ದೊಡ್ಡಬಳ್ಳಾಪುರ : ರೈತ ಮಹಿಳೆ ಮೇಲೆ ಬೀದಿನಾಯಿ ಬರ್ಬರ ದಾಳಿ : ಜೇವನಮರಣದ ನಡುವೆ ಮಹಿಳೆ ಹೋರಾಟ

Spread the love

ದೊಡ್ಡಬಳ್ಳಾಪುರ : ಹೊಲಕ್ಕೆ ಹೋದ ವೇಳೆ ಮಹಿಳೆಯ ಮೇಲೆ ನಾಯಿಗಳು ದಾಳಿಮಾಡಿದ್ದು ಲಕ್ಷ್ಮಮ್ಮ ರಾಜಪ್ಪ (30ವರ್ಷ) ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ.

 

ತಾಲ್ಲೂಕಿನ ಹೊಸಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಸೋಣ್ಣೆನಹಳ್ಳಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ಘಟನೆ ಸಂಭವಿಸಿದ್ದು, ಲಕ್ಷ್ಮಮ್ಮ ನವರ ಗಂಡ ರಾಜಪ್ಪ ಕಿಟನಾಶಕ ತರಲು ನಗರಕ್ಕೆ ತೆರಳಿದ್ದು,ಈ ವೇಳೆ ತೋಟದಲ್ಲಿ ಒಂಟಿಯಾಗಿದ್ದ ಲಕ್ಷ್ಮಮ್ಮರ ಮೇಲೆ ಬೀದಿನಾಯಿಗಳ ಹಿಂಡು ದಾಳಿ ಮಾಡಿದೆ.

ನಾಯಿಗಳ ದಾಳಿಯಲ್ಲಿ ಲಕ್ಷ್ಮಮ್ಮರ ಮುಖ ಸೇರಿದಂತೆ ದೇಹದ ಹಲವು ಭಾಗಗಳು ಗಾಯವಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

 

ತಾಲ್ಲೂಕಿನ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನೆಡೆದಿದೆ.

Leave a Reply

Your email address will not be published. Required fields are marked *

© 2026 Malnad TV. All Rights Reserved.