ಬಮೂಲ್ ಚುನಾವಣೆ : ಸ್ಥಳೀಯ ಬಮೂಲ್ ನಿರ್ದೇಶಕ ಸ್ಥಾನಕ್ಕೆ ಇನ್ನೂ 6 ತಿಂಗಳಲ್ಲಿ ಮರುಚುನಾವಣೆ ನೆಡೆಯಲಿದೆ – ಹುಸ್ಕೂರ್ ಟಿ ಆನಂದ್

Spread the love

ದೊಡ್ಡಬಳ್ಳಾಪುರ : ನ್ಯಾಯಾಲಯದಲ್ಲಿ ಈಗಾಗಲೇ ತಡೆಯಾಗದೆ ಇದ್ದರೂ, ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿರುವ ಅಭ್ಯರ್ಥಿಯು ನ್ಯಾಯಾಲಯದ ತೀರ್ಪಿನ ಬಳಿಕ ಅನರ್ಹವಾಗಲಿದ್ದಾರೆ ನಮ್ಮ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಮರುಚುನಾವಣೆ ನಡೆಯಲಿದೆ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹುಸ್ಕೂರು ಟಿ ಅನಂದ್ ತಿಳಿಸಿದ್ದಾರೆ.

 

ಹೌದು ಮೇ ತಿಂಗಳ 25ರಂದು ನಡೆದ ಬಮೂಲ್ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಹುಸ್ಕೂರು ಟಿ ಆನಂದ್ ಹೊಸ ಬಾಂಬ್ ಸಿಡಿಸಿದ್ದಾರೆ. ಈಗಾಗಲೇ ಬಮುಲ್ ನಿರ್ದೇಶಕರನ್ನು ನ್ಯಾಯಾಲಯವು ಅನರ್ಹಗೊಳಿಸಿ ಆದೇಶ ಹೊರಡಿಸಿತ್ತು , ಆದರೆ ತಡೆಯಾಜ್ಞೆ(ಸ್ಟೇ )ತರುವ ಮೂಲಕ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಿ.ಸಿ ಆನಂದ್ ಕುಮಾರ್ ತಡೆಯಾಜ್ಞೆ ತೆರೆವಾದ ಕೂಡಲೇ ಅನರ್ಹರಾಗುತ್ತಾರೆ,ಈಗಾಗಲೇ ಸ್ಟೇ ವೆಕೆಟ್ ಮಾಡುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದೇವೆ,ಈ ಹಿನ್ನಲೆ ನಮ್ಮ ತಾಲೂಕಿನಲ್ಲಿ ಬಮೂಲ್ ನಿರ್ದೇಶಕ ಸ್ಥಾನಕ್ಕೆ ಮರುಚುನಾವಣೆ ನಡೆಯಲಿದೆ ಎಂದು ಹೇಳಿದರು.

 

