
ಚಿಕ್ಕಬಳ್ಳಾಪುರ : ರಾಜ್ಯದ ಪ್ರತಿ ಡಿವಿಷನ್ಗಳಲ್ಲಿ ಸಚಿವ ಸಂಪುಟ ಸಭೆ ನೆಡೆಸುತ್ತಿದ್ದೇವೆ, ಅಂತೆಯೇ ಇಂದು ಬೆಂಗಳೂರು ವಿಭಾಗದ ಸಚಿವ ಸಂಪುಟ ಸಭೆ ನೆಡೆಸುತ್ತಿದ್ದೇವೆ, ಈ ಸಭೆ ಕೇವಲ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರಕ್ಕೆ ಸೀಮಿತವಲ್ಲ ಈ ಸಭೆಯಲ್ಲಿ ಬೆಂಗಳೂರು ವಿಭಾಗದ ಎಲ್ಲಾ ಪ್ರದೇಶಗಳ ಅಭಿವೃದ್ಧಿ ಬಗ್ಗೆ ಚರ್ಚಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು
ನಂದಿಗಿರಿಧಾಮದಲ್ಲಿ ಹಮ್ಮಿಕೊಂಡಿರುವ ಸಚಿವ ಸಂಪುಟ ಸಭೆಗೂ ಮೊದಲು ಭೋಗ ನಂದೀಶ್ವರ ದೇವಾಲಯಕ್ಕೆ ಭೇಟಿ ನೀಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಸ್ಥಳೀಯರಿಗೆ ವಿಶೇಷ ಪ್ಯಾಕೇಜ್ ಅಥವಾ ಘೋಷಣೆ ಉಂಟೆ…??
ಸಚಿವ ಸಂಪುಟದಲ್ಲಿ ಹೊಸದಾಗಿ ಯಾವುದೇ ಘೋಷಣೆ ಇಲ್ಲ,ನಮ್ಮ ಬಜೆಟ್ ನಲ್ಲಿ ಹೇಳಿರುವ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಚಿವ ಸಂಪುಟ ಶ್ರಮಿಸಲಿದೆ, ಅಲ್ಲದೇ ಸಣ್ಣ ಪುಟ್ಟ ಅಭಿವೃದ್ಧಿ ಕಾರ್ಯಗಳಿದ್ದರೆ ಮಾಡಲಾಗುವುದು ಎಂದು ಹೇಳಿದರು.
ಬಿಜೆಪಿಯವರು ಹಗಲು ಕನಸು ಕಾಣುವುದನ್ನು ಬಿಡಲಿ
ಸರ್ಕಾರ ಪತನವಾಗಲಿದೆ ಸೆಪ್ಟೆಂಬರ್ ನಲ್ಲಿ ಕಾಂಗ್ರೆಸ್ ಸರ್ಕಾರ ಮುಕ್ತಾಯವಾಗಲಿದೆ ಎಂಬ ಬಿಜೆಪಿ ಮಾತುಗಳಿಗೆ ಉತ್ತರ ನೀಡಿದ ಅವರು ಬಿಜೆಪಿ ಪಕ್ಷದವರು ಶುದ್ಧ ಸುಳ್ಳು ಹೇಳುತ್ತಾರೆ ನಾನು ಈಗಾಗಲೇ ಮೈಸೂರಿನಲ್ಲಿ ಹೇಳಿದ್ದೇನೆ ನಮ್ಮ ಸರ್ಕಾರ ಬಂಡೆಯಂತೆ ದೃಢವಾಗಿಇರಲಿದೆ. ನಾವೆಲ್ಲರೂ ಒಗ್ಗಟ್ಟಿನಲ್ಲಿ ಇದ್ದೀವೆ, ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಅವರು ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ಅವರ ಸೇವೆ ಏನ್ಎಂಬುದನ್ನು ಅವರೇ ತಿಳಿಸಲಿ ಎಂದರು.
‘ಐದು ವರ್ಷ ನಾನೇ ಸಿಎಂ’-ಸಿದ್ದರಾಮಯ್ಯ ದೃಢ ಹೇಳಿಕೆ
ಐದು ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೃಢವಾಗಿ ಹೇಳಿದ್ದಾರೆ.ಬಿಜೆಪಿಯವರು ನೀವು ಬೇಗ ಅಧಿಕಾರದಿಂದ ಇಳಿಯಲಿದ್ದೀರಿ ಎಂದು ಹೇಳುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ‘ಬಿಜೆಪಿಯವರು ನಮ್ಮ ಹೈಕಮಾಂಡಾ ಹೇಳಿ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು ಅವರೇನು ನಮ್ಮ ಹೈ ಕಮಾಂಡಾ ಇಲ್ಲವಲ್ಲ ಅವರೆಲ್ಲ ಬಿಜೆಪಿ ಪಕ್ಷದವರು ಅವರ ಅಭಿಪ್ರಾಯ ಅವರದು ನಮ್ಮಲ್ಲಿ ಯಾವುದೇ ಬಿನ್ನಾಭಿಪ್ರಾಯವಿಲ್ಲ ಸಂಪೂರ್ಣ 5ವರ್ಷ ನಾನೇ ಸಿಎಂ ಆಗಿ ಇರ್ತೀನಿ ಅಂದರು.
ಒಲಮೀಸಲಾತಿ ಸಮೀಕ್ಷೆ ಕುರಿತು ಮಾತನಾಡಿದ ಅವರು ಜಾತಿ ಸಮೀಕ್ಷೆಯನ್ನು ಪರಿಶಿಷ್ಟ ಸಮುದಾಯಕ್ಕೆ ಸಹಕಾರಿಯಾಗುವಂತೆ 3ಹಂತಗಳಲ್ಲಿ ಮಾಡಲಾಗುತ್ತಿದೆ.ಮನೆಬಾಗಿಲಿಗೆ ಅಧಿಕಾರಿಗಳ ಮೂಲಕ ಇಲ್ಲವೇ ಬೂತ್ ಮಟ್ಟದ ಸಭೆಗಳ ಮೂಲಕ ಅಲ್ಲದೇ ಆನ್ಲೈನ್ ನಲ್ಲೂ ಸಮೀಕ್ಷೆ ನೆಡೆಸುತ್ತಿದ್ದು ಜನರಿಗೆ ಯಾವುದು ಅನುಕೂಲವೋ ಆ ಮಾರ್ಗದಲ್ಲಿ ತಮ್ಮ ಜಾತಿ ನೋಂದಣಿ ಮಾಡಿಸಲಿ ಎಂದರು.