
ಐತಿಹಾಸಿಕ ಆಚರಣೆಯಾಗಿರುವ ಭೂತ ನೆರೆಗೆ ಹಾಗೂ ಲಕ್ಷ್ಮೀ ನರಸಿಂಹ ಸ್ವಾಮಿ ಜಾತ್ರೆ ಭಾನುವಾರ ಅದ್ದೂರಿಯಾಗಿ ನಡೆಯಿತು.
ಬೆಳಿಗ್ಗೆಯಿಂದಲೇ ಅಭಿಷೇಕ, ಪೂಜೆ ಪುನಸ್ಕಾರ, ದೇವರ ಮೂರ್ತಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಜಾತ್ರೆಯ ಅಂಗವಾಗಿ ಕಲ್ಲು ಕೋಟೆ ಸುತ್ತಲಿನ 7 ಗ್ರಾಮಗಳ ಜನರು ಭಕ್ತಾದಿಗಳಿಗೆ ನೀರು ಮಜ್ಜಿಗೆ ಮತ್ತು ಪಾನಕ ವಿತರಣೆ ಮಾಡಿದರು. ಜಾತ್ರೆಯ ಪ್ರಯುಕ್ತ ವಿಶೇಷವಾಗಿ ಭೂತ ನೆರಿಗೆ ಅಚರಣೆ ನಡೆಯಿತು.
ತಮಟೆ ವಾದ್ಯಗಳೊಂದಿಗೆ ಆರಂಭವಾದ ಭೂತಗಳ ಅರ್ಭಟ ಊರಿನ ವಿವಿಧಡೆ ಸಂಚರಿಸಿ, ಮನೆಮನೆಗೆ ತೆರಳಿ ಪ್ರಸಾದ ಸ್ವೀಕರಿಸಿ ನಂತರ ಲಕ್ಷ್ಮೀ ನರಸಿಂಹ ಸ್ವಾಮಿಯ ದೇವಾಲಯದಲ್ಲಿ ಮುಕ್ತಾಯವಾಯಿತು.
ಕೆಂಚಣ್ಣ, ಕರಿಯಣ್ಣ, ಪಾಪಣ್ಣ, ಲಕ್ಷ್ಮೀನರಸಿಂಹಸ್ವಾಮಿ( ಭೂತಗಳ ವೇಷಧಾರಿಗಳು) ಆರಂಭದಲ್ಲಿ ಭಕ್ತಾದಿಗಳಿಂದ ಪೂಜೆ ಸ್ವೀಕರಿಸಿ, ಕೆರಳಲು ಧೂಪ ಹಾಕಿಸಿಕೊಂಡು ಆರಂಭಿಸಿದರು. ಭೂತಗಳ ಆರ್ಭಟವನ್ನು ನೋಡಿ ದಿಕ್ಕಾಪಾಲಾಗಿ ಓಡಿದರು. ಕೋಪಗೊಳ್ಳುವ ಕೆಂಚಣ್ಣ ಕರಿಯಣ್ಣ ಹಾಗೂ ಪಾಪಣ್ಣ ಲಕ್ಷ್ಮೀನರಸಿಂಹಸ್ವಾಮಿ ಭೂತಗಳು ಕೈಯಲ್ಲಿ ಭೂತದ ಗುರಾಣಿ ಹಿಡಿದು. ನರ್ತನ ಮಾಡುತ್ತ ಕೈಯಲ್ಲಿನ ಭತ್ತವನ್ನು ಬೀಸುತ್ತ ಜನರ ಗುಂಪಿನತ್ತ ನುಗ್ಗಲು ಆರಂಭಿಸಿದವು. ಕೋಪ ಗೊಂಡಿರುವ ಭೂತಗಳನ್ನು ಸಮಾಧಾನ ಪಡಿಸಲು ಹಲಸಿನ ಹಣ್ಣಿನಿಂದ ತಯಾರಿಸಲಾದ ರಸಾಯನವನ್ನು ಭೂತಗಳಿಗೆ ತಿನ್ನಿಸಲಾಯಿತು ಗ್ರಾಮದದಲ್ಲಿ ಅಡ್ಡಾಡಿದ ಭೂತಗಳು ಮನೆಗಳ ಬಳಿ ಬಂದು ಪೂಜೆ ಸ್ವೀಕರಿಸಿದ ನಂತರ ದೇವಾಲಯದಲ್ಲಿ ಭೂತ ನೆರಿಗೆ ಮುಕ್ತಾಯವಾಯಿತು.