ಕಳೆದ ಬಮೂಲ್ ಚುನಾವಣೆಯಲ್ಲಿ ಸ್ಥಳೀಯ ಹಾಲಿ ಶಾಸಕರು ನಮ್ಮ ಜೆಡಿಎಸ್ ಪಕ್ಷದ ಮುಖಂಡರಿಗೆ ಇಲ್ಲಸಲ್ಲದ ಸುಳ್ಳುಗಳನ್ನು ಹೇಳುವ ಮೂಲಕ ದಾರಿ ತಪ್ಪಿಸಿದ್ದಾರೆ ಅಲ್ಲದೆ ಹಲವಾರು ಕುತಂತ್ರಗಳು ಮಾಡುವ ಮೂಲಕ ಚುನಾವಣೆಯಲ್ಲಿ ಜಯಸಾಧಿಸಿದ್ದಾರೆ. ಈ ಜಯ ತುಂಬ ದಿನ ಉಳಿಯುವುದಿಲ್ಲ, ನಾನು ಚುನಾವಣೆಗೆ ನಿಲ್ಲಬಾರದೆಂದು ಹಲವಾರು ರೀತಿ ತೊಂದರೆ ಕೊಟ್ಟಿದ್ದರು ಆದರೆ ನ್ಯಾಯಾಲಯವು ನಾನು ಚುನಾವಣೆಗೆ ನಿಲ್ಲಲು ಅವಕಾಶ ಕಲ್ಪಿಸಿತ್ತು . ಕೆಲ ಜೆಡಿಎಸ್ ಮುಖಂಡರ ಅಪ್ರಾಮಾಣಿಕತೆಯಿಂದ ನನ್ನ ಸೋಲಾಗಿದೆ ಆದರೆ ಹಿಂದಿನ ನಿರ್ದೇಶಕರ ಕುರಿತಂತೆ ನ್ಯಾಯಾಲಯದಲ್ಲಿ ಇಂದಿಗೂ ಕೇಸ್ ನಡೆಯುತ್ತಿದೆ . ತಡೆಯಾಜ್ಞೆ ತೆರವಾಗುತ್ತಿದ್ದಂತೆ ನಿರ್ದೇಶಕ ಸ್ಥಾನಕ್ಕೆ ಮರು ಚುನಾವಣೆ ತಪ್ಪಿದ್ದಲ್ಲ , ಈ ಬಾರಿ ನನ್ನ ಗೆಲುವು ಖಚಿತ ಎಂದು ತಿಳಿಸಿದರು.

ಗೆಲುವು ಸಾಧಿಸಿರುವ ಅಭ್ಯರ್ಥಿ ಮಾಜಿ ಶಾಸಕರಾದ ಟಿ ವೆಂಕಟರಮಣಯ್ಯಾ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಬಿ ಮುನೇಗೌಡರ ತಂದೆ ವಿಚಾರವಾಗಿ ಮಾತನಾಡಿರುವುದು ನೋವುಂಟುಮಾಡಿದೆ, ಚುನಾವಣೆಯಲ್ಲಿ ಸೋಲು ಗೆಲುವು ಸರ್ವೇಸಾಮಾನ್ಯ ಆದರೆ ಮಾತನಾಡುವ ಭರದಲ್ಲಿ ಕುಟುಂಬಗಳ ಬಗ್ಗೆ ಮಾತನಾಡುವುದು ಶೋಭೆಯಲ್ಲ ಎಂದರು.

 

ನಮ್ಮ ರಾಷ್ಟ್ರ ಅಧ್ಯಕ್ಷರಾದ ದೇವೇಗೌಡ ಅಪ್ಪಾಜಿ ಹಾಗೂ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರ ಆದೇಶದ ಮೇರೆಗೆ ನಾನು ಬಮುಲ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಜೆಡಿಎಸ್ ಪಕ್ಷದ ವರ್ಚಸ್ಸನ್ನು ಶಕ್ತಿಯನ್ನು ತೋರ್ಪಡಿಸಲು ನಿರ್ಧರಿಸಿದ್ದೆ, ನನಗೆ ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಪ್ರಾಮಾಣಿಕ ಹಾಗೂ ಅಪ್ರಾಮಾಣಿಕರ ಪರಿಚಯವಾಗಿದೆ. ಚುನಾವಣೆಯಲ್ಲಿ ಸೋಲು ಎನ್ನುವುದಕ್ಕಿಂತ ಉತ್ತಮ ಅನುಭವ ದೊರೆತಿದೆ , ಸ್ಥಳೀಯ ಮುಖಂಡರ ನಡವಳಿಕೆ ಕುರಿತು ರಾಜ್ಯ ಹಾಗೂ ರಾಷ್ಟ್ರ ನಾಯಕರು ಗಮನಕ್ಕೆ ತರಲಾಗುವುದು ಎಂದರು .

 

 

 

 

 

Leave a Reply

Your email address will not be published. Required fields are marked *