ಪ್ರತಿಯೊಬ್ಬ ವ್ಯಕ್ತಿಯ ಸಮಗ್ರ ಬೆಳವಣಿಗೆಗೆ ಮತ್ತು ಜೀವನದಲ್ಲಿ ಯಶಸ್ಸಿಗೆ ಶಿಕ್ಷಣ ಬಹಳ ಮುಖ್ಯ ಪಾತ್ರವಹಿಸುತ್ತದೆ – ನ್ಯಾಯವಾದಿ ಜಿ.ಸುರೇಶ್ ಗೌಡ

Spread the love

ವಿದ್ಯಾರ್ಥಿಗಳಿಗೆ ಉತ್ತಮ ಹವ್ಯಾಸಗಳು ಮತ್ತು ಪಠ್ಯೇತರ ಚಟುವಟಿಕೆಗಳು  ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯವಾದಿ ಜಿ.ಸುರೇಶ್ ಗೌಡ ತಿಳಿಸಿದರು.

ಮಾರಸಂದ್ರ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾಸಂಸ್ಥೆಯ ಪಿ.ಕೆ.ಬಿ  ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿಯೊಬ್ಬ ವ್ಯಕ್ತಿಯ ಸಮಗ್ರ ಬೆಳವಣಿಗೆಗೆ ಮತ್ತು ಜೀವನದಲ್ಲಿ ಯಶಸ್ಸಿಗೆ ಶಿಕ್ಷಣ ಬಹಳ ಮುಖ್ಯ ಪಾತ್ರ ವಹಿಸುತ್ತದೆ.  ಶಿಕ್ಷಣದ ಮಹತ್ವವನ್ನು ಅರಿತವರು ಜೀವನದಲ್ಲಿ ಯಶಸ್ಸು ಪಡೆಯುತ್ತಾರೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ    ಶಿಸ್ತುಬದ್ದ ಓದು ಮತ್ತು   ಸಕಾರಾತ್ಮಕ  ಚಿಂತನೆಗಳು  ಪ್ರತಿಭೆಯ ಅನಾವರಣಕ್ಕೆ ಸಹಕಾರಿ ಆಗಲಿವೆ ಎಂದರು.

 

ಡಾ.ಬಿ.ಆರ್.ಅಂಬೇಡ್ಕರ್  ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಟಿ.ಎಂ.ಕರಗಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ವಿದ್ಯೆಯೊಂದಿಗೆ ವಿನಯವು ಬಹುಮುಖ್ಯವಾಗಿರುತ್ತದೆ.   ಮಾನವೀಯ ಮೌಲ್ಯಗಳೊಂದಿಗೆ  ಆರೋಗ್ಯಕರ ಜೀವನಶೈಲಿದಿಂದ  ಸುಶಿಕ್ಷಿತ   ಸಮಾಜ ನಿರ್ಮಾಣವಾಗುತ್ತದೆ. ಉತ್ತಮ ಫಲಿತಾಂಶ  ಮತ್ತು ಗುಣಮಟ್ಟದ ಶಿಕ್ಷಣ ನಮ್ಮ ವಿದ್ಯಾಸಂಸ್ಥೆಯ  ಗುರಿಯಾಗಿದೆ ಎಂದರು.

 

ಕಾರ್ಯಕ್ರಮದಲ್ಲಿ   ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾಸಂಸ್ಥೆಯ ಅಧ್ಯಕ್ಷೆ ವಿಜಯ ಮಾರಹನುಮಯ್ಯ, ಪಿ.ಕೆ.ಬಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಆನಂದ,  ರಾಷ್ಟ್ರಪಶಸ್ತಿ ಪುರಸ್ಕತ ಮುಖ್ಯ ಶಿಕ್ಷಕ ಆರ್.ನಾರಾಯಣಸ್ವಾಮಿ,    ಮುಖ್ಯಶಿಕ್ಷಕರುಗಳಾದ   ಎಂ.ರಾಹತ್ ನವಾಜ್ ಬೇಗಂ,  ಗೀತಾ,  ಉಪನ್ಯಾಸಕರುಗಳಾದ. ಎಚ್.ಬಿ.ಕೆಂಚಪ್ಪ,  ಎ.ಆರ್.ಗಂಗಾಧರೇಶ್ವರ, ಕೆ.ಆರ್.ಪ್ರಸನ್ನಕುಮಾರ್, ಅಜತ್, ಎಸ್.ನೇತ್ರಾ, ಟಿ.ಕೆ.ಅನುರಾಧ, ಎನ್.ಆಶಾ, ಡಿ.ಆರ್.ಗೀತಾ,  ಮಂಜುನಾಥ್  ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

© 2026 Malnad TV. All Rights Reserved.