
ದೊಡ್ಡಬಳ್ಳಾಪುರ : ಸಾರ್ವಜನಿಕರ ಆಸ್ಪತ್ರೆಗೆ ಭೇಟಿ ನೀಡಿ ಬಡ ರೋಗಿಗಳಿಗೆ ಹಣ್ಣು ಆಹಾರ ವಿತರಣೆ ಮಾಡುವ ಮೂಲಕ ರಾಜಘಟ್ಟ ಗ್ರಾಮಪಂಚಾಯತಿ ಸದಸ್ಯ ಶಿವಕುಮಾರ್ ತಮ್ಮ 35ನೇ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.
ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಮತ್ತು ಇತರೆ ಪದಾರ್ಥಗಳು ಹೊಂದಿರುವ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನನ್ನ ಹುಟ್ಟುಹಬ್ಬವನ್ನು ಸ್ನೇಹಿತರ ಜೊತೆಗೂಡಿ ಬಡ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣು ಹಾಗೂ ಇತರೆ ಆಹಾರ ಪದಾರ್ಥಗಳು ಒಳಗೊಂಡ ಕಿಟ್ ಗಳನ್ನು ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದೇನೆ, ಮುಂದೆಯೂ ಇದೇ ರೀತಿ ಸಾರ್ವಜನಿಕರ ಸೇವೆ ಮಾಡುವ ಮೂಲಕ ವಿಶೇಷ ದಿನಗಳನ್ನು ಆಚರಿಸಲಾಗುವುದು ಎಂದರು.
ಜೆಡಿಎಸ್ ಮುಖಂಡರಾದ ಹರೀಶ್ ಮಾತನಾಡಿ ಸ್ನೇಹಿತರಾದ ಶಿವಕುಮಾರ್ ರವರು ತಮ್ಮ ಹುಟ್ಟು ಹಬ್ಬವನ್ನು ಪ್ರತಿ ವರ್ಷವೂ ಹಲವಾರು ಸೇವ ಕಾರ್ಯಗಳನ್ನು ಮಾಡುವ ಮೂಲಕ ಆಚರಿಸಿಕೊಳ್ಳುತ್ತಿದ್ದು ಸಂತಸ ತಂದಿದೆ . ಅವರಿಂದ ಮತ್ತಷ್ಟು ಸಮಾಜಕ್ಕೆ ಉತ್ತಮ ಕಾರ್ಯಗಳನ್ನು ಮಾಡುವಂತೆ ಭಗವಂತ ಆಶೀರ್ವದಿಸಲಿ ಎಂದು ಹಾರೈಸಿದರು .
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ರವೀಶ್,ಆರ್. ಸಿ, ಶಿವಕುಮಾರ್, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಬಿ ಎಸ್ ಹರೀಶ್, ಆರ್. ಜಿ. ಚಂದ್ರ ಶೇಖರ್, ಮಂಜುನಾಥ್, ಆರ್ ಎ ಹರೀಶ್, ಆರ್ ಯಶವಂತ್, ಪಾನಿಪುರಿ ಚಂದ್ರಶೇಖರ್, ಗಗನ್, ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.