
ದೊಡ್ಡಬಳ್ಳಾಪುರ : ನಗರಸಭೆಯಲ್ಲಿ ಸಂಕ್ರಾಂತಿ ಸಂಭ್ರಮ ಮನೆ ಮಾಡಿತು, ಸಾಂಪ್ರದಾಯಿಕ ಉಡುಗೆ ತೊಟ್ಟ ನಗರಸಭಾ ಸದಸ್ಯರು ಪಕ್ಷಾತೀತವಾಗಿ ಆಚರಣೆ ಪಾಲ್ಗೊಂಡು ಸಂಭ್ರಮಿಸಿದರು.
ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಒಂದು ದಿನ ಮುನ್ನವೇ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಿದ್ದು, ಪುರುಷ ಸದಸ್ಯರು ಪಂಚೆ ಶಲ್ಯ ಧರಿಸಿ ಕೈಯಲ್ಲಿ ಕಬ್ಬಿನ ಜಲ್ಲೆ ಹಿಡಿದು ಆಗಮಿಸಿದರೆ, ಮಹಿಳಾ ಸದಸ್ಯರು ಕೈಯಲ್ಲಿ ಎಳ್ಳು-ಬೆಲ್ಲ ಹಿಡಿದು ಎಲ್ಲರಿಗೂ ನೀಡುವ ಮೂಲಕ ಸಂಭ್ರಮಿಸಿದರು , ಅದ್ಭುತವಾಗಿ ಮೂಡಿಬಂದ ರಂಗೋಲಿಯ ಮೇಲೆ ಕಡಲೆಕಾಯಿ, ಅವರೆಕಾಯಿ, ಗೆಣಸು ಇಟ್ಟು ಗೋ ಪೂಜೆಯ ಮೂಲಕ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಿದರು
ಪರಸ್ಪರ ಎಳ್ಳು-ಬೆಲ್ಲ ಹಂಚುವ ಮೂಲಕ ದೊಡ್ಡಬಳ್ಳಾಪುರ ಜನತೆಗೆ ಸಂಕ್ರಾಂತಿ ಶುಭಾಶಯಗಳನ್ನು ತಿಳಿಸಿದರು
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷರಾದ ಸುಮಿತ್ರಾ ಆನಂದ್ ಮಾತನಾಡಿ ಇದೇ ಮೊದಲ ಬಾರಿಗೆ ನಗರಸಭೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ, ಪೌರಕಾರ್ಮಿಕರು, ಸಿಬ್ಬಂದಿಗಳು ಮತ್ತು ನಗರಸಭಾ ಸದಸ್ಯರ ಜೊತೆಯಲ್ಲಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ, ಮುಂದಿನ ಬಜೆಟ್ ನಲ್ಲಿ ದೊಡ್ಡಬಳ್ಳಾಪುರ ಜನತೆಗೆ ಮತ್ತಷ್ಟು ಖುಷಿ ವಿಚಾರಗಳನ್ನ ಕೊಡುವುದ್ದಾಗಿ ಹೇಳಿದರು
ಸ್ಥಾಯಿ ಸಮಿತಿ ಅಧ್ಯಕ್ಷರಾದ ವಡ್ಡರಹಳ್ಳಿ ರವಿ ಮಾತನಾಡಿ, ರಾಜಕೀಯವೇ ಜೀವನ ಅಲ್ಲ, ಗೆಲ್ಲುವ ತನಕ ಪಕ್ಷ ಗೆದ್ದ ನಂತರ ನಾವೇಲ್ಲ ನಗರದ ಅಭಿವೃದ್ಧಿಗಾಗಿ ದುಡಿಯ ಬೇಕು, ಸಂಕ್ರಾಂತಿ ಹಬ್ಬವನ್ನು ಆಚರಣೆಯ ಮೂಲಕ ದೊಡ್ಡಬಳ್ಳಾಪುರ ನಗರಸಭೆಗೆ ಸರ್ಕಾರದಿಂದ ಅನುದಾನ ಹರಿದು ಬರಲಿ ಮತ್ತಷ್ಟು ಪ್ರಗತಿ ಆಗಲಿ ಎಂಬುದೇ ನಮ್ಮ ಅಶಯವಾಗಿದೆ ಎಂದರು
ಈ ವೇಳೆ ಉಪಾಧ್ಯಕ್ಷರಾದ ಮಲ್ಲೇಶ್, ನಗರಸಭಾ ಸದಸ್ಯರುಗಳಾದ ಶಿವಶಂಕರ್, ಆನಂದ್, ಸುಧಾ ಲಕ್ಷ್ಮೀನಾರಾಯಣ್, ಬಂತಿ ವೆಂಕಟೇಶ್, ಶಿವು, ಶಿವಣ್ಣ, ರೂಪಿಣಿ ಮಂಜುನಾಥ್, ಪ್ರಭಾ ನಾಗರಾಜ್, ಪದ್ಮನಾಭ್, ನಾಗರಾಜು, ಪ್ರಭುದೇವ್ , ವತ್ಸಲಾ, ಸುರೇಶ್, ಮಂಜುಳಾ, ಆದಿಲಕ್ಷ್ಮೀ, ಹಸೀನಾ ತಾಜ್, ರಜನಿ ಸುಬ್ರಮಣಿ, ಭಾಸ್ಕರ್, ಚಂದ್ರಮೋಹನ್,ಲಕ್ಮೀಪತಿ,ಇಂದ್ರಾಣಿ, ನಾಗರತ್ಮಮ್ಮ, ಹಂಸಪ್ರಿಯ, ವಾಣಿ, ಕಾಂತರಾಜು, ಅಖಿಲೇಶ್ ಮತ್ತಿತರರು ಉಪಸ್ಥಿತರಿದ್ದರು .