ದೊಡ್ಡಬಳ್ಳಾಪುರ ( ವಿಜಯಮಿತ್ರ ): ಯುವಕರು ಪರಭಾಷೆಗಳ ವ್ಯಾಮೋಹ ಹೆಚ್ಚಾಗುತ್ತಿದೆ.. ಯುವಕರು ಮುಖ್ಯವಾಗಿ ಕನ್ನಡ ನಾಡು ನುಡಿ ನಮ್ಮ ಸಂಸ್ಕೃತಿಗೆ ಭಾಷೆ ವಿಷಯಗಳಿಗೆ ಗೌರವ ನೀಡಬೇಕು.ಕರ್ನಾಟಕದಲ್ಲಿ ಕನ್ನಡಿಗನಿಗೆ ಉದ್ಯೋಗ ಮೀಸಲಾತಿಯ ವಿಷಯವಾಗಿ ನಮ್ಮ ಹಕ್ಕು ನಮ್ಮ ಉದ್ಯೋಗ ಎಂಬ ಧ್ಯೇಯ ವಾಕ್ಯದೊಂದಿಗೆ ಅಕ್ಟೋಬರ್ 19 ರಂದು ಬೆಂಗಳೂರಿನಲ್ಲಿ ಬೃಹತ್ ಮಟ್ಟದ ಹೋರಾಟವನ್ನು ರೂಪಿಸಲಾಗಿದೆ ಎಂದು ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ ದೇವ ತಿಳಿಸಿದರು.

ಕನ್ನಡ ಜಾಗೃತಿ ವೇದಿಕೆಯ ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಹಾಗೂ ಜಿಲ್ಲಾ ಮತ್ತು ತಾಲೂಕು ಘಟಕದ ಕಾರ್ಯಕರ್ತರ ಸಭೆಯನ್ನು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾಗಿತ್ತು

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ನಮ್ಮ ಸಂಘಟನೆ ಸರಿ ಸುಮಾರು 30 ವರ್ಷಗಳಿಂದ ಸತತವಾಗಿ ಕನ್ನಡ ನಾಡು ನುಡಿ ಜಲ ಭಾಷೆ ವಿಷಯವಾಗಿ ಹೋರಾಟವನ್ನು ಮಾಡುತ್ತಿದ್ದು, ಯಾವುದೇ ಅಪಕ್ಷೇ ಇಲ್ಲದೆ ನಾಡು ನುಡಿ ಬಗ್ಗೆ ದುಡಿಯುವ ಹೆಮ್ಮೆಯ ಸಂಘಟನೆ ನಮ್ಮದು ಎಂದರು.
Ad
ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ನಾಗರಾಜ್ ಮಾತನಾಡಿ ಕನ್ನಡಿಗರಿಗೆ ಉದ್ಯೋಗದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಕನ್ನಡಿಗರ ಕೆಲಸಗಳನ್ನು ಬೇರೆ ರಾಜ್ಯದವರು ಕಸಿಯುತ್ತಿದ್ದಾರೆ.ಈಗಿನ ಖಾಸಗಿ ಕಂಪನಿಗಳಲ್ಲಿ ಕೆಳ ದರ್ಜೆಯ ಉದ್ಯೋಗಗಳಿಗೆ ಮಾತ್ರ ಕನ್ನಡಿಗರನ್ನು ನೇಮಿಸಲಾಗುತ್ತಿದೆ. ಈ ವ್ಯವಸ್ಥೆ ಬದಲಾಗಬೇಕೆಂಬ ಉದ್ದೇಶದಿಂದ ಅಕ್ಟೋಬರ್ 19ರಂದು ನಡೆಯಲಿರುವ ನಮ್ಮ ಉದ್ಯೋಗ ನಮ್ಮ ಹಕ್ಕು ಎಂಬ ಹೋರಾಟವನ್ನು ಪ್ರತಿಯೊಬ್ಬ ಕನ್ನಡಿಗನು ಬೆಂಬಲಿಸಬೇಕೆಂದು ಮನವಿ ಮಾಡಿದರು.

ಈ ಕಾರ್ಯಕ್ರಮದಲ್ಲಿ ಕನ್ನಡ ಜಾಗೃತಿ ವೇದಿಕೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಯುವಕರು ಸಂಘಟನೆಗೆ ಸೇರ್ಪಡೆಯಾದರು..
ಈ ಸಂದರ್ಭದಲ್ಲಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕವಿತಾ ಪೇಟೆ ಮಠ, ಸುಮಂಗಲಿ ರಾಮಾಚಾರಿ, ಆನೇಕಲ್ ಯುವ ಘಟಕದ ಅಧ್ಯಕ್ಷ ಮಧುಸೂಧನ್ , ಯುವ ಘಟಕದ ಸತೀಶ್, ಜಿಲ್ಲಾ ಮುಖಂಡರಾದ ಅಗ್ನಿ ವೆಂಕಟೇಶ,ತಾಲೂಕ ಅಧ್ಯಕ್ಷ ಶಶಿಧರ್ ಸಿ, ಉಪಾಧ್ಯಕ್ಷ ಗಿರೀಶ್, ಗೌರವಾಧ್ಯಕ್ಷ ಅನಿಲ್ ದೇಶಪಾಂಡೆ, ಕಾರ್ಮಿಕ ಘಟಕದ ಅಧ್ಯಕ್ಷ ಗುರುಪ್ರಸಾದ್, ಯುವ ಘಟಕದ ತರುಣ್ ಸರ್ಜಾ, ಚೇತನ್ ಚಂದನ್,ಬಾಲಾಜಿ,ಕಾರ್ಯದರ್ಶಿ ಪ್ರಕಾಶ್ ಬಿ, ತಾಲೂಕ್ ಸಂಚಾಲಕರದ ಮನು ಕುಮಾರ್, ಶಿವಕುಮಾರ್, ವಿಶ್ವನಾಥ್, ಕಾರ್ಯದರ್ಶಿಗಳಾದ ರಾಜಶೇಖರ್, ಅನಿಲ್, ರಜತ್, ಮಹಿಳಾ ಮುಖಂಡರುಗಳಾದ ಮುನಿರತ್ನಮ್ಮ, ಗೌರಮ್ಮ ಲಕ್ಷ್ಮಮ್ಮ, ಸುಜಾತಾ, ಗೌರಿ, ಶಾಂತಲಾ ಸೇರಿದಂತೆ ಕನ್ನಡಪರ ಕಾರ್ಯಕರ್ತರು ಭಾಗವಹಿಸಿದ್ದರು..
.
