
ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘದಲ್ಲಿ ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವ ಛಲವಾದಿ ಸಮುದಾಯದ ಶ್ರೀಮತಿ ಎನ್, ಲೀಲಾವತಿ ಮತ್ತು ಶ್ರೀ ಟಿ, ಜೆ, ಶಿವಕುಮಾರ್ ರವರುಗಳಿಗೆ ಛಲವಾದಿ ಮಹಾಸಭಾ ದ ಪದಾಧಿಕಾರಿಗಳು ಅಭಿನಂದನೆಗಳನ್ನು ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷರಾದ ಸಿ ಗುರುರಾಜಪ್ಪ ಮಾತನಾಡಿ ನಮ್ಮ ಸಮುದಾಯದ ಏನ್.ಲೀಲಾವತಿ ಹಾಗೂ ಟಿ . ಜೆ.ಶಿವಕುಮಾರ್ ರವರು ದೊಡ್ಡಬಳ್ಳಾಪುರ ತಾಲ್ಲೂಕಿನ ವಕೀಲರ ಸಂಘದ ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವುದು ನಮ್ಮ ಸಮುದಾಯಕ್ಕೆ ಹೆಮ್ಮೆಯ ಸಂಗತಿಯಾಗಿದೆ ಸಮುದಾಯದ ಹಿತಾಸಕ್ತಿಗೆ ಶ್ರಮಿಸಲು ಅವರಲ್ಲಿ ಮನವಿ ಮಾಡುತ್ತೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿತಾಲ್ಲೂಕು ಅಧ್ಯಕ್ಷರಾದ ಸಿ, ಗುರುರಾಜಪ್ಪರವರು, ಪ್ರಧಾನ ಕಾರ್ಯದರ್ಶಿ ಡಿ, ಎನ್, ಎಲ್, ಎನ್, ಮೂರ್ತಿ, ದೊಡ್ಡಬೆಳವಂಗಲ ಹೋಬಳಿ ಘಟಕದ ಅಧ್ಯಕ್ಷರಾದ ಎನ್, ಉದಯ ಶಂಕರ್, ಇಂಜಿನಿಯರ್ ಕುಮಾರಸ್ವಾಮಿ, ಅಂಜಿನಮೂರ್ತಿ (ಶಿಕ್ಷಕರು ),ಮುನಿಯಪ್ಪ, ಮುನಿಕೃಷ್ಣ, ಸುರೇಶ್, ಹನುಮಂತರಾಜು, ಕಮಲಮ್ಮ, ಆನಂದ್, ನವೀನ್, ಶಿವಕುಮಾರ್ ಮುಂತಾದವರು ಭಾಗವಹಿಸಿದ್ದರು.