಲಕ್ಷತೆಯಿಂದ ಮಾತನಾಡುತ್ತಿದ್ದು. ನನಗೆ ನಿವೇಶನ ಕಲ್ಪಿಸುವಂತೆ ಮತ್ತೊಮ್ಮೆ ಈ ಮೂಲಕ ಮನವಿ ಮಾಡುತ್ತೇನೆ ಎಂದರು.
ತೂಬಗೆರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾತನಾಡಿ ಪಂಚಾಯಿತಿ ಸದಸ್ಯರ ಒಮ್ಮತ ಇಲ್ಲದ ಕಾರಣ ವಿಕಲಚೇತನರಾದ ರಮೇಶ್ ರವರಿಗೆ ನಿವೇಶನ ಕೊಡಲು ಸಾಧ್ಯವಾಗುತ್ತಿಲ್ಲ. ಸದಸ್ಯರ ಒಪ್ಪಿಗೆ ಇಲ್ಲದ ಕಾರಣ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ನಿವೇಶನ ರಹಿತ ಗ್ರಾಮಸ್ಥರಿಗೆ ನಿವೇಶನ ಕಲ್ಪಿಸಲು ಈಗಾಗಲೇ ಸ್ಥಳ ಗುರುತಿಸಿದ್ದು ಸದಸ್ಯರ ಅನುಮೋದನೆ ದೊರೆತ ತಕ್ಷಣವೇ ನಿವೇಶನ ವಿಚಾರಣೆ ಮಾಡಲಾಗುವುದು ಎಂದರು.
ಸ್ಥಳೀಯ ರಾಜಕೀಯ ಚಟಗಳಿಗೆ ಒಬ್ಬ ಸ್ವಾಭಿಮಾನಿ ವಿಕಲಚೇತನರ ಜೀವನ ಹಾಳಾಗುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು. ಸ್ಥಳೀಯ ಪಂಚಾಯಿತಿ ಸದಸ್ಯರು ಇನ್ನಾದರೂ ಎಚ್ಚೆದ್ದು ಫಲಾನುಭವಿಗೆ ಖಾಲಿ ನಿವೇಶನ ಹಸ್ತಾಂತರಿಸಲಿ ಎಂದು ವಿಜಯ ಮಿತ್ರ ಆಶಿಸುತ್ತದೆ.