ಜಿಲ್ಲಾ ಲೇಖಕಿಯರು ಹಾಗೂ ವಾಚಕಿಯರ ಸಂಘದಿಂದ ವಿಶ್ವಮಹಿಳಾ ದಿನಾಚರಣೆ

Spread the love

ಶಿವಮೊಗ್ಗ : ಜಿಲ್ಲಾ ಲೇಖಕಿಯರು ಹಾಗೂ ವಾಚಕಿಯರ ಸಂಘದ ವತಿಯಿಂದ ಇಂದು ವಿಶ್ವಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

 

ಈ ವೇಳೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಮತಿ ವಿಜಯಾ ಶ್ರೀಧರ್ ಮಾತನಾಡಿದ, ಹೆಸರಾಂತ ಕವಿಗಳಾದ ದ.ರಾ.ಬೇಂದ್ರೆ, ಕುವೆಂಪು, ಜಿ.ಎಸ್.ಶಿವರುದ್ರಪ್ಪ, ನಿಸಾರ್ ಅಹಮದ್ ರವರ ಕವನಗಳ ವೈಶಿಷ್ಟ್ಯತೆಯನ್ನು ಉದಾಹರಿಸುತ್ತಾ, ಕವನಗಳು ಸರಳ, ಸಹಜ ಹಾಗೂ ಪ್ರಾಸಬದ್ಧವಾಗಿರಬೇಕೆಂದು ಕವನ ರಚನೆಯ ಕುರಿತಾಗಿ ತಿಳಿಸಿದರು.

 

ಗೌರವಾಧ್ಯಕ್ಷೆ ಚಂದ್ರಕಲಾ ಮಾತನಾಡಿ, ತಮಗೆ ಬಾಲ್ಯದಿಂದಲೇ ಕವನ ರಚನೆಯ ಬಗೆಗೆ ಒಲವಿತ್ತು ಎಂದು ತಮ್ಮ ಬಾಲ್ಯದ ಕವನ ರಚನೆಯಲ್ಲಿನ ಆಸಕ್ತಿ ಬಗ್ಗೆ ತಿಳಿಸಿ, ಬಾಲ್ಯದಲ್ಲಿ ಅವರು ಬರೆದ ಸುಂದರ ಕವಿತೆಯೊಂದರ ಕುರಿತು ವಿವರಿಸಿದರು.

 

ಮುಖ್ಯ ಅತಿಥಿಗಳಾಗಿ ಆಗನಿಸಿದ್ದ ಸುನೀತಾ ರಾವ್ ಮಾತನಾಡಿ, ಮಹಿಳಾ ದಿನಾಚರಣೆ ಪ್ರಾರಂಭವಾದದುದರ ಕುರಿತು ಮಾಹಿತಿ ನೀಡಿದರು. ಹಾಗೂ ಎಲ್ಲಿ ಮಹಿಳಾ ಶೋಷಣೆಯಾದರೂ ಅಲ್ಲಿ ಮಹಿಳೆಯರು ಸಂಘಟಿತರಾಗಬೇಕೆಂಬ ಕಳಕಳಿ ವ್ಯಕ್ತಪಡಿಸಿದರು.

 

ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಕಾತ್ಯಾಯಿನಿ.ಸಿ.ಎಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ಮಾಲಾ ರಾಮಚಂದ್ರ ಎಲ್ಲರನ್ನೂ ಸ್ವಾಗತಿಸಿ, ಶ್ರೀರಂಜಿನಿ ದತ್ತಾತ್ರಿ ಕಾರ್ಯಕ್ರಮ ನಿರೂಪಿಸಿ, ರುಕ್ಮಿಣಿ ಆನಂದ್ ವಂದಿಸಿದರು.

ಕವಿಗೋಷ್ಠಿಯಲ್ಲಿ ಪ್ರಮುಖರಾದ ಗುಣ.ಎಸ್, ಇಂದಿರಾ, ಗಾಯತ್ರಿ ರಮೇಶ್, ಡಿ.ಬಿ.ನಾಗರತ್ನಮ್ಮ, ನಾಗರತ್ನಮ್ಮ ಸುಬ್ರಮಣ್ಯ, ಸು. ವಿಜಯಲಕ್ಷ್ಮೀ, ಉಷಾ ನಾಗರಾಜ್, ಜಯಲಕ್ಷ್ಮೀ ಚಂದ್ರಹಾಸ, ಸ್ಮಿತಾ ನಂದೀಶ್, ಜಯಶ್ರೀ ಗಣೇಶ್, ವಿಜಯಲಕ್ಷ್ಮೀ ಪಂಡಿತ್, ತಾರಾ ಪ್ರಸಾದ್, ಮಂಜುಳಾ ಉಮೇಶ್, ಹೇಮಾ, ಆಶಾಲತಾ, ದೇವಿ ನಾಗರತ್ನಮ್ಮ, ಕುಮುದಾ ಸುಶೀಲ್, ರಮಾಶಾಸ್ತ್ರಿ, ಸುಮಾ ಮಂಜುನಾಥ್, ರುಕ್ಮಿಣಿ ಆನಂದ್, ಸ್ತ್ರೀ ಸಂವೇದನೆಯ ಕುರಿತಾಗಿ ಕವನಗಳನ್ನು ವಾಚಿಸಿದರು.

 

Leave a Reply

Your email address will not be published. Required fields are marked *

© 2026 Malnad TV. All Rights Reserved.